ದೇವಿಯ ವಿಗ್ರಹವನ್ನು ಭಟ್ಕಳದ ಮಲ್ಲಿಗೆಯಿಂದ ಅಲಂಕರಿಸುವ ಪದ್ಧತಿಯು ತಲೆತಲಾಂತರಗಳಿಂದ ನಡೆದು ಬಂದಿರುವ ಪದ್ಧತಿಯಾಗಿದೆ. ನವರಾತ್ರಿಯ ಪ್ರತಿದಿನ ಭಟ್ಕಳಕ್ಕೆ ಬರುವ ಒಂದು ಬಡಾವಣೆಯ ಜನ, ಪಟ್ಟಣದ ಹೂವಿನ ಮಾರುಕಟ್ಟೆಯಲ್ಲಿ ಸಂಚರಿಸುತ್ತಾರೆ. ಹೂವು ವ್ಯಾಪಾರಿಗಳು ನೀಡುವ ಹೂವು ಮತ್ತು ಕಾಣಿಕೆಯನ್ನು ಸ್ವೀಕರಿಸಿ ಅದನ್ನು ದೇಗುಲಕ್ಕೆ ಒಪ್ಪಿಸಿ ಬರುತ್ತಾರೆ. ಈ ಹಿಂದೆ ರಸ್ತೆಗಳಿಲ್ಲದ ಕಾಲದಲ್ಲಿ, ಹೂ ಮಾರಾಟ ಮಾಡುತ್ತಿದ್ದ ಗೋಪಾಲ ಎಂಬುವವರ ಮನೆಯಲ್ಲಿ ರಾತ್ರಿ ಉಳಿದುಕೊಂಡು, ಮುಂಜಾನೆ ಹೂ ತೆಗೆದುಕೊಂಡು ಹೋಗುತ್ತಿದ್ದರಂತೆ.