ಕಾರವಾರ ತಾಲ್ಲೂಕಿನ ಮಾಜಾಳಿ ಸಮೀಪದಲ್ಲಿರುವ ಕಪ್ಪು ಮರಳಿನ ತೀಳಮಾತಿ ಕಡಲತೀರ
ತೀಳಮಾತಿ ಕಡಲತೀರಕ್ಕೆ ತೂಗುಸೇತುವೆಗೆ ಅನುದಾನ ಮಂಜೂರು ಮಾಡಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಲಾಗುವುದು. ಮೀನುಗಾರಿಕೆ ಬಂದರು ಯೋಜನೆಯಿಂದ ತೂಗುಸೇತುವೆಗೆ ಅಡ್ಡಿಯಾಗದಂತೆ ಯೋಜನೆಗೆ ಮಾರ್ಪಾಡು ಮಾಡಲು ಒತ್ತಾಯಿಸಲಾಗುವುದು
ಸತೀಶ ಸೈಲ್ ಶಾಸಕ
ತೂಗು ಸೇತುವೆ ಏಕೆ?
ತೀಳಮಾತಿ ಕಡಲತೀರಕ್ಕೆ ಸಾಗಲು ಮಾಜಾಳಿಯ ಗಾಬೀತವಾಡಾ ಕಡಲತೀರದಿಂದ ಸುಮಾರು ಒಂದೂವರೆ ಕಿ.ಮೀ. ದೂರ ಗುಡ್ಡ ಹತ್ತಿ ಸಾಗಬೇಕು. ಕಡಿದಾದ ರಸ್ತೆಯಲ್ಲಿ ಸಾಗುವುದು ಅಪಾಯಕಾರಿಯೂ ಹೌದು. ಸಮುದ್ರದ ಅಲೆಗಳು ಅಬ್ಬರಿಸಿದರೆ ರಸ್ತೆಯೂ ಕಡಿತಗೊಳ್ಳುತ್ತದೆ. ಅಲ್ಲದೆ ಮಕ್ಕಳು ವೃದ್ಧರು ಮಹಿಳೆಯರು ಕಡಿದಾದ ದಾರಿಯಲ್ಲಿ ಸಾಗುವುದೂ ಕಷ್ಟವಿದೆ. ಇದೇ ಕಾರಣಕ್ಕೆ ಸೇತುವೆ ಅಥವಾ ತೂಗು ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆಯೂ ಇದೆ.