ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಲಾಖೆ ಸಹಾಯಕ ಎಂಜಿನಿಯರ್ ಸೋಮನಾಥ ಭಂಡಾರಿ, ‘ಹುಬ್ಬಳ್ಳಿಯ ಎಸ್ಸಾರ್ ಸಂಶೋಧನಾ ಪ್ರಯೋಗ ಶಾಲೆಯ ಸಿಬ್ಬಂದಿ ತಂಡ ಸಿಮೆಂಟ್ ತೊಲೆಗೆ ಅಳವಡಿಸಿದ್ದ ಕಬ್ಬಿಣದ ಪ್ರಮಾಣ, ಗುಣಮಟ್ಟ ಪರೀಕ್ಷಿಸುವ ಸ್ಕ್ಯಾನಿಂಗ್ ನಡೆಸಿದ್ದಾರೆ. ಸಿಮೆಂಟ್ ಬೀಮ್ನ ನಾಶ ತಡೆ ಪರೀಕ್ಷೆ (ಎನ್.ಡಿ.ಟೆಸ್ಟ್) ನಡೆಸಲಾಗಿದೆ. ಇದರಿಂದ ಸೇತುವೆ ಕಂಬದ ಮೇಲೆ ಇಟ್ಟಿದ್ದ ಸಿಮೆಂಟ್ ತೊಲೆ (ಬೀಮ್) ಗುಣಮಟ್ಟ ನಿಖರವಾಗಿ ಗೊತ್ತಾಗಲಿದೆ’ ಎಂದರು.