<p><strong>ಗೋಕರ್ಣ: </strong>ಶಿವರಾತ್ರಿ ಎನ್ನುವ ಶಬ್ದವೇ ಮಂಗಲವನ್ನು ನೀಡುವ ರಾತ್ರಿಯೆನಿಸಿದೆ. ಇದು ಮಾಘಮಾಸ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಾಗಿದೆ. ಆ ದಿನ ರಾತ್ರಿ ಶಿವನು ಲಿಂಗ ರೂಪದಲ್ಲಿ ಆವಿರ್ಭವಿಸಿದ ಶುಭ ಕಾಲವಾಗಿದ್ದು, ಅದನ್ನು ಶಿವನು ಆವಿರ್ಭವಿಸಿದ ದಿನವೆಂದು ಶಿವರಾತ್ರಿಯನ್ನು ವ್ರತದಂತೆ ಆಚರಿಸಲಾಗುತ್ತದೆ.<br /> <br /> ಈ ದಿನವಿಡೀ ಉಪವಾಸವಿದ್ದು ರಾತ್ರಿಯ ಯಾಮಗಳಲ್ಲಿ ಜಾಗರಣೆ ಮಾಡುತ್ತಾ ಆಚರಿಸಲಾ ಗುತ್ತದೆ. ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಶಿವನಿಗೆ ರಾತ್ರಿ ಶಿವಯೋಗದ ವೇಳೆ (ಮಧ್ಯರಾತ್ರಿ) ವಿಶೇಷ ಪೂಜೆ ನಡೆಸಲಾಗುತ್ತದೆ.<br /> <br /> ವ್ರತವನ್ನಾಚರಿಸುವವರು ಮೊದಲು ಯಾಮದಲ್ಲಿ ‘ಶಿವ’ ಎಂಬ ಹೆಸರಿನಲ್್ಲೂ, ಎರಡನೇ ಯಾಮದಲ್ಲಿ ‘ಶಂಕರ’ ಎಂಬ ಹೆಸರಿನಿಂದಲೂ, ಮೂರನೇ ಯಾಮದಲ್ಲಿ ‘ಮಹೇಶ್ವರ’ ಎಂಬ ಹೆಸರಿನಿಂದ ಮತ್ತು ನಾಲ್ಕನೇ ಯಾಮದಲ್ಲಿ ‘ರುದ್ರ ಎಂಬ ಹೆಸರಿನಿಂದ ಶಿವನನ್ನು ಪೂಜಿಸಿ ಅರ್ಘ್ಯವನ್ನು ಬಿಡುತ್ತಾರೆ.<br /> <br /> ಶಿವನ ಪೂಜೆಯಲ್ಲಿ ತೈಲಾಭ್ಯಂಗ, ಪಂಚಾಮೃತ, ಉಷ್ಣೋದಕ, ಗಂಧೋದಕ ಸ್ನಾನ ಮೊದಲಾದವು ಗಳಿಂದ ಶಿವನನ್ನು ಪೂಜಿಸಲಾಗುತ್ತದೆ. ಗೋರೋಚನ, ಕಸ್ತೂರಿ, ಕುಂಕುಮ ಕರ್ಪೂರ, ಅಗರು ಚಂದನಗಳನ್ನು ಶಿವಲಿಂಗಕ್ಕೆ ಲೇಪಿಸಲಾಗು ತ್ತದೆ. ದತ್ತೂರ, ಕರವೀರ ಪುಷ್ಪಗಳು ಹಾಗೂ ಬಿಲ್ವಪತ್ರೆ ಶಿವಯೋಗದ ವೇಳೆ ಅತಿಶ್ರೇಷ್ಠವಾದವು.<br /> <br /> ಮರುದಿನ ಬೆಳಿಗ್ಗೆ ವ್ರತದ ಸಮಾಪ್ತಿಯಾಗುವಾಗ, ಸಂಸಾರದ ದುಃಖದಲ್ಲಿ ಬಿದ್ದಿರುವ ನನ್ನನ್ನು ಈ ವ್ರತದಿಂದ ಉದ್ಧರಿಸಿ ಜ್ಞಾನವನ್ನು ಕೊಡು ಎಂದು ಶಿವನಲ್ಲಿ ಪ್ರಾರ್ಥಿಸಲಾಗುತ್ತದೆ. ಏನೂ ಸಿಗದಿದ್ದರೂ ಶಿವನ ತಲೆಯ ಮೇಲೆ ಶಿವಯೋಗದ ದಿನ ಬಿಲ್ವಪತ್ರೆಯೊಂದನ್ನು ಅರ್ಚಿಸಿದರೂ ಅಶ್ವಮೇಧಾದಿ ಯಾದದಂತಹ ಪುಣ್ಯ ಪ್ರಾಪ್ತಿಯಾಗುವುದೆ ಎಂದು ಹೇಳಲಾಗಿದೆ.