ಅಪಾಯದ ಪಯಣ:ಕಾಡುಕೋಣಗಳು, ಚಿಗರೆ, ಸಾರಂಗ, ವಿವಿಧಜಾತಿಯಸಸ್ತನಿಗಳು, ಆನೆಗಳು ಕೂಡಾ ಜಲಾಶಯದ ನೀರಿನತ್ತಓಡೋಡಿ ಬರುತ್ತಿವೆ. ಇದು ದಿನನಿತ್ಯದ ದೃಶ್ಯವಾಗಿದೆ. ಜೀವಜಲದ ದಾಹ ತೀರಿಸಿಕೊಳ್ಳುವ ಈ ಪಯಣದಲ್ಲಿ ರಸ್ತೆ ಅಂಚಿನಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪುವ ಸಂಭವ ಕೂಡ ಇದೆ.ಕಾಡು ಪ್ರಾಣಿಗಳುನಾಯಿ, ಕಳ್ಳ ಬೇಟೆಗಾರರ ಜಾಲಕ್ಕೆ ಸಿಲುಕುವ ಅಪಾಯವಿದೆ. ದಾರಿಯಲ್ಲಿ ಗಾಬರಿಯಾಗುವ ಕಾಡುಪ್ರಾಣಿಗಳು ಮನುಷ್ಯರಿಗೂ ಅಪಾಯ ತರುವ ಸಾಧ್ಯತೆಯಿದೆ.