ಕಷ್ಟಪಟ್ಟು ಬೆಳೆದ ಭತ್ತದ ಬೆಳೆಯನ್ನು ಕಳೆದುಕೊಳ್ಳುವ ಚಿಂತೆಯಲ್ಲಿ, ರೈತರು ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಶನಿವಾರದಿಂದಲೇ ಮೋಡ ಮುಸುಕಿದ ವಾತಾವರಣವಿದೆ. ಭಾನುವಾರ ರಾಮನಗರ ಭಾಗದಲ್ಲಿ ಸುಮಾರು ಎರಡು ಗಂಟೆಮಳೆಯಾಗಿದೆ. ಸೋಮವಾರ ಗುಂದ, ಅಣಶಿ ಹಾಗೂ ನುಜ್ಜಿ ಭಾಗಗಳಲ್ಲಿ ಮಳೆಯಾಗಿದೆ. ಮಂಗಳವಾರ ಜೊಯಿಡಾ, ಕುಂಬಾರವಾಡ ಹಾಗೂ ಡಿಗ್ಗಿ ಸುತ್ತಮುತ್ತಮಳೆಯಾಗಿರುವುದು ರೈತರಲ್ಲಿ ಚಿಂತೆ ಮೂಡಿಸಿದೆ.