<br /> <br /> ಶ್ರೀಕ್ಷೇತ್ರ ಗೋಕರ್ಣದಲ್ಲೂ ಅತಿ ವಿಜೃಂಭಣೆ ಯಿಂದ ಶಿವರಾತ್ರಿ ಆಚರಿಸಲ್ಪಡುತ್ತದೆ. ಕ್ಷೇತ್ರದ ಶ್ರೀದೇವರಾದ ಸಾರ್ವಭೌಮ ಮಹಾಬಲೇಶ್ವರನನ್ನು ಈ ಸಂದರ್ಭದಲ್ಲಿ ಒಂಬತ್ತು ದಿನಗಳ ವಿಶೇಷ ಉತ್ಸವಗಳಿಂದ ಸುಪ್ರೀತಗೊಳಿಸಲಾಗುತ್ತದೆ.<br /> ಶಿವಯೋಗದ ದಿನ ಅಂದರೆ ಚತುದರ್ಶಿಯ ರಾತ್ರಿಯ ಪೂಜೆ ಅದರಲ್ಲಿ ಗೋಕರ್ಣದಲ್ಲಿ ವಿಶೇಷತೆ ಇದೆ. ಸ್ಕಂದ ಪುರಾಣದಲ್ಲಿ ಹೇಳಿರುವಂತೆ –<br /> ಗೋಕರ್ಣಂ ಬಿಲ್ವಪತ್ರಂ ಚ ಲಿಂಗರತ್ನಂ ಮಹಾಬಲ ||<br /> ಶಿವರಾತ್ರಿಸ್ತಥಾ ದೇವಾ ದುರ್ಲಭಂ ಹಿ ಚತುಷ್ಮಯಂ ||<br /> ಶ್ರೀ ಕ್ಷೇತ್ರ ಗೋಕರ್ಣ, ಬಿಲ್ವಪತ್ರೆ , ಲಿಂಗ ರತ್ನವಾದ ಮಹಾಬಲ, ಶಿವರಾತ್ರಿ, ಈ ನಾಲ್ಕೂ ಸೇರುವುದು ಅತ್ಯಂತ ದುರ್ಲಭವಾದುದು. aಇದರರ್ಥ ಭಕ್ತರು ಶಿವರಾತ್ರಿ ದಿನ ಗೋಕರ್ಣದಲ್ಲಿ ಬಿಲ್ವಪತ್ರೆಯಿಂದ ಮಹಾಬಲೇಶ್ವರ ಲಿಂಗರತ್ನವನ್ನು ಪೂಜಿಸುವುದು ಅತ್ಯಂತ ಶ್ರೇಷ್ಠವಾದುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ: </strong>ಶಿವರಾತ್ರಿ ಎನ್ನುವ ಶಬ್ದವೇ ಮಂಗಲವನ್ನು ನೀಡುವ ರಾತ್ರಿಯೆನಿಸಿದೆ. ಇದು ಮಾಘಮಾಸ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಾಗಿದೆ. ಆ ದಿನ ರಾತ್ರಿ ಶಿವನು ಲಿಂಗ ರೂಪದಲ್ಲಿ ಆವಿರ್ಭವಿಸಿದ ಶುಭ ಕಾಲವಾಗಿದ್ದು, ಅದನ್ನು ಶಿವನು ಆವಿರ್ಭವಿಸಿದ ದಿನವೆಂದು ಶಿವರಾತ್ರಿಯನ್ನು ವ್ರತದಂತೆ ಆಚರಿಸಲಾಗುತ್ತದೆ.<br /> <br /> ಈ ದಿನವಿಡೀ ಉಪವಾಸವಿದ್ದು ರಾತ್ರಿಯ ಯಾಮಗಳಲ್ಲಿ ಜಾಗರಣೆ ಮಾಡುತ್ತಾ ಆಚರಿಸಲಾ ಗುತ್ತದೆ. ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಶಿವನಿಗೆ ರಾತ್ರಿ ಶಿವಯೋಗದ ವೇಳೆ (ಮಧ್ಯರಾತ್ರಿ) ವಿಶೇಷ ಪೂಜೆ ನಡೆಸಲಾಗುತ್ತದೆ.<br /> <br /> ವ್ರತವನ್ನಾಚರಿಸುವವರು ಮೊದಲು ಯಾಮದಲ್ಲಿ ‘ಶಿವ’ ಎಂಬ ಹೆಸರಿನಲ್್ಲೂ, ಎರಡನೇ ಯಾಮದಲ್ಲಿ ‘ಶಂಕರ’ ಎಂಬ ಹೆಸರಿನಿಂದಲೂ, ಮೂರನೇ ಯಾಮದಲ್ಲಿ ‘ಮಹೇಶ್ವರ’ ಎಂಬ ಹೆಸರಿನಿಂದ ಮತ್ತು ನಾಲ್ಕನೇ ಯಾಮದಲ್ಲಿ ‘ರುದ್ರ ಎಂಬ ಹೆಸರಿನಿಂದ ಶಿವನನ್ನು ಪೂಜಿಸಿ ಅರ್ಘ್ಯವನ್ನು ಬಿಡುತ್ತಾರೆ.