‘ಗ್ರಾಮಸ್ಥರು ಯಾವುದೇ ಆಯುಧ ಹಿಡಿದು ಅರಣ್ಯ ಪ್ರವೇಶಿಸುವಂತಿಲ್ಲ. ತರಗೆಲೆ ಕೈಯಲ್ಲಿ ಮುರಿದುಕೊಂಡು ಬರುವಂಥ ಒಣ ಕಟ್ಟಿಗೆ ಮಾತ್ರ ತರಬಹುದಾಗಿದೆ. ಮನೆ ಕೊಟ್ಟಿಗೆ ಕಟ್ಟಲು ಒಣ ಮರ ಬೇಕಿದ್ದರೆ ಮೊದಲೇ ಅರ್ಜಿ ಕೊಡಬೇಕು. ಪ್ರತೀ ಕುಟುಂಬದವರೂ ಈ ಪ್ರಯೋಜನ ಪಡೆಯಬಹುದಾಗಿದೆ. ಪ್ರತಿ ವರ್ಷ ಶ್ರಮದಾನ ಮೂಲಕ ಸಂಸ್ಥೆಯ ಕಾಡಿನಲ್ಲಿ ಗಿಡ ನೆಡುವ ಶುಚಿಗೊಳಿಸುವ ಕಾರ್ಯಕ್ಕೆ ಮನೆಗೊಬ್ಬ ಸದಸ್ಯರು ಬರುವುದು ಕಡ್ಡಾಯ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವ ಪರಿಣಾಮದಿಂದ ಕುಮಟಾ ಪಟ್ಟಣ ಮಧ್ಯೆ ಇಂಥ ವಿಶಿಷ್ಟ ಅರಣ್ಯ ಉಳಿದುಕೊಂಡಿದೆ’ ಎಂದು ವಿ.ಎಫ್.ಪಿ ಕಾರ್ಯದರ್ಶಿ ಶಾಂತಾರಾಮ ಹರಿಕಂತ್ರ ಹೇಳುತ್ತಾರೆ.