<p><strong>ಮುಂಡಗೋಡ</strong>: ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ಗೆ ಡಿ.12ರಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಆಗಮಿಸುವ ನಿಮಿತ್ತ ಬೌದ್ಧ ಗುರುವಿನ ಸ್ವಾಗತಕ್ಕೆ ಕ್ಯಾಂಪ್ನಲ್ಲಿ ಭರದ ಸಿದ್ಧತೆ ನಡೆದಿದೆ.</p>.<p>ಇಲ್ಲಿಯ ಟಿಬೆಟಿಯನ್ ಕ್ಯಾಂಪ್ನಲ್ಲಿ ದಲೈ ಲಾಮಾ ಅವರು ಒಂದೂವರೆ ತಿಂಗಳು ವಾಸ್ತವ್ಯ ಹೂಡಲಿದ್ದು, ಕ್ಯಾಂಪ್ ನಂ.6ರ ಕಾಂಪೌಂಡ್ ಗೋಡೆಗೆ ಬಣ್ಣ, ಉದ್ಯಾನಕ್ಕೆ ಹೊಸ ರೂಪ, ಕಾರಂಜಿ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳಿಂದ ‘ಮಿನಿ ಟಿಬೇಟ್’ ಸಿದ್ಧಗೊಳ್ಳುತ್ತಿದೆ.</p>.<p>ಅರುಣಾಚಲ, ಹಿಮಾಚಲ, ಲಡಾಖ್ ಭಾಗದ ಬೌದ್ಧ ಅನುಯಾಯಿಗಳು ಈಗಾಗಲೇ ಕ್ಯಾಂಪ್ಗೆ ಆಗಮಿಸುತ್ತಿದ್ದು, ವಲಸೆ ಹೋದ ಸ್ಥಳೀಯ ಟಿಬೆಟಿಯನ್ರು ಮರಳಿ ಬರುತ್ತಿದ್ದಾರೆ. </p>.<p>ಕೂಲಿ ಕಾರ್ಮಿಕರಿಗೆ ಕೈ ತುಂಬ ಕೆಲಸ: ‘ಟಿಬೆಟಿಯನ್ ಕ್ಯಾಂಪ್ನಲ್ಲಿ ಪೇಂಟರ್, ಕಾರ್ಪೆಂಟರಿ, ಕಟ್ಟಡ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದ್ದು, ನಿಗದಿತ ಅವಧಿಯೊಳಗೆ ಕೆಲಸ ಮುಗಿಸಲು ಹಗಲು ರಾತ್ರಿ ಕೆಲಸ ಮಾಡುವ ಅನಿವಾರ್ಯತೆಯಿದೆ’ ಎಂದು ಕಾರ್ಮಿಕ ಪೂರೈಕೆದಾರ ಮಂಜುನಾಥ ಹೇಳಿದರು.</p>.<p>‘ಬೌದ್ಧ ಮಂದಿರಗಳು ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ. ಕಾಲೊನಿ ವಿವಿಧೆಡೆ ಸ್ವಾಗತ ಕಮಾನು ಅಳವಡಿಸಲಾಗುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳ ಕುರಿತು ಅಧಿಕೃತ ಸೂಚನೆ ಇದುವರೆಗೂ ಬಂದಿಲ್ಲ’ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ</strong>: ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ಗೆ ಡಿ.12ರಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಆಗಮಿಸುವ ನಿಮಿತ್ತ ಬೌದ್ಧ ಗುರುವಿನ ಸ್ವಾಗತಕ್ಕೆ ಕ್ಯಾಂಪ್ನಲ್ಲಿ ಭರದ ಸಿದ್ಧತೆ ನಡೆದಿದೆ.</p>.<p>ಇಲ್ಲಿಯ ಟಿಬೆಟಿಯನ್ ಕ್ಯಾಂಪ್ನಲ್ಲಿ ದಲೈ ಲಾಮಾ ಅವರು ಒಂದೂವರೆ ತಿಂಗಳು ವಾಸ್ತವ್ಯ ಹೂಡಲಿದ್ದು, ಕ್ಯಾಂಪ್ ನಂ.6ರ ಕಾಂಪೌಂಡ್ ಗೋಡೆಗೆ ಬಣ್ಣ, ಉದ್ಯಾನಕ್ಕೆ ಹೊಸ ರೂಪ, ಕಾರಂಜಿ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳಿಂದ ‘ಮಿನಿ ಟಿಬೇಟ್’ ಸಿದ್ಧಗೊಳ್ಳುತ್ತಿದೆ.</p>.<p>ಅರುಣಾಚಲ, ಹಿಮಾಚಲ, ಲಡಾಖ್ ಭಾಗದ ಬೌದ್ಧ ಅನುಯಾಯಿಗಳು ಈಗಾಗಲೇ ಕ್ಯಾಂಪ್ಗೆ ಆಗಮಿಸುತ್ತಿದ್ದು, ವಲಸೆ ಹೋದ ಸ್ಥಳೀಯ ಟಿಬೆಟಿಯನ್ರು ಮರಳಿ ಬರುತ್ತಿದ್ದಾರೆ. </p>.<p>ಕೂಲಿ ಕಾರ್ಮಿಕರಿಗೆ ಕೈ ತುಂಬ ಕೆಲಸ: ‘ಟಿಬೆಟಿಯನ್ ಕ್ಯಾಂಪ್ನಲ್ಲಿ ಪೇಂಟರ್, ಕಾರ್ಪೆಂಟರಿ, ಕಟ್ಟಡ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದ್ದು, ನಿಗದಿತ ಅವಧಿಯೊಳಗೆ ಕೆಲಸ ಮುಗಿಸಲು ಹಗಲು ರಾತ್ರಿ ಕೆಲಸ ಮಾಡುವ ಅನಿವಾರ್ಯತೆಯಿದೆ’ ಎಂದು ಕಾರ್ಮಿಕ ಪೂರೈಕೆದಾರ ಮಂಜುನಾಥ ಹೇಳಿದರು.</p>.<p>‘ಬೌದ್ಧ ಮಂದಿರಗಳು ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ. ಕಾಲೊನಿ ವಿವಿಧೆಡೆ ಸ್ವಾಗತ ಕಮಾನು ಅಳವಡಿಸಲಾಗುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳ ಕುರಿತು ಅಧಿಕೃತ ಸೂಚನೆ ಇದುವರೆಗೂ ಬಂದಿಲ್ಲ’ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>