<br /> <br /> ಶಿವನ ಪೂಜೆಯಲ್ಲಿ ತೈಲಾಭ್ಯಂಗ, ಪಂಚಾಮೃತ, ಉಷ್ಣೋದಕ, ಗಂಧೋದಕ ಸ್ನಾನ ಮೊದಲಾದವು ಗಳಿಂದ ಶಿವನನ್ನು ಪೂಜಿಸಲಾಗುತ್ತದೆ. ಗೋರೋಚನ, ಕಸ್ತೂರಿ, ಕುಂಕುಮ ಕರ್ಪೂರ, ಅಗರು ಚಂದನಗಳನ್ನು ಶಿವಲಿಂಗಕ್ಕೆ ಲೇಪಿಸಲಾಗು ತ್ತದೆ. ದತ್ತೂರ, ಕರವೀರ ಪುಷ್ಪಗಳು ಹಾಗೂ ಬಿಲ್ವಪತ್ರೆ ಶಿವಯೋಗದ ವೇಳೆ ಅತಿಶ್ರೇಷ್ಠವಾದವು.<br /> <br /> ಮರುದಿನ ಬೆಳಿಗ್ಗೆ ವ್ರತದ ಸಮಾಪ್ತಿಯಾಗುವಾಗ, ಸಂಸಾರದ ದುಃಖದಲ್ಲಿ ಬಿದ್ದಿರುವ ನನ್ನನ್ನು ಈ ವ್ರತದಿಂದ ಉದ್ಧರಿಸಿ ಜ್ಞಾನವನ್ನು ಕೊಡು ಎಂದು ಶಿವನಲ್ಲಿ ಪ್ರಾರ್ಥಿಸಲಾಗುತ್ತದೆ. ಏನೂ ಸಿಗದಿದ್ದರೂ ಶಿವನ ತಲೆಯ ಮೇಲೆ ಶಿವಯೋಗದ ದಿನ ಬಿಲ್ವಪತ್ರೆಯೊಂದನ್ನು ಅರ್ಚಿಸಿದರೂ ಅಶ್ವಮೇಧಾದಿ ಯಾದದಂತಹ ಪುಣ್ಯ ಪ್ರಾಪ್ತಿಯಾಗುವುದೆ ಎಂದು ಹೇಳಲಾಗಿದೆ.<br /> <br /> ಶ್ರೀಕ್ಷೇತ್ರ ಗೋಕರ್ಣದಲ್ಲೂ ಅತಿ ವಿಜೃಂಭಣೆ ಯಿಂದ ಶಿವರಾತ್ರಿ ಆಚರಿಸಲ್ಪಡುತ್ತದೆ. ಕ್ಷೇತ್ರದ ಶ್ರೀದೇವರಾದ ಸಾರ್ವಭೌಮ ಮಹಾಬಲೇಶ್ವರನನ್ನು ಈ ಸಂದರ್ಭದಲ್ಲಿ ಒಂಬತ್ತು ದಿನಗಳ ವಿಶೇಷ ಉತ್ಸವಗಳಿಂದ ಸುಪ್ರೀತಗೊಳಿಸಲಾಗುತ್ತದೆ.<br /> ಶಿವಯೋಗದ ದಿನ ಅಂದರೆ ಚತುದರ್ಶಿಯ ರಾತ್ರಿಯ ಪೂಜೆ ಅದರಲ್ಲಿ ಗೋಕರ್ಣದಲ್ಲಿ ವಿಶೇಷತೆ ಇದೆ. ಸ್ಕಂದ ಪುರಾಣದಲ್ಲಿ ಹೇಳಿರುವಂತೆ –<br /> ಗೋಕರ್ಣಂ ಬಿಲ್ವಪತ್ರಂ ಚ ಲಿಂಗರತ್ನಂ ಮಹಾಬಲ ||<br /> ಶಿವರಾತ್ರಿಸ್ತಥಾ ದೇವಾ ದುರ್ಲಭಂ ಹಿ ಚತುಷ್ಮಯಂ ||<br /> ಶ್ರೀ ಕ್ಷೇತ್ರ ಗೋಕರ್ಣ, ಬಿಲ್ವಪತ್ರೆ , ಲಿಂಗ ರತ್ನವಾದ ಮಹಾಬಲ, ಶಿವರಾತ್ರಿ, ಈ ನಾಲ್ಕೂ ಸೇರುವುದು ಅತ್ಯಂತ ದುರ್ಲಭವಾದುದು. aಇದರರ್ಥ ಭಕ್ತರು ಶಿವರಾತ್ರಿ ದಿನ ಗೋಕರ್ಣದಲ್ಲಿ ಬಿಲ್ವಪತ್ರೆಯಿಂದ ಮಹಾಬಲೇಶ್ವರ ಲಿಂಗರತ್ನವನ್ನು ಪೂಜಿಸುವುದು ಅತ್ಯಂತ ಶ್ರೇಷ್ಠವಾದುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>