<p><strong>ಭಟ್ಕಳ:</strong> ಪಟ್ಟಣದ ಪಾಲಿನ ಬ್ರ್ಯಾಂಡ್ ಸ್ಥಳ ಎನಿಸಿದ್ದ ‘ಶಂಸುದ್ದೀನ್ ವೃತ್ತ’ ಇನ್ನು ನೆನಪು ಮಾತ್ರ. 25 ವರ್ಷಗಳಿಂದ ಭಟ್ಕಳದ ಹೆಗ್ಗುರುತಿನ ಭಾಗವಾಗಿದ್ದ ವೃತ್ತ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆಗೆ ಶನಿವಾರ ತೆರವುಗೊಂಡಿತು.</p>.<p>ಪಟ್ಟಣದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗೆ ಪಟ್ಟಣದ ಪ್ರವೇಶದ್ವಾರದಂತೆ 25 ವರ್ಷಗಳ ಹಿಂದೆ ನಿರ್ಮಿಸಿದ್ದ ವೃತ್ತವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ವೃತ್ತದ ಕಮಾನು, ಗೋಲಗಳನ್ನು ತೆರವುಗೊಳಿಸುವುದನ್ನು ಕಂಡು ನೆರೆದಿದ್ದವರು ಭಾವುಕರಾದರು.</p>.<p>‘ಭಟ್ಕಳದ ಗುರುತಿಗೆ ಶಂಸುದ್ದೀನ್ ವೃತ್ತದ ಗೋಪುರ ತೋರಿಸುವುದು ವಾಡಿಕೆ ಎಂಬಂತೆ ಆಗಿತ್ತು. ವೃತ್ತದ ಮಧ್ಯದ ಗೋಪುರವನ್ನು ಸಂಪೂರ್ಣ ಒಡೆದು ಹಾಕಿ ತೆರವು ಮಾಡಲಾಗಿದೆ. ಪಟ್ಟಣದ ಹೆಗ್ಗುರುತುಗಳಲ್ಲಿ ಒಂದೆನಿಸಿದ್ದ ಸ್ಥಳ ಇನ್ನು ನೋಡಲು ಸಿಗದು’ ಎಂದು ಸ್ಥಳದಲ್ಲಿದ್ದವರೊಬ್ಬರು ಬೇಸರ ತೋಡಿಕೊಂಡರು.</p>.<p>ನಾಲ್ಕು ರಸ್ತೆ ಒಂದೆ ಕಡೆ ಸೇರುವ ಶಂಸುದ್ದೀನ್ ವೃತ್ತದಲ್ಲಿನ ಗೋಪುರ ರಸ್ತೆ ದಾಟುವ ಪಾದಚಾರಿಗಳಿಗೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತಿತ್ತು. ಭಟ್ಕಳದ ಪ್ರತಿಷ್ಠಿತ ಗೋಲ್ಡನ್ ಜುವೆಲ್ಲರ್ಸ್ ಆಭರಣ ಮಳಿಗೆ ಮಾಲಿಕರು ಅಂದಾಜು ₹12 ಲಕ್ಷ ವೆಚ್ಚದಲ್ಲಿ ಗೋಪುರ ನಿರ್ಮಿಸಿದ್ದರು. ತಮ್ಮ ಅಂಗಡಿಯ ಸಂಕೇತವಾಗಿ ಗೋಪುರದ ಮಧ್ಯದಲ್ಲಿ ವೃತ್ತಾಕಾರದ ಎರಡು ಬಳೆಗಳನ್ನು ಇರಿಸಿ ಸುತ್ತಲೂ ಲೈಟಿಂಗ್ ವ್ಯವಸ್ಥೆ ಕಲ್ಪಿಸಿದ್ದರು.</p>.<p>ಭಟ್ಕಳದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮೀಯರ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಆಯಾ ಸಮುದಾಯವರು ವೃತ್ತದ ಗೋಪುರವನ್ನು ಲೈಟಿಂಗ್ಸ್ನಿಂದ ಸಿಂಗರಿಸುತ್ತಿದ್ದರು.</p>.