ಕೊರೊನಾ ಸೋಂಕು ಹರಡುವ ಭೀತಿಯ ಮಧ್ಯೆಯೂ ಬಸ್ ಚಾಲಕರು ತಮ್ಮ ಕರ್ತವ್ಯಪ್ರಜ್ಞೆಯನ್ನು ಮೆರೆದಿದ್ದರು. 240ಕ್ಕೂ ಅಧಿಕ ಕಾರ್ಮಿಕರನ್ನು ಅವರ ಊರು ತಲುಪಲು ಸಹಕರಿಸಿದ್ದರು. ಕಾರವಾರ ಮತ್ತು ಅಂಕೋಲಾ ಬಸ್ ಡಿಪೊಗಳ 14 ಚಾಲಕರು ರಾಜ್ಯದ ವಿವಿಧ ಭಾಗಗಳಿಗೆ ಬಸ್ ಚಾಲನೆ ಮಾಡಿದ್ದರು.ಈ ಕಾರ್ಯಕ್ಕಾಗಿ ಕಾರವಾರ ಬಸ್ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಧನ್ಯವಾದ ಸಲ್ಲಿಸಿದರು.