<p><strong>ಕಾರವಾರ</strong>: ಬಾಡಿಗೆ ಮುಂಗಡ ಪಡೆದು ಬಸ್ ನೀಡದ ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ, ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ₹50 ಸಾವಿರ ದಂಡ ವಿಧಿಸಿ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.</p>.<p>ಕುಮಟಾ ಸಾರಿಗೆ ಘಟಕದ ನಿವೃತ್ತ ನೌಕರ ಶೇಷು ಹರಿಕಾಂತ ಎಂಬುವವರು 2022ರ ಜುಲೈ 15 ರಂದು ಖಾಸಗಿ ಕಾರ್ಯಕ್ರಮಕ್ಕೆ ತೆರಳಲು ₹21 ಸಾವಿರ ಮುಂಗಡ ಪಾವತಿಸಿ ಬಸ್ ಬಾಡಿಗೆಗೆ ನೀಡಲು ಕೋರಿದ್ದರು. ಮುಂಗಡ ಪಡೆದಿದ್ದರೂ ಬಸ್ ಬಾಡಿಗೆಗೆ ನೀಡಬೇಕಾದ ಮುನ್ನಾದಿನ ರಾತ್ರಿ ಬಸ್ ನೀಡಲಾಗದು ಎಂದು ಘಟಕ ವ್ಯವಸ್ಥಾಪಕ ವೈ.ಕೆ.ಬಾನಾವಳಿಕರ್ ನಿರಾಕರಿಸಿದ್ದರು ಎಂದು ಶೇಷು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಸದಸ್ಯೆ ನಯನಾ ಕಮತೆ ಅವರು ಪ್ರಕರಣದ ಪ್ರತಿವಾದಿಗಳಾಗಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ ಮತ್ತು ವಿಭಾಗೀಯ ಸಂಚಾರ ನಿಯಂತ್ರಕರಿಗೆ ₹50 ಸಾವಿರ ಪರಿಹಾರ ಪಾವತಿಸಬೇಕು ಮತ್ತು ದೂರುದಾರರು ಪಾವತಿಸಿದ್ದ ₹21 ಸಾವಿರ ಮೊತ್ತಕ್ಕೆ ಶೇ 7ರ ಬಡ್ಡಿ ಸೇರಿಸಿ ಅವರಿಗೆ ಹಣ ಮರಳಿಸಬೇಕು ಎಂದು ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಬಾಡಿಗೆ ಮುಂಗಡ ಪಡೆದು ಬಸ್ ನೀಡದ ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ, ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ₹50 ಸಾವಿರ ದಂಡ ವಿಧಿಸಿ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.</p>.<p>ಕುಮಟಾ ಸಾರಿಗೆ ಘಟಕದ ನಿವೃತ್ತ ನೌಕರ ಶೇಷು ಹರಿಕಾಂತ ಎಂಬುವವರು 2022ರ ಜುಲೈ 15 ರಂದು ಖಾಸಗಿ ಕಾರ್ಯಕ್ರಮಕ್ಕೆ ತೆರಳಲು ₹21 ಸಾವಿರ ಮುಂಗಡ ಪಾವತಿಸಿ ಬಸ್ ಬಾಡಿಗೆಗೆ ನೀಡಲು ಕೋರಿದ್ದರು. ಮುಂಗಡ ಪಡೆದಿದ್ದರೂ ಬಸ್ ಬಾಡಿಗೆಗೆ ನೀಡಬೇಕಾದ ಮುನ್ನಾದಿನ ರಾತ್ರಿ ಬಸ್ ನೀಡಲಾಗದು ಎಂದು ಘಟಕ ವ್ಯವಸ್ಥಾಪಕ ವೈ.ಕೆ.ಬಾನಾವಳಿಕರ್ ನಿರಾಕರಿಸಿದ್ದರು ಎಂದು ಶೇಷು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಸದಸ್ಯೆ ನಯನಾ ಕಮತೆ ಅವರು ಪ್ರಕರಣದ ಪ್ರತಿವಾದಿಗಳಾಗಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ ಮತ್ತು ವಿಭಾಗೀಯ ಸಂಚಾರ ನಿಯಂತ್ರಕರಿಗೆ ₹50 ಸಾವಿರ ಪರಿಹಾರ ಪಾವತಿಸಬೇಕು ಮತ್ತು ದೂರುದಾರರು ಪಾವತಿಸಿದ್ದ ₹21 ಸಾವಿರ ಮೊತ್ತಕ್ಕೆ ಶೇ 7ರ ಬಡ್ಡಿ ಸೇರಿಸಿ ಅವರಿಗೆ ಹಣ ಮರಳಿಸಬೇಕು ಎಂದು ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>