<p><strong>ದಾಂಡೇಲಿ:</strong> ನಗರದ ಆದಿ ಜಾಂಬುವಂತ ಸಂಘ ಮತ್ತು ಮಹಾ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೈನ್ಯ ವತಿಯಿಂದ ನಗರ ಸಭೆಯ ಆವರಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ 208ನೇ ಭೀಮಾ ಕೋರೆಗಾವ್ ವಿಜಯೋತ್ಸವವನ್ನು ಗುರುವಾರ ಆಚರಿಸಲಾಯಿತು.</p>.<p>ನಗರಸಭೆ ಪೌರಾಯುಕ್ತ ವಿವೇಕ ಬೆನ್ನೆ ಮಾತನಾಡಿ, 1818ರ ಜನವರಿ 1ರಂದು ಮಾರ್ ಸೈನಿಕರು ಬ್ರಿಟಿಷರೊಂದಿಗೆ ಯುದ್ಧ ಮಾಡಿದ ಗೆದ್ದ ದಿನವನ್ನೇ ಭೀಮಾ ಕೋರೆ ಗಾಂವ್ ವಿಜಯೋತ್ಸವ ಎಂದು ಆಚರಿಸಲಾಗುತ್ತದೆ ಎಂದರು.</p>.<p>ಆದಿ ಜಾಂಬುವಂತ ಸಂಘ ಹಾಗೂ ಮಹಾ ನಾಯಕ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸೇನೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಚಂದ್ರಕಾಂತ ನಡಗೇರ ಮಾತನಾಡಿ, ಇತಿಹಾಸದಲ್ಲಿ ಮುಚ್ಚಿಟ್ಟಿರುವುದನ್ನು ಅಂಬೇಡ್ಕರ್ ಬ್ರಿಟನಲ್ಲಿ ಅಧ್ಯಯನ ಮಾಡುವಾಗ ಗ್ರಂಥಾಲಯದಲ್ಲಿ ಈ ಯುದ್ಧ ಕುರಿತು ಮಾಹಿತಿ ಸಿಕ್ಕಿದೆ. ಈ ಯುದ್ಧದ ಕುರಿತು ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ ಎಂದರು.</p>.<p>ಸಂಘದ ಪ್ರಮುಖರಾದ ಶ್ರೀನಿತ್ಯ ಕಾಂಬ್ಳೆ, ಆಯಿಶಾ ಮೋಕಾಶಿ, ರೇಣುಕಾ ಭಜಂತ್ರಿ, ಲಕ್ಷ್ಮಿ ಹರಿಜನ, ದತ್ತು ಮಾಳಗೆ , ಸದಾಶಿವ ಕಾಂಬಳೆ, ಸುರೇಶ ಕೇದಾರಿ, ಸತೀಶ ಚೌಹಾನ, ಬಸವರಾಜ ಹರಿಜನ, ಹನುಮಂತ ಹರಿಜನ, ದ್ಯಾಮಣ್ಣ ಹರಿಜನ, ಸುರೇಶ್, ಶಿವಾಜಿ ಕಾಂಬಳೆ, ಅನಿಲ್ ಕಾಂಬ್ಳೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಂಡೇಲಿ:</strong> ನಗರದ ಆದಿ ಜಾಂಬುವಂತ ಸಂಘ ಮತ್ತು ಮಹಾ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೈನ್ಯ ವತಿಯಿಂದ ನಗರ ಸಭೆಯ ಆವರಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ 208ನೇ ಭೀಮಾ ಕೋರೆಗಾವ್ ವಿಜಯೋತ್ಸವವನ್ನು ಗುರುವಾರ ಆಚರಿಸಲಾಯಿತು.</p>.<p>ನಗರಸಭೆ ಪೌರಾಯುಕ್ತ ವಿವೇಕ ಬೆನ್ನೆ ಮಾತನಾಡಿ, 1818ರ ಜನವರಿ 1ರಂದು ಮಾರ್ ಸೈನಿಕರು ಬ್ರಿಟಿಷರೊಂದಿಗೆ ಯುದ್ಧ ಮಾಡಿದ ಗೆದ್ದ ದಿನವನ್ನೇ ಭೀಮಾ ಕೋರೆ ಗಾಂವ್ ವಿಜಯೋತ್ಸವ ಎಂದು ಆಚರಿಸಲಾಗುತ್ತದೆ ಎಂದರು.</p>.<p>ಆದಿ ಜಾಂಬುವಂತ ಸಂಘ ಹಾಗೂ ಮಹಾ ನಾಯಕ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸೇನೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಚಂದ್ರಕಾಂತ ನಡಗೇರ ಮಾತನಾಡಿ, ಇತಿಹಾಸದಲ್ಲಿ ಮುಚ್ಚಿಟ್ಟಿರುವುದನ್ನು ಅಂಬೇಡ್ಕರ್ ಬ್ರಿಟನಲ್ಲಿ ಅಧ್ಯಯನ ಮಾಡುವಾಗ ಗ್ರಂಥಾಲಯದಲ್ಲಿ ಈ ಯುದ್ಧ ಕುರಿತು ಮಾಹಿತಿ ಸಿಕ್ಕಿದೆ. ಈ ಯುದ್ಧದ ಕುರಿತು ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ ಎಂದರು.</p>.<p>ಸಂಘದ ಪ್ರಮುಖರಾದ ಶ್ರೀನಿತ್ಯ ಕಾಂಬ್ಳೆ, ಆಯಿಶಾ ಮೋಕಾಶಿ, ರೇಣುಕಾ ಭಜಂತ್ರಿ, ಲಕ್ಷ್ಮಿ ಹರಿಜನ, ದತ್ತು ಮಾಳಗೆ , ಸದಾಶಿವ ಕಾಂಬಳೆ, ಸುರೇಶ ಕೇದಾರಿ, ಸತೀಶ ಚೌಹಾನ, ಬಸವರಾಜ ಹರಿಜನ, ಹನುಮಂತ ಹರಿಜನ, ದ್ಯಾಮಣ್ಣ ಹರಿಜನ, ಸುರೇಶ್, ಶಿವಾಜಿ ಕಾಂಬಳೆ, ಅನಿಲ್ ಕಾಂಬ್ಳೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>