<p>‘ಭಟ್ಕಳಕ್ಕೆ ಹೊಸದಾಗಿ ಬರುವವವರಿಗೆ ಸ್ವಾಗತ ನೀಡುವ ಹಾಗೂ ಭಟ್ಕಳದ ಗುರುತು ಪರಿಚಯಿಸುವ ಈ ಗೋಪುರವನ್ನು 2001ರಲ್ಲಿ ನಿರ್ಮಿಸಲಾಗಿತ್ತು. ಸಾಮಾನ್ಯ ವೃತ್ತದಂತೆ ಇರದೆ ಆಕರ್ಷಕ ಎನಿಸುತ್ತಿತ್ತು. ರಾಷ್ಟ್ರೀಯ ಹಬ್ಬ ಹರಿದಿನಗಳ ಸಂದರ್ಭದಲ್ಲಿ ತಾಲ್ಲೂಕಾಡಳಿತದಿಂದ ಈ ಗೋಪುರಕ್ಕೆ ಅಲಂಕಾರ ಮಾಡಲಾಗುತ್ತಿತ್ತು. ವಿಜಯೋತ್ಸವ, ಪ್ರತಿಭಟನೆ ನಡೆಯುವುದಿದ್ದರೆ ಗೋಪುರವೇ ಕೇಂದ್ರ ಸ್ಥಳ ಆಗುತ್ತಿತ್ತು’ ಎಂದು ಸ್ಥಳೀಯರು ಹೇಳುತ್ತಾರೆ.</p>.<p><strong>2001ರಲ್ಲಿ ಸ್ಥಾಪನೆಯಾಗಿದ್ದ ವೃತ್ತ ವೃತ್ತ ನಿರ್ಮಾಣಕ್ಕೆ ₹12 ಲಕ್ಷ ವೆಚ್ಚ ಜೆಸಿಬಿ ಬಳಸಿ ಕಮಾನು, ಗೋಲಗಳ ತೆರವು</strong></p>.<div><blockquote>ಭಟ್ಕಳದ ಮೆರಗು ಹೆಚ್ಚಿಸಲು 2002ರಲ್ಲಿ ನಮ್ಮ ಕುಟುಂಬದಿಂದ ಶಂಸುದ್ದೀನ್ ವೃತ್ತದ ಗೋಪುರವನ್ನು ನಿರ್ಮಿಸಲಾಗಿತ್ತು. ಈಗ ತೆರವು ಮಾಡಿರುವುದು ನಮಗೆ ಮಾತ್ರವಲ್ಲ ಸಮಸ್ತ ಭಟ್ಕಳಿಗರಿಗೆ ನಿರಾಸೆಯಾಗಿದೆ</blockquote><span class="attribution"> ಶಾಹಿಖ್ ಕೋಲಾ ಉದ್ಯಮಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ:</strong> ಪಟ್ಟಣದ ಪಾಲಿನ ಬ್ರ್ಯಾಂಡ್ ಸ್ಥಳ ಎನಿಸಿದ್ದ ‘ಶಂಸುದ್ದೀನ್ ವೃತ್ತ’ ಇನ್ನು ನೆನಪು ಮಾತ್ರ. 25 ವರ್ಷಗಳಿಂದ ಭಟ್ಕಳದ ಹೆಗ್ಗುರುತಿನ ಭಾಗವಾಗಿದ್ದ ವೃತ್ತ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆಗೆ ಶನಿವಾರ ತೆರವುಗೊಂಡಿತು.</p>.<p>ಪಟ್ಟಣದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗೆ ಪಟ್ಟಣದ ಪ್ರವೇಶದ್ವಾರದಂತೆ 25 ವರ್ಷಗಳ ಹಿಂದೆ ನಿರ್ಮಿಸಿದ್ದ ವೃತ್ತವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ವೃತ್ತದ ಕಮಾನು, ಗೋಲಗಳನ್ನು ತೆರವುಗೊಳಿಸುವುದನ್ನು ಕಂಡು ನೆರೆದಿದ್ದವರು ಭಾವುಕರಾದರು.</p>.<p>‘ಭಟ್ಕಳದ ಗುರುತಿಗೆ ಶಂಸುದ್ದೀನ್ ವೃತ್ತದ ಗೋಪುರ ತೋರಿಸುವುದು ವಾಡಿಕೆ ಎಂಬಂತೆ ಆಗಿತ್ತು. ವೃತ್ತದ ಮಧ್ಯದ ಗೋಪುರವನ್ನು ಸಂಪೂರ್ಣ ಒಡೆದು ಹಾಕಿ ತೆರವು ಮಾಡಲಾಗಿದೆ. ಪಟ್ಟಣದ ಹೆಗ್ಗುರುತುಗಳಲ್ಲಿ ಒಂದೆನಿಸಿದ್ದ ಸ್ಥಳ ಇನ್ನು ನೋಡಲು ಸಿಗದು’ ಎಂದು ಸ್ಥಳದಲ್ಲಿದ್ದವರೊಬ್ಬರು ಬೇಸರ ತೋಡಿಕೊಂಡರು.</p>.<p>ನಾಲ್ಕು ರಸ್ತೆ ಒಂದೆ ಕಡೆ ಸೇರುವ ಶಂಸುದ್ದೀನ್ ವೃತ್ತದಲ್ಲಿನ ಗೋಪುರ ರಸ್ತೆ ದಾಟುವ ಪಾದಚಾರಿಗಳಿಗೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತಿತ್ತು. ಭಟ್ಕಳದ ಪ್ರತಿಷ್ಠಿತ ಗೋಲ್ಡನ್ ಜುವೆಲ್ಲರ್ಸ್ ಆಭರಣ ಮಳಿಗೆ ಮಾಲಿಕರು ಅಂದಾಜು ₹12 ಲಕ್ಷ ವೆಚ್ಚದಲ್ಲಿ ಗೋಪುರ ನಿರ್ಮಿಸಿದ್ದರು. ತಮ್ಮ ಅಂಗಡಿಯ ಸಂಕೇತವಾಗಿ ಗೋಪುರದ ಮಧ್ಯದಲ್ಲಿ ವೃತ್ತಾಕಾರದ ಎರಡು ಬಳೆಗಳನ್ನು ಇರಿಸಿ ಸುತ್ತಲೂ ಲೈಟಿಂಗ್ ವ್ಯವಸ್ಥೆ ಕಲ್ಪಿಸಿದ್ದರು.</p>.<p>ಭಟ್ಕಳದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮೀಯರ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಆಯಾ ಸಮುದಾಯವರು ವೃತ್ತದ ಗೋಪುರವನ್ನು ಲೈಟಿಂಗ್ಸ್ನಿಂದ ಸಿಂಗರಿಸುತ್ತಿದ್ದರು.</p>.<p>‘ಭಟ್ಕಳಕ್ಕೆ ಹೊಸದಾಗಿ ಬರುವವವರಿಗೆ ಸ್ವಾಗತ ನೀಡುವ ಹಾಗೂ ಭಟ್ಕಳದ ಗುರುತು ಪರಿಚಯಿಸುವ ಈ ಗೋಪುರವನ್ನು 2001ರಲ್ಲಿ ನಿರ್ಮಿಸಲಾಗಿತ್ತು. ಸಾಮಾನ್ಯ ವೃತ್ತದಂತೆ ಇರದೆ ಆಕರ್ಷಕ ಎನಿಸುತ್ತಿತ್ತು. ರಾಷ್ಟ್ರೀಯ ಹಬ್ಬ ಹರಿದಿನಗಳ ಸಂದರ್ಭದಲ್ಲಿ ತಾಲ್ಲೂಕಾಡಳಿತದಿಂದ ಈ ಗೋಪುರಕ್ಕೆ ಅಲಂಕಾರ ಮಾಡಲಾಗುತ್ತಿತ್ತು. ವಿಜಯೋತ್ಸವ, ಪ್ರತಿಭಟನೆ ನಡೆಯುವುದಿದ್ದರೆ ಗೋಪುರವೇ ಕೇಂದ್ರ ಸ್ಥಳ ಆಗುತ್ತಿತ್ತು’ ಎಂದು ಸ್ಥಳೀಯರು ಹೇಳುತ್ತಾರೆ.</p>.<p><strong>2001ರಲ್ಲಿ ಸ್ಥಾಪನೆಯಾಗಿದ್ದ ವೃತ್ತ ವೃತ್ತ ನಿರ್ಮಾಣಕ್ಕೆ ₹12 ಲಕ್ಷ ವೆಚ್ಚ ಜೆಸಿಬಿ ಬಳಸಿ ಕಮಾನು, ಗೋಲಗಳ ತೆರವು</strong></p>.<div><blockquote>ಭಟ್ಕಳದ ಮೆರಗು ಹೆಚ್ಚಿಸಲು 2002ರಲ್ಲಿ ನಮ್ಮ ಕುಟುಂಬದಿಂದ ಶಂಸುದ್ದೀನ್ ವೃತ್ತದ ಗೋಪುರವನ್ನು ನಿರ್ಮಿಸಲಾಗಿತ್ತು. ಈಗ ತೆರವು ಮಾಡಿರುವುದು ನಮಗೆ ಮಾತ್ರವಲ್ಲ ಸಮಸ್ತ ಭಟ್ಕಳಿಗರಿಗೆ ನಿರಾಸೆಯಾಗಿದೆ</blockquote><span class="attribution"> ಶಾಹಿಖ್ ಕೋಲಾ ಉದ್ಯಮಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>