<p><strong>ಹಳಿಯಾಳ</strong>: ಇಲ್ಲಿನ ಪೇಟೆ ಮಧ್ಯದಲ್ಲಿರುವ ಮಾರುತಿ ಮಂದಿರದಲ್ಲಿ ಪಟ್ಟಣದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಸೂರ್ಯೋದಯದ ವೇಳೆ ಹನುಮನನ್ನು ತೊಟ್ಟಿಲಲ್ಲಿ ಹಾಕಿ ತೊಟ್ಟಿಲು ತೂಗಿದರು. ಸುಮಂಗಲೆಯರು ಆರತಿ ಬೆಳಗಿದ ನಂತರ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಅನೇಕ ಭಕ್ತರು ವಿವಿಧ ಖಾದ್ಯಗಳ ಪ್ರಸಾದವನ್ನು ನೆರೆದಿದ್ದ ಭಕ್ತರಿಗೆ ವಿತರಿಸಿದರು.</p>.<p>ದೇವಸ್ಥಾನದ ವತಿಯಿಂದ ಸಾರ್ವಜನಿಕರಿಗೆ ಬೆಳ್ಳಿಗ್ಗೆಯಿಂದಲೇ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹನುಮಾನ ಜಯಂತಿ ಉತ್ಸವದ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರ ಹಾಗೂ ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು.</p>.<p>ಪಟ್ಟಣದ ಸಾರಿಗೆ ನಿಲ್ದಾಣದಲ್ಲಿರುವ ಹನುಮಾನ ಮಂದಿರ, ದುರ್ಗಾನಗರದ ಮಾರುತಿ ಮಂದಿರ, ಗುಡ್ನಾಪುರ ಆಶ್ರಯ ಕಾಲೋನಿಯ ಕೈಲಾಸ ರೋಡ ಮಾರುತಿ, ಧಾರವಾಡ ರಸ್ತೆಯ ಬಳಿ ಹನುಮಾನ ಮಂದಿರ ಮತ್ತಿತರೆಡೆ ಹನುಮಾನ ಜಯಂತಿ ಆಚರಣೆ ಮಾಡಲಾಯಿತು.</p>.<p>ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗಗಳಾದ ಹವಗಿ, ತಿಮ್ಮಾಪುರ, ಭಾಗವತಿ, ಬೆಳವಟಗಿ, ಆಲೂರು, ಕಾವಲವಾಡ, ಬಿ.ಕೆ.ಹಳ್ಳಿ, ಅರ್ಲವಾಡ, ತೇರಗಾಂವ, ಮುರ್ಕವಾಡ, ಯಡೋಗಾ, ಮಂಗಳವಾಡ, ಸಾತನಳ್ಳಿ, ಜನಗಾ, ನಂದಿಗದ್ದಾ, ಮತ್ತಿತರ ಗ್ರಾಮ ಗಳಲ್ಲಿನ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿಯನ್ನು ಆಚರಿಸಲಾಯಿತು.</p>.<p>ಗ್ರಾಮೀಣ ಭಾಗದಲ್ಲಿಯ ಕೆಲವು ಮಂದಿರಗಳಲ್ಲಿ ಬೆಳ್ಳಿಗ್ಗೆಯಿಂದಲೇ ಹನುಮ ನಾಮ ಜಪ, ಉಪಾಸನೆ, ಕೀರ್ತನೆ, ಭಜನೆಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳಿಯಾಳ</strong>: ಇಲ್ಲಿನ ಪೇಟೆ ಮಧ್ಯದಲ್ಲಿರುವ ಮಾರುತಿ ಮಂದಿರದಲ್ಲಿ ಪಟ್ಟಣದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.</p>.<p>ಸೂರ್ಯೋದಯದ ವೇಳೆ ಹನುಮನನ್ನು ತೊಟ್ಟಿಲಲ್ಲಿ ಹಾಕಿ ತೊಟ್ಟಿಲು ತೂಗಿದರು. ಸುಮಂಗಲೆಯರು ಆರತಿ ಬೆಳಗಿದ ನಂತರ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಅನೇಕ ಭಕ್ತರು ವಿವಿಧ ಖಾದ್ಯಗಳ ಪ್ರಸಾದವನ್ನು ನೆರೆದಿದ್ದ ಭಕ್ತರಿಗೆ ವಿತರಿಸಿದರು.</p>.<p>ದೇವಸ್ಥಾನದ ವತಿಯಿಂದ ಸಾರ್ವಜನಿಕರಿಗೆ ಬೆಳ್ಳಿಗ್ಗೆಯಿಂದಲೇ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹನುಮಾನ ಜಯಂತಿ ಉತ್ಸವದ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರ ಹಾಗೂ ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು.</p>.<p>ಪಟ್ಟಣದ ಸಾರಿಗೆ ನಿಲ್ದಾಣದಲ್ಲಿರುವ ಹನುಮಾನ ಮಂದಿರ, ದುರ್ಗಾನಗರದ ಮಾರುತಿ ಮಂದಿರ, ಗುಡ್ನಾಪುರ ಆಶ್ರಯ ಕಾಲೋನಿಯ ಕೈಲಾಸ ರೋಡ ಮಾರುತಿ, ಧಾರವಾಡ ರಸ್ತೆಯ ಬಳಿ ಹನುಮಾನ ಮಂದಿರ ಮತ್ತಿತರೆಡೆ ಹನುಮಾನ ಜಯಂತಿ ಆಚರಣೆ ಮಾಡಲಾಯಿತು.</p>.<p>ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗಗಳಾದ ಹವಗಿ, ತಿಮ್ಮಾಪುರ, ಭಾಗವತಿ, ಬೆಳವಟಗಿ, ಆಲೂರು, ಕಾವಲವಾಡ, ಬಿ.ಕೆ.ಹಳ್ಳಿ, ಅರ್ಲವಾಡ, ತೇರಗಾಂವ, ಮುರ್ಕವಾಡ, ಯಡೋಗಾ, ಮಂಗಳವಾಡ, ಸಾತನಳ್ಳಿ, ಜನಗಾ, ನಂದಿಗದ್ದಾ, ಮತ್ತಿತರ ಗ್ರಾಮ ಗಳಲ್ಲಿನ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿಯನ್ನು ಆಚರಿಸಲಾಯಿತು.</p>.<p>ಗ್ರಾಮೀಣ ಭಾಗದಲ್ಲಿಯ ಕೆಲವು ಮಂದಿರಗಳಲ್ಲಿ ಬೆಳ್ಳಿಗ್ಗೆಯಿಂದಲೇ ಹನುಮ ನಾಮ ಜಪ, ಉಪಾಸನೆ, ಕೀರ್ತನೆ, ಭಜನೆಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>