ಕೆಂಡ ಹಾಯುವ ಪದ್ಧತಿ:ತಾಲ್ಲೂಕಿನಲ್ಲಿ ಮತ್ತೆಲ್ಲಿಯೂ ಇಲ್ಲದ ಅಗ್ನಿಕುಂಡವನ್ನು ದಾಟುವ ವಿಶೇಷ ಪದ್ಧತಿ ದುಧಗಾಳಿ ಕ್ಷೇತ್ರದಲ್ಲಿದೆ. ಎರಡು ದಿನ ಉಪವಾಸ ನಿರತ ಭಕ್ತರು, ಗರ್ಭಗುಡಿಯ ಎದುರಿನಲ್ಲಿ ನಿರ್ಮಿಸಿರುವ ಬೆಂಕಿಕೊಂಡದ ರಾಶಿಯಲ್ಲಿ ಹಾದುಹೋಗುತ್ತಾರೆ. ಜಾತ್ರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳ ಭಕ್ತರ ಜೊತೆಗೆ,ಹಳಿಯಾಳ ಹಾಗೂ ಕಾರವಾರ ತಾಲ್ಲೂಕುಗಳಿಂದ, ಗೋವಾ, ಮಹಾರಾಷ್ಟ್ರ ಭಾಗದಿಂದಅಪಾರ ಭಕ್ತರು ಬರುತ್ತಾರೆ. ಭಕ್ತರಿಗೆ ಅನ್ನಸಂತರ್ಪಣೆ, ರಾತ್ರಿ ‘ಕಾಮಾ ಪುರತೋ ಮಾಮಾ’ ಎಂಬ ಕೊಂಕಣಿ ನಾಟಕದ ಪ್ರದರ್ಶನವೂ ಇದೆ.