<p><strong>ಕಾರವಾರ:</strong>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಅವರ ಚೊಚ್ಚಲ ಬಜೆಟ್ ಮಂಡನೆಯ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ವಿಶೇಷವಾಗಿ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಬಹುದೇ ಎಂಬ ಕುತೂಹಲ ಮೂಡಿದೆ.</p>.<p>ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ನಡೆದ ಮಧ್ಯಂತರ ಬಜೆಟ್ನಲ್ಲಿ ಕೂಡ ಇದೇ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಆಗ ಬಜೆಟ್ ಮಂಡಿಸಿದ್ದ ಪಿಯೂಷ್ ಗೋಯಲ್ ಅವರ ಭಾಷಣದಲ್ಲಿ ಯೋಜನೆಯ ಉಲ್ಲೇಖ ಇರಲಿಲ್ಲ. ಆದರೆ, ಈ ಬಾರಿ ಬೆಳಗಾವಿಯ ಸಂಸದಸುರೇಶ ಅಂಗಡಿರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ.</p>.<p>ರಾಜ್ಯಸಭೆಗೆ ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿಯಾಗಿದ್ದಾರೆ.ಹಾಗಾಗಿಈ ಯೋಜನೆಗೆ ಅನುಕೂಲವಾಗಬಹುದು ಎಂಬುದು ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಪ್ರಮುಖರ ಲೆಕ್ಕಾಚಾರವಾಗಿದೆ.</p>.<p>‘ಕಳೆದ ಬಾರಿ ಬಜೆಟ್ ಮಂಡನೆಗೂ ಮೊದಲು ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ್ದೆವು. ಆ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿಹೋರಾಟ ಆರಂಭಿಸಿದರೆ ಬೇರೆಯದೇ ಬಣ್ಣ ಪಡೆಯುತ್ತದೆ ಎಂದು ಸುಮ್ಮನಿದ್ದೆವು. ಈ ಬಾರಿಯ ಬಜೆಟ್ನಲ್ಲಿ ನಮಗೆ ಸ್ವಲ್ಪ ನಿರೀಕ್ಷೆಯಿದೆ’ ಎಂದು ಸಮಿತಿಯ ಕಾರ್ಯದರ್ಶಿ ವಿಠ್ಠಲದಾಸ್ ಕಾಮತ್ವಿವರಿಸಿದರು.</p>.<p>ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಾಗುವ ಈ ಯೋಜನೆ ಜಾರಿಯ ವಿಚಾರ ನ್ಯಾಯಾಲಯದಲ್ಲಿದೆ. ಆದ್ದರಿಂದ ಹೋರಾಟಗಾರರ ಬೇಡಿಕೆಗೆ ಬದಲಾಗಿ, ಜಿಲ್ಲೆಯ ಮೂಲಕ ಸಾಗುವ ಬೇರೆ ಹೊಸ ರೈಲು ಘೋಷಣೆ ಮಾಡಿ ಸಮಾಧಾನ ಮಾಡಬಹುದು ಎಂದೂ ಹೋರಾಟ ಸಮಿತಿಯ ಪ್ರಮುಖರು ಹೇಳುತ್ತಾರೆ.</p>.<p class="Subhead">ಯಾವುದೇ ನಿರೀಕ್ಷೆ ಹೊಂದಿಲ್ಲ: ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ, ನಿರ್ದಿಷ್ಟವಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ನಿರೀಕ್ಷೆ ಹೊಂದಿಲ್ಲ ಎನ್ನುತ್ತಾರೆ.</p>.<p>‘ಮೊದಲು ರೈಲ್ವೆ ಬಜೆಟ್ ಪ್ರತ್ಯೇಕವಿದ್ದಾಗ ಏನಾದರೂ ನಿರೀಕ್ಷಿಸಬಹುದಿತ್ತು. ಆದರೆ, ಈಗ ಎಲ್ಲವನ್ನು ಒಂದೇ ಬಜೆಟ್ನಡಿ ತಂದಿರುವ ಕಾರಣ ಅಂಕೋಲಾ– ಹುಬ್ಬಳ್ಳಿ ರೈಲು ಮಾರ್ಗದ ಬೇಡಿಕೆಗೆ ಮನ್ನಣೆ ಸಿಗುವ ನಿರೀಕ್ಷೆಯಿಲ್ಲ.ಒಂದುವೇಳೆ ಯೋಜನೆಯ ಬಗ್ಗೆ ಸಚಿವರು ಭಾಷಣದಲ್ಲಿ ಉಲ್ಲೇಖಿಸಿದರೆ ಸಂತೋಷ’ ಎಂದರು.</p>.