‘ಫೆಬ್ರುವರಿಯಿಂದ ಬೆಂಕಿ ಬೀಳುವ ಪ್ರಕರಣ ಹೆಚ್ಚಾಗುವ ಕಾರಣಕ್ಕೆ ಡಿಸೆಂಬರ್, ಜನೆವರಿ ಹೊತ್ತಿಗಾಗಲೇ ಜಾಗೃತಿ ಕಾರ್ಯಕ್ರಮ ಪೂರ್ಣಗೊಳಿಸಿದೆವು. ‘ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ’ ಈ ಘೋಷವಾಕ್ಯ, ವನ್ಯಜೀವಿ, ಕಾಡಿನ ಚಿತ್ರವಿರುವ ಕ್ಯಾಲೆಂಡರ್ ನಿತ್ಯ ಬೆಳಗಾದರೆ ಮನೆಯ ಜಗುಲಿಯಲ್ಲಿ ಕಣ್ಣಿಗೆ ಬೀಳುವುದರಿಂದ, ಕಾಡಿನೊಡನೆ ಬಂಧ, ಜಾಗೃತಿಯ ಪ್ರಜ್ಞೆ ಜನರಲ್ಲಿ ಮೂಡುತ್ತದೆ ಎಂಬ ಆಶಯ ನಮ್ಮದಾಗಿತ್ತು. ಇದಕ್ಕೆ ನಿರೀಕ್ಷಿತ ಫಲಿತಾಂಶವೂ ದೊರೆತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.