ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರವಾರ: ಅನಾಥ ಸ್ಥಿತಿಯಲ್ಲಿ ತೇಲುವ ಕಾಂಕ್ರೀಟ್ ಜಟ್ಟಿ

ಸಿ.ಆರ್.ಝಡ್ ಅನುಮತಿ ಪಡೆಯದೆ ಅಳವಡಿಕೆ: ಬಳಕೆಯಾಗದೆ ಮೂಲೆಗುಂಪಾದ ಗ್ಯಾಂಗ್ ವೇ
Published : 19 ಸೆಪ್ಟೆಂಬರ್ 2024, 5:14 IST
Last Updated : 19 ಸೆಪ್ಟೆಂಬರ್ 2024, 5:14 IST
ಫಾಲೋ ಮಾಡಿ
Comments
ನದಿ ದಡದಿಂದ ತೇಲುವ ಜಟ್ಟಿಗೆ ಸಂಪರ್ಕ ಕಲ್ಪಿಸುವ ಗ್ಯಾಂಗ್ ವೆ ಬಳಕೆಯಾಗದೆ ಬಿದ್ದಿದ್ದರಿಂದ ಅದರ ಮೇಲೆ ಬಳ್ಳಿಗಳು ಹಬ್ಬಿಕೊಂಡಿವೆ
ನದಿ ದಡದಿಂದ ತೇಲುವ ಜಟ್ಟಿಗೆ ಸಂಪರ್ಕ ಕಲ್ಪಿಸುವ ಗ್ಯಾಂಗ್ ವೆ ಬಳಕೆಯಾಗದೆ ಬಿದ್ದಿದ್ದರಿಂದ ಅದರ ಮೇಲೆ ಬಳ್ಳಿಗಳು ಹಬ್ಬಿಕೊಂಡಿವೆ
ತೇಲುವ ಕಾಂಕ್ರೀಟ್ ಜಟ್ಟಿಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಸಿ.ಆರ್.ಝಡ್ ಅನುಮತಿ ಸಿಕ್ಕ ಬಳಿಕ ಅದನ್ನು ಬಳಕೆಗೆ ನೀಡಲಾಗುತ್ತದೆ
ಎಂ.ವಿ.ಪ್ರಸಾದ್ ಬಂದರು ಜಲಸಾರಿಗೆ ಮಂಡಳಿಯ ಇಇ
ಜಟ್ಟಿ ಬಳಕೆಗೆ ಪಡೆಯಲು ಪೈಪೋಟಿ
ಕಾಳಿ ನದಿಯಲ್ಲಿ ಅಳವಡಿಕೆಯಾಗಿದ್ದ ತೇಲುವ ಕಾಂಕ್ರೀಟ್ ಜಟ್ಟಿ ಬಳಕೆಗೆ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ (ಜೆಎಲ್‍ಆರ್) ಮತ್ತು ಜನರಲ್ ತಿಮ್ಮಯ್ಯ ಜಲಸಾಹಸ ಅಕಾಡೆಮಿ (ಜೇತ್ನಾ) ಪೈಪೋಟಿಗೆ ಇಳಿದಿದ್ದವು. ಜಟ್ಟಿಯ ಸಮೀಪದಲ್ಲಿರುವ ಕಟ್ಟಡವನ್ನು ಈ ಹಿಂದೆ ಜೆಎಲ್‍ಆರ್ ಬಳಕೆಗೆ ನೀಡಲಾಗಿತ್ತು. ಕೆಲ ತಿಂಗಳ ಹಿಂದೆ ಅದನ್ನು ಜೇತ್ನಾ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಪ್ರವಾಸೋದ್ಯಮದ ದೃಷ್ಟಿಯಿಂದ ನಿರ್ಮಿಸಿದ ಜಟ್ಟಿ ತಮಗೆ ಬಳಕೆಗೆ ನೀಡುವಂತೆ ಜೆಎಲ್ಆರ್ ವಾದಿಸಿದ್ದರೆ ಜಲಸಾಹಸ ಚಟುವಟಿಕೆ ನಡೆಸಲು ಜಟ್ಟಿ ಅಗತ್ಯವಿದ್ದು ತಮಗೆ ಬಳಕೆಗೆ ನೀಡಬೇಕು ಎಂಬ ವಾದವನ್ನು ಜೇತ್ನಾ ಅಧಿಕಾರಿಗಳು ಮುಂದಿಟ್ಟಿದ್ದರು. ‘ಸಿ.ಆರ್.ಝಡ್ ಅನುಮತಿ ಸಿಕ್ಕ ಬಳಿಕ ಕಾಳಿನದಿಯ ಎರಡೂ ಕಡೆಯಲ್ಲಿ ಜಟ್ಟಿ ನಿರ್ಮಾಣ ಪೂರ್ಣಗೊಳ್ಳಲಿದೆ. ಆ ಬಳಿಕವೇ ಅದನ್ನು ಯಾರ ಬಳಕೆಗೆ ನೀಡಬೇಕು ಎಂಬುದು ಅಂತಿಮ ನಿರ್ಧಾರವಾಗಲಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT