<p><strong>ಶಿರಸಿ</strong>: ‘ನಿವೃತ್ತಿಯ ಬಳಿಕ ಆರೋಗ್ಯಪೂರ್ಣತೆ ಕಡೆ ನಮ್ಮ ದೃಷ್ಟಿ ಹರಿಸಬೇಕು. ಆರೋಗ್ಯವೇ ಬದುಕಿಗೆ ಚೈತನ್ಯವಾದರೆ ಲವಲವಿಕೆಯಿಂದ ಜೀವನ ನಡೆಸಬಹುದು’ ಎಂದು ಯಕ್ಷಗಾನ ಕವಿ ಮೃತ್ಯುಂಜಯ ಗಿಂಡಿಮನೆ ಹೇಳಿದರು.</p>.<p>ನಗರದ ರಂಗಧಾಮದಲ್ಲಿ ಶನಿವಾರ ಅವರು ಲೇಖಕ ರಾಮಚಂದ್ರ ಹೆಗಡೆ ಬಂಡಿಮನೆ ಅವರ ಆಂಗ್ಲಮೂಲದ, ಮೃತ್ಯುಂಜಯ ಗಿಂಡಿಮನೆ ಅವರು ಭಾಷಾಂತರಗೊಳಿಸಿದ 'ನಿವೃತ್ತಿಯ ನಂತರದ ಆರೋಗ್ಯ ಪೂರ್ಣ ಜೀವನ' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ನಿವೃತ್ತಿಯ ನಂತರ ನಿರೋಗಿಯಾಗಿ ಬದುಕಬೇಕು. ಉಪಯೋಗಕರ ಬದುಕು ನಡೆಸಬೇಕು. ನಿವೃತ್ತಿ ಬಳಿಕ ವಯಸ್ಸಾಯಿತು ಎಂಬುದು ಬಿಡಬೇಕು. ಅದಕ್ಕಾಗಿ ಮನಸ್ಸು ಪ್ರಫುಲ್ಲವಾಗಿ ಇಟ್ಟುಕೊಳ್ಳಬೇಕು’ ಎಂದರು.</p>.<p>ಕೃತಿ ಬಿಡುಗಡೆಗೊಳಿಸಿದ ಪುಣೆಯ ನಿಸರ್ಗೋಪಚಾರ ಕೇಂದ್ರದ ಡಾ.ನಾರಾಯಣ ಹೆಗಡೆ, ‘ಇಂಥ ಕೃತಿಗಳು ನಿವೃತ್ತಿ ಬದುಕು ಎದುರಿಸಬೇಕಾದ ಸಂಗತಿ ತಿಳಿಸಿ ಮಾರ್ಗದರ್ಶನ ಮಾಡುತ್ತದೆ’ ಎಂದು ತಿಳಿಸಿದರು.</p>.<p>ಸಹಕಾರಿಗಳಾದ ರಾಮಕೃಷ್ಣ ಹೆಗಡೆ ಕಡವೆ ಕಾರ್ಯಕ್ರಮ ಉದ್ಘಾಟಿಸಿದರು. ಪುಸ್ತಕವನ್ನು ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸಮನಿ ಪರಿಚಯಿಸಿದರು. ಸಾಹಿತಿ ಅನಂತ ತಮ್ಮನಕರ ಪರಿಚಯಿಸಿ ಅಭಿನಂದಿಸಿದರು. ಬರಹಗಾರ ಕೆ.ಆರ್.ಹೆಗಡೆ ಕಾನಸೂರು, ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ, ಲೇಖಕ ರಾಮಚಂದ್ರ ಬಂಡಿಮನೆ ಇದ್ದರು.</p>.<p> ಕಥೆಗಾರ ಡಿ.ಎಸ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್.ಹೆಗಡೆ ಸ್ವಾಗತಿಸಿದರು. ರೋಹಿಣಿ ಹೆಗಡೆ, ರೇಣುಕಾ ನಾಗರಾಜ, ದಾಕ್ಷಾಯಿಣಿ ಪಿಸಿ ನಿರ್ವಹಿಸಿದರು. ಶಾಂತಾರಾಮ ಬಂಡಿಮನೆ ವಂದಿಸಿದರು. ಹಿರಿಯ ನಾಗರಿಕರ ಸಂಘಟನೆ, ಗಾಯತ್ರಿ ಗೆಳೆಯರ ಬಳಗ ಕಾರ್ಯಕ್ರಮ ಆಯೋಜಿಸಿತ್ತು.</p>.<p>ಪುಸ್ತಕದ ವಿವರ ಕೃತಿ:ನಿವೃತ್ತಿಯ ನಂತರದ ಆರೋಗ್ಯ ಪೂರ್ಣ ಜೀವನ ಪ್ರಕಾಶಕ:ಅನನ್ಯ ಪ್ರಕಾಶನ ಮೈಸೂರು ಪುಟ:280 ದರ: ₹350</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ‘ನಿವೃತ್ತಿಯ ಬಳಿಕ ಆರೋಗ್ಯಪೂರ್ಣತೆ ಕಡೆ ನಮ್ಮ ದೃಷ್ಟಿ ಹರಿಸಬೇಕು. ಆರೋಗ್ಯವೇ ಬದುಕಿಗೆ ಚೈತನ್ಯವಾದರೆ ಲವಲವಿಕೆಯಿಂದ ಜೀವನ ನಡೆಸಬಹುದು’ ಎಂದು ಯಕ್ಷಗಾನ ಕವಿ ಮೃತ್ಯುಂಜಯ ಗಿಂಡಿಮನೆ ಹೇಳಿದರು.</p>.<p>ನಗರದ ರಂಗಧಾಮದಲ್ಲಿ ಶನಿವಾರ ಅವರು ಲೇಖಕ ರಾಮಚಂದ್ರ ಹೆಗಡೆ ಬಂಡಿಮನೆ ಅವರ ಆಂಗ್ಲಮೂಲದ, ಮೃತ್ಯುಂಜಯ ಗಿಂಡಿಮನೆ ಅವರು ಭಾಷಾಂತರಗೊಳಿಸಿದ 'ನಿವೃತ್ತಿಯ ನಂತರದ ಆರೋಗ್ಯ ಪೂರ್ಣ ಜೀವನ' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ನಿವೃತ್ತಿಯ ನಂತರ ನಿರೋಗಿಯಾಗಿ ಬದುಕಬೇಕು. ಉಪಯೋಗಕರ ಬದುಕು ನಡೆಸಬೇಕು. ನಿವೃತ್ತಿ ಬಳಿಕ ವಯಸ್ಸಾಯಿತು ಎಂಬುದು ಬಿಡಬೇಕು. ಅದಕ್ಕಾಗಿ ಮನಸ್ಸು ಪ್ರಫುಲ್ಲವಾಗಿ ಇಟ್ಟುಕೊಳ್ಳಬೇಕು’ ಎಂದರು.</p>.<p>ಕೃತಿ ಬಿಡುಗಡೆಗೊಳಿಸಿದ ಪುಣೆಯ ನಿಸರ್ಗೋಪಚಾರ ಕೇಂದ್ರದ ಡಾ.ನಾರಾಯಣ ಹೆಗಡೆ, ‘ಇಂಥ ಕೃತಿಗಳು ನಿವೃತ್ತಿ ಬದುಕು ಎದುರಿಸಬೇಕಾದ ಸಂಗತಿ ತಿಳಿಸಿ ಮಾರ್ಗದರ್ಶನ ಮಾಡುತ್ತದೆ’ ಎಂದು ತಿಳಿಸಿದರು.</p>.<p>ಸಹಕಾರಿಗಳಾದ ರಾಮಕೃಷ್ಣ ಹೆಗಡೆ ಕಡವೆ ಕಾರ್ಯಕ್ರಮ ಉದ್ಘಾಟಿಸಿದರು. ಪುಸ್ತಕವನ್ನು ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸಮನಿ ಪರಿಚಯಿಸಿದರು. ಸಾಹಿತಿ ಅನಂತ ತಮ್ಮನಕರ ಪರಿಚಯಿಸಿ ಅಭಿನಂದಿಸಿದರು. ಬರಹಗಾರ ಕೆ.ಆರ್.ಹೆಗಡೆ ಕಾನಸೂರು, ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ, ಲೇಖಕ ರಾಮಚಂದ್ರ ಬಂಡಿಮನೆ ಇದ್ದರು.</p>.<p> ಕಥೆಗಾರ ಡಿ.ಎಸ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್.ಹೆಗಡೆ ಸ್ವಾಗತಿಸಿದರು. ರೋಹಿಣಿ ಹೆಗಡೆ, ರೇಣುಕಾ ನಾಗರಾಜ, ದಾಕ್ಷಾಯಿಣಿ ಪಿಸಿ ನಿರ್ವಹಿಸಿದರು. ಶಾಂತಾರಾಮ ಬಂಡಿಮನೆ ವಂದಿಸಿದರು. ಹಿರಿಯ ನಾಗರಿಕರ ಸಂಘಟನೆ, ಗಾಯತ್ರಿ ಗೆಳೆಯರ ಬಳಗ ಕಾರ್ಯಕ್ರಮ ಆಯೋಜಿಸಿತ್ತು.</p>.<p>ಪುಸ್ತಕದ ವಿವರ ಕೃತಿ:ನಿವೃತ್ತಿಯ ನಂತರದ ಆರೋಗ್ಯ ಪೂರ್ಣ ಜೀವನ ಪ್ರಕಾಶಕ:ಅನನ್ಯ ಪ್ರಕಾಶನ ಮೈಸೂರು ಪುಟ:280 ದರ: ₹350</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>