ಥೈವಾನ್ ದೇಶದಿಂದ ಬೀಜವನ್ನು ತರಿಸಿಕೊಂಡು ಕಿರಣ್, ಆರೋಹಿ, ವಿಶಾಲ್, ಕೃಷ್ಣ, ಸುಪ್ರಿತ್, ಅನಮೂಲ್ ತಳಿಯ ಕಲ್ಲಂಗಡಿಯನ್ನು ಬೆಳೆದಿದ್ದು ಅದರ ಜತೆ ಸವತೆ, ಮೊಗೆಕಾಯಿಯನ್ನು ಮಿಶ್ರಬೆಳೆಯಾಗಿ ಬೆಳೆದಿದ್ದಾರೆ. ಇವರ ಕಲ್ಲಂಗಡಿ ಹಣ್ಣುಗಳು ಗೋವಾ ಮತ್ತು ಕೇರಳದಲ್ಲಿ ಜನಪ್ರಿಯವಾಗಿದ್ದು ತಂಪುಪಾನೀಯ ತಯಾರಿಕೆಗೆ ಬಳಕೆಯಾಗುತ್ತಿವೆ. ಸ್ಥಳೀಯರೂ ತಮ್ಮ ತಮ್ಮ ಅಗತ್ಯಕ್ಕೆ ತಕ್ಕಂತೆ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.