ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಹಾಲಕ್ಕಿ ಮಹಿಳೆಯ ಶ್ರಮ ಶ್ಲಾಘಿಸಿದ ಆನಂದ್ ಮಹೀಂದ್ರ

ಅಂಕೋಲಾ ಬಸ್‌ನಿಲ್ದಾಣ: ಕಸ ಹೆಕ್ಕುವ ಕ್ರಮಕ್ಕೆ ಮೆಚ್ಚುಗೆ
Last Updated 12 ಏಪ್ರಿಲ್ 2023, 6:50 IST
ಅಕ್ಷರ ಗಾತ್ರ

ಅಂಕೋಲಾ (ಉತ್ತರ ಕನ್ನಡ): ಪಟ್ಟಣದ ಬಸ್ ನಿಲ್ದಾಣದಲ್ಲಿ ನೇರಳೆ ಹಣ್ಣು ಮಾರಾಟ ಮಾಡುವ ಹಾಲಕ್ಕಿ ಸಮುದಾಯದ ಮಹಿಳೆಯೊಬ್ಬರು ಪ್ರಯಾಣಿಕರು ಬಿಸಾಡುವ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸುತ್ತಿರುವುದಕ್ಕೆ ಉದ್ಯಮಿ ಆನಂದ್ ಮಹೀಂದ್ರ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳಸೆಯ ತೆಂಕನಾಡು ಗ್ರಾಮದ ಮೋಹಿನಿ ಕೃಷ್ಣಗೌಡ ಅವರು ಹಲವು ವರ್ಷಗಳಿಂದ ಬಸ್ ನಿಲ್ದಾಣದಲ್ಲಿ ನೇರಳೆ ಹಣ್ಣು ಸೇರಿದಂತೆ ಇನ್ನಿತರ ಕಾಡುಹಣ್ಣುಗಳನ್ನು ಎಲೆಗಳ ಪೊಟ್ಟಣದಲ್ಲಿ ಮಾರಾಟ ಮಾಡುತ್ತಾರೆ.

ಪ್ರಯಾಣಿಕರು ಬಿಸಾಡಿದ ಎಲೆಗಳನ್ನು ತಾವೇ ತೆಗೆದು ಕಸದ ಬುಟ್ಟಿಗೆ ಹಾಕುತ್ತಾರೆ. ಇದನ್ನು ಗಮನಿಸಿದ ಪ್ರಯಾಣಿಕ ಆದರ್ಶ ಹೆಗಡೆ, ಕಸದ ಬುಟ್ಟಿಗೆ ಎಲೆಗಳನ್ನು ಆಯ್ದು ಹಾಕುವ ದೃಶ್ಯವನ್ನು ಸೋಮವಾರ ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ ಅನ್ನು ಮಂಗಳವಾರ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರ, ‘ಇಂತಹವರಿಂದಲೇ ಸ್ವಚ್ಛ ಭಾರತ ಸಾಕಾರಗೊಳ್ಳುತ್ತಿದೆ. ಅವರ ಶ್ರಮ ವ್ಯರ್ಥವಾಗಬಾರದು. ಅಲ್ಲದೆ ಅವರ ಕೆಲಸಗಳು ಪ್ರಚಾರದಲ್ಲಿ ಹಿಂದುಳಿಯಬಾರದು. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಏನು ಮಾಡಬಹುದು ಎಂಬ ಸಲಹೆಗಳಿದ್ದರೆ ನೀಡಿ’ ಎಂದು ಬರೆದುಕೊಂಡಿದ್ದಾರೆ. ಆನಂದ್ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT