<p><strong>ಕಾರವಾರ: </strong>2020–21ನೇ ಸಾಲಿಗೆ ಜಿಲ್ಲಾ ಪಂಚಾಯ್ತಿಯ ಆಯವ್ಯಯದ ಅಂದಾಜು ಗಾತ್ರವು ₹ 1 ಸಾವಿರದ 36 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದು ₹ 953.96 ಕೋಟಿಯಾಗಿತ್ತು.</p>.<p>ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ಮೊಗೇರ ಆಯವ್ಯಯ ಮಂಡಿಸಿದರು. ಈ ಕರಡು ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಒಪ್ಪಿಗೆ ನೀಡಿದೆ.ಈ ವರ್ಷ ಯೋಜನೆ ಲೆಕ್ಕ ಶೀರ್ಷಿಕೆ ಮತ್ತು ಯೋಜನೇತರ ಲೆಕ್ಕ ಶೀರ್ಷಿಕ ಎಂಬ ಪ್ರತ್ಯೇಕ ವಿಂಗಡಣೆ ಇಲ್ಲ ಎಂದು ತಿಳಿಸಿದರು.</p>.<p>‘ಜಿಲ್ಲಾ ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 315.44 ಕೋಟಿ, ತಾಲ್ಲೂಕು ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 720.31 ಕೋಟಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 66 ಲಕ್ಷ ಒದಗಿಸಲಾಗಿದೆ. ಜಿಲ್ಲಾ ಪಂಚಾಯ್ತಿಯ ಹಾಗೂ ಅಧೀನ ಇಲಾಖೆಗಳ ಸಿಬ್ಬಂದಿಯ ವೇತನಕ್ಕೆ ₹ 101.17 ಕೋಟಿ, ಹೊರ ಗುತ್ತಿಗೆ ನೌಕರರ ವೇತನಕ್ಕೆ ₹ 80.8 ಕೋಟಿ, ದಿನಗೂಲಿ ನೌಕರರ ವೇತನಕ್ಕೆ ₹ 77.04 ಲಕ್ಷ ಹಾಗೂ ಕಚೇರಿ ವೆಚ್ಚ, ಅಭಿವೃದ್ಧಿ ಕಾರ್ಯಗಳಿಗೆ ₹ 205.40 ಕೋಟಿಯನ್ನು ವಿಂಗಡಿಸಲಾಗಿದೆ ಎಂದುಮಾಹಿತಿ ನೀಡಿದರು.</p>.<p class="Subhead"><strong>ಬಿಲ್ ಬಾಕಿ ಬಗ್ಗೆ ಚರ್ಚೆ: </strong>ಕಳೆದ ಸಾಲಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರು ಬಿಲ್ ಪಾವತಿಸುವಂತೆ ಪದೇಪದೇ ಕೇಳುತ್ತಿದ್ದಾರೆ. ಇದರಲ್ಲಿ ಲೋಪವಾಗಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<p>ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರತಿಕ್ರಿಯಿಸಿ, ‘ಇದರಲ್ಲಿತಪ್ಪು ಮಾಡಿದವರಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಖಜಾನೆಯು ಈ ವರ್ಷದ ಲೆಕ್ಕಪತ್ರಗಳಸ್ವೀಕಾರವನ್ನು ನಿಲ್ಲಿಸುವುದಾಗಿ ಮಾರ್ಚ್ 13ರಂದು ಪ್ರಕಟಣೆ ಬಂತು. ಅದಾದ ಬಳಿಕ10 ದಿನ ಅವಕಾಶ ನೀಡಲಾಯಿತು. ಗುತ್ತಿಗೆದಾರರಿಗೆ ಹಣ ಪಾವತಿಯ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಭರವಸೆ ನೀಡಿದರು.</p>.<p>ಇದೇವೇಳೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನು ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.ಶ್ರೀಕಲಾ ಶಾಸ್ತ್ರಿ ಮಾತನಾಡಿ, ‘ಮೊಹಮ್ಮದ್ ರೋಶನ್ ಅವರು ಭಟ್ಕಳದಆಸ್ಪತ್ರೆಗಳಿಗೇ ಭೇಟಿ ನೀಡಿಬಂದಿದ್ದಾರೆ. ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಈ ರೀತಿ ಮುಂದುವರಿಯುವುದು ಬಹಳ ಕಡಿಮೆ. ಕ್ರಿಮ್ಸ್ ವೈದ್ಯರು ಮತ್ತು ಸಿಬ್ಬಂದಿ ಐದು ತಿಂಗಳ ಮಗುವಿನಿಂದ ಹಿಡಿದು, 83 ವರ್ಷದ ಹಿರಿಯರ ತನಕ ವಿವಿಧ ಸೋಂಕಿತರನ್ನು ಗುಣಪಡಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>ಜಗದೀಶ ನಾಯಕ ಮೊಗಟಾ ಮಾತನಾಡಿ, ‘ಜಿಲ್ಲಾ ಪಂಚಾಯ್ತಿಯ ಸದಸ್ಯರನ್ನೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಪರಿಗಣಿಸಬೇಕಿತ್ತು. ಅಗತ್ಯ ಸಾಮಗ್ರಿಗಳವಿತರಣೆಗೆ ತೆರಳಿದಾಗಚೆಕ್ಪೋಸ್ಟ್ಗಳಲ್ಲಿ ಪಾಸ್ ಕೇಳುತ್ತಿದ್ದುದು ಮುಜುಗರ ತರುತ್ತಿತ್ತು’ ಎಂದರು.</p>.<p>ಆಲ್ಬರ್ಟ್ ಡಿಕೊಸ್ತ ಮಾತನಾಡಿ, ‘ಭಟ್ಕಳದಲ್ಲಿ ಲಾಕ್ಡೌನ್ ಸಂಬಂಧ ಕೇವಲ ಅಧಿಕಾರಿಗಳು ಸಭೆ ನಡೆಸಿದರು. ಅಧಿಕಾರ ವಿಕೇಂದ್ರೀಕರಣ ಮಾಡಿದ್ದರೆ ಎರಡನೇ ಹಂತದ ಲಾಕ್ಡೌನ್ ತಡೆಯಬಹುದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p class="Subhead">ಸ್ವಚ್ಛ ಭಾರತ – 2:ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮಗಳ ಬಗ್ಗೆ ಅಭಿಯಾನದ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದರು.</p>.<p>ಗೋಕರ್ಣದಲ್ಲಿ ಮಲತ್ಯಾಜ್ಯ ವಿಲೇವಾರಿ ಘಟಕಸ್ಥಾಪಿಸಲು ಉದ್ದೇಶಿಸಲಾಗಿದೆ. ಅದೇರೀತಿ, ಎಲ್ಲ ಗ್ರಾಮಗಳಲ್ಲಿಘನತ್ಯಾಜ್ಯ ವಿಲೇವಾರಿ ಘಟಕಗಳು, ಜೈವಿಕ ತ್ಯಾಜ್ಯಗಳ ನಿರ್ವಹಣೆ, ‘ಗೋಬರ್ಧನ್’ ಯೋಜನೆಯಡಿಜೈವಿಕ ಅನಿಲ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.</p>.<p>ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಚೈತ್ರಾ ಕೊಠಾಕರ್, ಬಸವರಾಜ ದೊಡ್ಮನಿ, ಉಷಾ ಉದಯ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>2020–21ನೇ ಸಾಲಿಗೆ ಜಿಲ್ಲಾ ಪಂಚಾಯ್ತಿಯ ಆಯವ್ಯಯದ ಅಂದಾಜು ಗಾತ್ರವು ₹ 1 ಸಾವಿರದ 36 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದು ₹ 953.96 ಕೋಟಿಯಾಗಿತ್ತು.</p>.<p>ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ಮೊಗೇರ ಆಯವ್ಯಯ ಮಂಡಿಸಿದರು. ಈ ಕರಡು ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಒಪ್ಪಿಗೆ ನೀಡಿದೆ.ಈ ವರ್ಷ ಯೋಜನೆ ಲೆಕ್ಕ ಶೀರ್ಷಿಕೆ ಮತ್ತು ಯೋಜನೇತರ ಲೆಕ್ಕ ಶೀರ್ಷಿಕ ಎಂಬ ಪ್ರತ್ಯೇಕ ವಿಂಗಡಣೆ ಇಲ್ಲ ಎಂದು ತಿಳಿಸಿದರು.</p>.<p>‘ಜಿಲ್ಲಾ ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 315.44 ಕೋಟಿ, ತಾಲ್ಲೂಕು ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 720.31 ಕೋಟಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 66 ಲಕ್ಷ ಒದಗಿಸಲಾಗಿದೆ. ಜಿಲ್ಲಾ ಪಂಚಾಯ್ತಿಯ ಹಾಗೂ ಅಧೀನ ಇಲಾಖೆಗಳ ಸಿಬ್ಬಂದಿಯ ವೇತನಕ್ಕೆ ₹ 101.17 ಕೋಟಿ, ಹೊರ ಗುತ್ತಿಗೆ ನೌಕರರ ವೇತನಕ್ಕೆ ₹ 80.8 ಕೋಟಿ, ದಿನಗೂಲಿ ನೌಕರರ ವೇತನಕ್ಕೆ ₹ 77.04 ಲಕ್ಷ ಹಾಗೂ ಕಚೇರಿ ವೆಚ್ಚ, ಅಭಿವೃದ್ಧಿ ಕಾರ್ಯಗಳಿಗೆ ₹ 205.40 ಕೋಟಿಯನ್ನು ವಿಂಗಡಿಸಲಾಗಿದೆ ಎಂದುಮಾಹಿತಿ ನೀಡಿದರು.</p>.