ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಸದಸ್ಯೆ ನಯನಾ ಕಮತೆ ಅವರು ಪ್ರಕರಣದ ಪ್ರತಿವಾದಿಗಳಾಗಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ ಮತ್ತು ವಿಭಾಗೀಯ ಸಂಚಾರ ನಿಯಂತ್ರಕರಿಗೆ ₹50 ಸಾವಿರ ಪರಿಹಾರ ಪಾವತಿಸಬೇಕು ಮತ್ತು ದೂರುದಾರರು ಪಾವತಿಸಿದ್ದ ₹21 ಸಾವಿರ ಮೊತ್ತಕ್ಕೆ ಶೇ 7ರ ಬಡ್ಡಿ ಸೇರಿಸಿ ಅವರಿಗೆ ಹಣ ಮರಳಿಸಬೇಕು ಎಂದು ಆದೇಶಿಸಿದೆ.