ಇದೇವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಡಾ.ನಿತಿನ್ ಪಿಕಳೆ, ‘ಕಾರವಾರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತೇನೆ. ನಾಗರಿಕರು ನೀಡಿರುವ ಈ ಜವಾಬ್ದಾರಿಗೆ ಸರಿಯಾಗಿ, ನಗರದ ಹಿರಿಮೆಯನ್ನು ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪಕ್ಷೇತರ ಮತ್ತು ಜೆಡಿಎಸ್ ಸದಸ್ಯರು ನೀಡಿರುವ ಬೇಷರತ್ ಬೆಂಬಲಕ್ಕೆ ಕೃತಜ್ಞತೆಗಳು. ಅವರು ನಗರದ ಅಭಿವೃದ್ಧಿಗಾಗಿ ಹೇಳಿರುವ ನಾಲ್ಕು ಬೇಡಿಕೆಗಳಲ್ಲಿ ಎಲ್ಲವೂ ಈಗಾಗಲೇ ಜಾರಿಯಲ್ಲಿವೆ. ಪ್ರಕ್ರಿಯೆಗಳು ಪೂರ್ಣಗೊಳ್ಳಲು ಸ್ವಲ್ಪ ದಿನ ಬೇಕಿದ್ದು, ಶಾಸಕಿ ಅದರ ಪ್ರಯತ್ನದಲ್ಲಿದ್ದಾರೆ’ ಎಂದು ಹೇಳಿದರು.