<p>ಉಳಿದಂತೆ, ಬಂದರು, ರಾಷ್ಟ್ರೀಯ ಹೆದ್ದಾರಿ, ನಾಗರಿಕ ವಿಮಾನ ನಿಲ್ದಾಣ ಮುಂತಾದ ವಿಚಾರಗಳ ಬಗ್ಗೆ ಕೇಂದ್ರದ ಬಜೆಟ್ನಲ್ಲಿ ಪ್ರಸ್ತಾಪವಾಗಬಹುದೇ ಎಂಬ ಕುತೂಹಲವೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಅವರ ಚೊಚ್ಚಲ ಬಜೆಟ್ ಮಂಡನೆಯ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ವಿಶೇಷವಾಗಿ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಬಹುದೇ ಎಂಬ ಕುತೂಹಲ ಮೂಡಿದೆ.</p>.<p>ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ನಡೆದ ಮಧ್ಯಂತರ ಬಜೆಟ್ನಲ್ಲಿ ಕೂಡ ಇದೇ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಆಗ ಬಜೆಟ್ ಮಂಡಿಸಿದ್ದ ಪಿಯೂಷ್ ಗೋಯಲ್ ಅವರ ಭಾಷಣದಲ್ಲಿ ಯೋಜನೆಯ ಉಲ್ಲೇಖ ಇರಲಿಲ್ಲ. ಆದರೆ, ಈ ಬಾರಿ ಬೆಳಗಾವಿಯ ಸಂಸದಸುರೇಶ ಅಂಗಡಿರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ.</p>.<p>ರಾಜ್ಯಸಭೆಗೆ ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿಯಾಗಿದ್ದಾರೆ.ಹಾಗಾಗಿಈ ಯೋಜನೆಗೆ ಅನುಕೂಲವಾಗಬಹುದು ಎಂಬುದು ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಪ್ರಮುಖರ ಲೆಕ್ಕಾಚಾರವಾಗಿದೆ.</p>.<p>‘ಕಳೆದ ಬಾರಿ ಬಜೆಟ್ ಮಂಡನೆಗೂ ಮೊದಲು ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ್ದೆವು. ಆ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿಹೋರಾಟ ಆರಂಭಿಸಿದರೆ ಬೇರೆಯದೇ ಬಣ್ಣ ಪಡೆಯುತ್ತದೆ ಎಂದು ಸುಮ್ಮನಿದ್ದೆವು. ಈ ಬಾರಿಯ ಬಜೆಟ್ನಲ್ಲಿ ನಮಗೆ ಸ್ವಲ್ಪ ನಿರೀಕ್ಷೆಯಿದೆ’ ಎಂದು ಸಮಿತಿಯ ಕಾರ್ಯದರ್ಶಿ ವಿಠ್ಠಲದಾಸ್ ಕಾಮತ್ವಿವರಿಸಿದರು.</p>.<p>ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಾಗುವ ಈ ಯೋಜನೆ ಜಾರಿಯ ವಿಚಾರ ನ್ಯಾಯಾಲಯದಲ್ಲಿದೆ. ಆದ್ದರಿಂದ ಹೋರಾಟಗಾರರ ಬೇಡಿಕೆಗೆ ಬದಲಾಗಿ, ಜಿಲ್ಲೆಯ ಮೂಲಕ ಸಾಗುವ ಬೇರೆ ಹೊಸ ರೈಲು ಘೋಷಣೆ ಮಾಡಿ ಸಮಾಧಾನ ಮಾಡಬಹುದು ಎಂದೂ ಹೋರಾಟ ಸಮಿತಿಯ ಪ್ರಮುಖರು ಹೇಳುತ್ತಾರೆ.</p>.<p class="Subhead">ಯಾವುದೇ ನಿರೀಕ್ಷೆ ಹೊಂದಿಲ್ಲ: ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ, ನಿರ್ದಿಷ್ಟವಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ನಿರೀಕ್ಷೆ ಹೊಂದಿಲ್ಲ ಎನ್ನುತ್ತಾರೆ.</p>.<p>‘ಮೊದಲು ರೈಲ್ವೆ ಬಜೆಟ್ ಪ್ರತ್ಯೇಕವಿದ್ದಾಗ ಏನಾದರೂ ನಿರೀಕ್ಷಿಸಬಹುದಿತ್ತು. ಆದರೆ, ಈಗ ಎಲ್ಲವನ್ನು ಒಂದೇ ಬಜೆಟ್ನಡಿ ತಂದಿರುವ ಕಾರಣ ಅಂಕೋಲಾ– ಹುಬ್ಬಳ್ಳಿ ರೈಲು ಮಾರ್ಗದ ಬೇಡಿಕೆಗೆ ಮನ್ನಣೆ ಸಿಗುವ ನಿರೀಕ್ಷೆಯಿಲ್ಲ.ಒಂದುವೇಳೆ ಯೋಜನೆಯ ಬಗ್ಗೆ ಸಚಿವರು ಭಾಷಣದಲ್ಲಿ ಉಲ್ಲೇಖಿಸಿದರೆ ಸಂತೋಷ’ ಎಂದರು.</p>.<p>ಉಳಿದಂತೆ, ಬಂದರು, ರಾಷ್ಟ್ರೀಯ ಹೆದ್ದಾರಿ, ನಾಗರಿಕ ವಿಮಾನ ನಿಲ್ದಾಣ ಮುಂತಾದ ವಿಚಾರಗಳ ಬಗ್ಗೆ ಕೇಂದ್ರದ ಬಜೆಟ್ನಲ್ಲಿ ಪ್ರಸ್ತಾಪವಾಗಬಹುದೇ ಎಂಬ ಕುತೂಹಲವೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>