‘ಪೊಲೀಸ್ ಗಸ್ತು ನೇಮಿಸಿ’:‘ಸ್ವಚ್ಛತಾ ಅಭಿಯಾನದ ಸಂದರ್ಭದಲ್ಲಿ ಅಧಿಕಾರಿಗಳು, ಕುಮಟಾ ಮುನ್ಸಿಪಲ್ ವ್ಯಾಯಾಮ ಶಾಲೆ ವಿದ್ಯಾರ್ಥಿಗಳು, ಸಾರ್ವಜನಿಕರು, ಪರಿಸರಾಸಕ್ತರು ಇಲ್ಲಿ ಶುಚಿತ್ವ ಮಾಡುತ್ತಾರೆ. ಇಲ್ಲಿಗೆ ಬರುವ ಪ್ರಜ್ಞಾವಂತರು ಇಲ್ಲಿ ಇಟ್ಟಿರುವ ಕಸದ ತೊಟ್ಟಿಯಲ್ಲೇ ಕಸ ಹಾಕುತ್ತಾರೆ. ಆಗಾಗ ಅವು ತುಂಬಿ ತುಳುಕುತ್ತವೆ. ಪೊಲೀಸ್ ಗಸ್ತು ನೇಮಿಸದ ಹೊರತು ಹೊರಗಿನಿಂದ ಇಲ್ಲಿಗೆ ಬಂದು ಕುಡಿದು ಹೋಗುವವರ ಹಾವಳಿ ತಪ್ಪಿಸಲು ಅಸಾಧ್ಯ’ ಎನ್ನುವುದು ಅವರ ಸಲಹೆ.