<p class="Subhead"><strong>ಬಿಲ್ ಬಾಕಿ ಬಗ್ಗೆ ಚರ್ಚೆ: </strong>ಕಳೆದ ಸಾಲಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರು ಬಿಲ್ ಪಾವತಿಸುವಂತೆ ಪದೇಪದೇ ಕೇಳುತ್ತಿದ್ದಾರೆ. ಇದರಲ್ಲಿ ಲೋಪವಾಗಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<p>ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರತಿಕ್ರಿಯಿಸಿ, ‘ಇದರಲ್ಲಿತಪ್ಪು ಮಾಡಿದವರಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಖಜಾನೆಯು ಈ ವರ್ಷದ ಲೆಕ್ಕಪತ್ರಗಳಸ್ವೀಕಾರವನ್ನು ನಿಲ್ಲಿಸುವುದಾಗಿ ಮಾರ್ಚ್ 13ರಂದು ಪ್ರಕಟಣೆ ಬಂತು. ಅದಾದ ಬಳಿಕ10 ದಿನ ಅವಕಾಶ ನೀಡಲಾಯಿತು. ಗುತ್ತಿಗೆದಾರರಿಗೆ ಹಣ ಪಾವತಿಯ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಭರವಸೆ ನೀಡಿದರು.</p>.<p>ಇದೇವೇಳೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನು ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.ಶ್ರೀಕಲಾ ಶಾಸ್ತ್ರಿ ಮಾತನಾಡಿ, ‘ಮೊಹಮ್ಮದ್ ರೋಶನ್ ಅವರು ಭಟ್ಕಳದಆಸ್ಪತ್ರೆಗಳಿಗೇ ಭೇಟಿ ನೀಡಿಬಂದಿದ್ದಾರೆ. ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಈ ರೀತಿ ಮುಂದುವರಿಯುವುದು ಬಹಳ ಕಡಿಮೆ. ಕ್ರಿಮ್ಸ್ ವೈದ್ಯರು ಮತ್ತು ಸಿಬ್ಬಂದಿ ಐದು ತಿಂಗಳ ಮಗುವಿನಿಂದ ಹಿಡಿದು, 83 ವರ್ಷದ ಹಿರಿಯರ ತನಕ ವಿವಿಧ ಸೋಂಕಿತರನ್ನು ಗುಣಪಡಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>ಜಗದೀಶ ನಾಯಕ ಮೊಗಟಾ ಮಾತನಾಡಿ, ‘ಜಿಲ್ಲಾ ಪಂಚಾಯ್ತಿಯ ಸದಸ್ಯರನ್ನೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಪರಿಗಣಿಸಬೇಕಿತ್ತು. ಅಗತ್ಯ ಸಾಮಗ್ರಿಗಳವಿತರಣೆಗೆ ತೆರಳಿದಾಗಚೆಕ್ಪೋಸ್ಟ್ಗಳಲ್ಲಿ ಪಾಸ್ ಕೇಳುತ್ತಿದ್ದುದು ಮುಜುಗರ ತರುತ್ತಿತ್ತು’ ಎಂದರು.</p>.<p>ಆಲ್ಬರ್ಟ್ ಡಿಕೊಸ್ತ ಮಾತನಾಡಿ, ‘ಭಟ್ಕಳದಲ್ಲಿ ಲಾಕ್ಡೌನ್ ಸಂಬಂಧ ಕೇವಲ ಅಧಿಕಾರಿಗಳು ಸಭೆ ನಡೆಸಿದರು. ಅಧಿಕಾರ ವಿಕೇಂದ್ರೀಕರಣ ಮಾಡಿದ್ದರೆ ಎರಡನೇ ಹಂತದ ಲಾಕ್ಡೌನ್ ತಡೆಯಬಹುದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p class="Subhead">ಸ್ವಚ್ಛ ಭಾರತ – 2:ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮಗಳ ಬಗ್ಗೆ ಅಭಿಯಾನದ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದರು.</p>.<p>ಗೋಕರ್ಣದಲ್ಲಿ ಮಲತ್ಯಾಜ್ಯ ವಿಲೇವಾರಿ ಘಟಕಸ್ಥಾಪಿಸಲು ಉದ್ದೇಶಿಸಲಾಗಿದೆ. ಅದೇರೀತಿ, ಎಲ್ಲ ಗ್ರಾಮಗಳಲ್ಲಿಘನತ್ಯಾಜ್ಯ ವಿಲೇವಾರಿ ಘಟಕಗಳು, ಜೈವಿಕ ತ್ಯಾಜ್ಯಗಳ ನಿರ್ವಹಣೆ, ‘ಗೋಬರ್ಧನ್’ ಯೋಜನೆಯಡಿಜೈವಿಕ ಅನಿಲ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.</p>.<p>ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಚೈತ್ರಾ ಕೊಠಾಕರ್, ಬಸವರಾಜ ದೊಡ್ಮನಿ, ಉಷಾ ಉದಯ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>