<p>‘ಈ ಸಲ ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪಣ್ಣಂಗೇ ಸಿಗತೈತಿ!’ ಬೆಕ್ಕಣ್ಣ ಭಲೇ ಸಂಭ್ರಮದಿಂದ ವದರಿತು.</p>.<p>‘ಅಂವಾ ಹುಟ್ಟಾ ಜಗಳಗಂಟ ಕಣಲೇ! ಅವಂಗೆ ಹೆಂಗೆ ಶಾಂತಿ ಪ್ರಶಸ್ತಿ ಕೊಡತಾರೆ?’ ನಾನು ಕೇಳಿದೆ.</p>.<p>‘ಅಂವಾ ಒಟ್ ಏಳು ಯುದ್ಧ ನಿಲ್ಲಿಸ್ಯಾನೆ. ಸಪ್ತಕದನ ನಿಲ್ಲಿಸೂದು ಅಂದರೆ ಅಷ್ಟ್ ಸುಲಭ ಅಲ್ಲ. ನೋಡ್ತಿರು... ಈ ಸಲ ನೊಬೆಲ್ ಶಾಂತಿ ಕಪ್ ಅಂವಂದೇ!’ ಬೆಕ್ಕಣ್ಣ ಇನ್ನಷ್ಟು ಹುರುಪಿನಿಂದ ಘೋಷಿಸಿತು.</p>.<p>‘ಆ ಏಳು ಯುದ್ಧಗಳು ಯಾವ್ಯಾವು ಹೇಳು ನೋಡಾಮು’ ನಾನು ಬೆಕ್ಕಣ್ಣನಿಗೆ ಸವಾಲು ಎಸೆಯುವಂತೆ ಹೇಳಿದೆ. </p>.<p>‘ಇಸ್ರೇಲ್–ಇರಾನ್ ಯುದ್ಧ, ಈಜಿಪ್ಟ್–ಇಥಿಯೋಪಿಯಾ ಯುದ್ಧ, ಥಾಯ್ಲೆಂಡ್–ಕಾಂಬೋಡಿಯಾ ಯುದ್ಧ, ಭಾರತ–ಪಾಕಿಸ್ತಾನ ಯುದ್ಧ’ ಬೆಕ್ಕಣ್ಣ ಬೆರಳು ಮಡಚಿ ಎಣಿಸತೊಡಗಿತು.</p>.<p>‘ಹಂಗಾರೆ ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದು ಟ್ರಂಪಣ್ಣನೇ ಅಂತ ಮೋದಿಮಾಮಾರು ಎದಕ್ಕೆ ಘೋಷಣೆ ಮಾಡಂಗಿಲ್ಲ?’ ನಾನು ಪ್ರಶ್ನಿಸಿದೆ.</p>.<p>‘ಅವೆಲ್ಲ ರಾಜತಾಂತ್ರಿಕ ವಿಚಾರಗಳು, ನಿನ್ನಂಥ ಶ್ರೀಸಾಮಾನ್ಯರಿಗೆ ಅರ್ಥ ಆಗಂಗಿಲ್ಲ! ಈಗ ಇಸ್ರೇಲ್–ಪ್ಯಾಲೆಸ್ಟೀನ್ ಯುದ್ಧ ನಿಲ್ಲಿಸಾಕೆ ಟ್ರಂಪಣ್ಣ 20 ಅಂಶದ ಪ್ರಸ್ತಾಪ ಮಾಡ್ಯಾನೆ. ಜಗತ್ತಿನ ಶಾಂತಿಗೆ ಎಷ್ಟ್ ಕೊಡುಗೆ ಕೊಟ್ಟಾನೆ!’ ಎಂದು ಬೆಕ್ಕಣ್ಣ ಪಾಠ ಮಾಡಿತು.</p>.<p>‘ಎರಡು ದೇಶಗಳ ನಡುವೆ ಕಿತಾಪತಿ ಹುಟ್ಟುಹಾಕಿ, ಯುದ್ಧೋನ್ಮಾದ ಹೆಚ್ಚಿಸಿ, ಆಮೇಲೆ ತಾನೇ ಜಗಳ ನಿಲ್ಲಿಸಿದೆ ಅನ್ನದು ಯಾವ ಸೀಮೆಯ ಶಾಂತಿಸ್ಥಾಪನೆ?’</p>.<p>‘ಅದೇ ನಿಜವಾದ ಶಾಂತಿಸ್ಥಾಪನೆ! ಹಂಗಾಗಿ ಈ ಸಲ ನೊಬೆಲ್ ಶಾಂತಿ ಕಪ್ ಅಂವಗೇ ಕೊಡಬಕು’.</p>.<p>‘ಅಂವಾ ನಮ್ಮಂತ ದೇಶಗಳ ಮೇಲೆ ಸುಂಕಸಮರ ಸಾರಿದಾನಲ್ಲ, ಮೊದಲು ಅದನ್ನು ನಿಲ್ಲಿಸಲು ಹೇಳು’ ಎಂದೆ.</p>.<p>‘ಸುಂಕಸಮರ ಅನ್ನೂದು ಕ್ಷಿಪಣಿ ಯುದ್ಧವಲ್ಲ. ಅದನ್ನು ನಿಲ್ಲಿಸೂದು ಶಾಂತಿ ಸ್ಥಾಪನೆ ಅಡಿಯಲ್ಲಿ ಬರಂಗಿಲ್ಲ. ಇಷ್ಟಾಗಿ ಅಂವಾ ಸುಂಕಸಮರ ಮಾಡೂದು ಅಮೆರಿಕದ ಜನರ ಶಾಂತಿಯುತ ಬದುಕಿಗಾಗಿ’ ಎಂದು ಬೆಕ್ಕಣ್ಣ ಭಲೇ ಲಾಯರಿನಂತೆ ವಾದಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಈ ಸಲ ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪಣ್ಣಂಗೇ ಸಿಗತೈತಿ!’ ಬೆಕ್ಕಣ್ಣ ಭಲೇ ಸಂಭ್ರಮದಿಂದ ವದರಿತು.</p>.<p>‘ಅಂವಾ ಹುಟ್ಟಾ ಜಗಳಗಂಟ ಕಣಲೇ! ಅವಂಗೆ ಹೆಂಗೆ ಶಾಂತಿ ಪ್ರಶಸ್ತಿ ಕೊಡತಾರೆ?’ ನಾನು ಕೇಳಿದೆ.</p>.<p>‘ಅಂವಾ ಒಟ್ ಏಳು ಯುದ್ಧ ನಿಲ್ಲಿಸ್ಯಾನೆ. ಸಪ್ತಕದನ ನಿಲ್ಲಿಸೂದು ಅಂದರೆ ಅಷ್ಟ್ ಸುಲಭ ಅಲ್ಲ. ನೋಡ್ತಿರು... ಈ ಸಲ ನೊಬೆಲ್ ಶಾಂತಿ ಕಪ್ ಅಂವಂದೇ!’ ಬೆಕ್ಕಣ್ಣ ಇನ್ನಷ್ಟು ಹುರುಪಿನಿಂದ ಘೋಷಿಸಿತು.</p>.<p>‘ಆ ಏಳು ಯುದ್ಧಗಳು ಯಾವ್ಯಾವು ಹೇಳು ನೋಡಾಮು’ ನಾನು ಬೆಕ್ಕಣ್ಣನಿಗೆ ಸವಾಲು ಎಸೆಯುವಂತೆ ಹೇಳಿದೆ. </p>.<p>‘ಇಸ್ರೇಲ್–ಇರಾನ್ ಯುದ್ಧ, ಈಜಿಪ್ಟ್–ಇಥಿಯೋಪಿಯಾ ಯುದ್ಧ, ಥಾಯ್ಲೆಂಡ್–ಕಾಂಬೋಡಿಯಾ ಯುದ್ಧ, ಭಾರತ–ಪಾಕಿಸ್ತಾನ ಯುದ್ಧ’ ಬೆಕ್ಕಣ್ಣ ಬೆರಳು ಮಡಚಿ ಎಣಿಸತೊಡಗಿತು.</p>.<p>‘ಹಂಗಾರೆ ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದು ಟ್ರಂಪಣ್ಣನೇ ಅಂತ ಮೋದಿಮಾಮಾರು ಎದಕ್ಕೆ ಘೋಷಣೆ ಮಾಡಂಗಿಲ್ಲ?’ ನಾನು ಪ್ರಶ್ನಿಸಿದೆ.</p>.<p>‘ಅವೆಲ್ಲ ರಾಜತಾಂತ್ರಿಕ ವಿಚಾರಗಳು, ನಿನ್ನಂಥ ಶ್ರೀಸಾಮಾನ್ಯರಿಗೆ ಅರ್ಥ ಆಗಂಗಿಲ್ಲ! ಈಗ ಇಸ್ರೇಲ್–ಪ್ಯಾಲೆಸ್ಟೀನ್ ಯುದ್ಧ ನಿಲ್ಲಿಸಾಕೆ ಟ್ರಂಪಣ್ಣ 20 ಅಂಶದ ಪ್ರಸ್ತಾಪ ಮಾಡ್ಯಾನೆ. ಜಗತ್ತಿನ ಶಾಂತಿಗೆ ಎಷ್ಟ್ ಕೊಡುಗೆ ಕೊಟ್ಟಾನೆ!’ ಎಂದು ಬೆಕ್ಕಣ್ಣ ಪಾಠ ಮಾಡಿತು.</p>.<p>‘ಎರಡು ದೇಶಗಳ ನಡುವೆ ಕಿತಾಪತಿ ಹುಟ್ಟುಹಾಕಿ, ಯುದ್ಧೋನ್ಮಾದ ಹೆಚ್ಚಿಸಿ, ಆಮೇಲೆ ತಾನೇ ಜಗಳ ನಿಲ್ಲಿಸಿದೆ ಅನ್ನದು ಯಾವ ಸೀಮೆಯ ಶಾಂತಿಸ್ಥಾಪನೆ?’</p>.<p>‘ಅದೇ ನಿಜವಾದ ಶಾಂತಿಸ್ಥಾಪನೆ! ಹಂಗಾಗಿ ಈ ಸಲ ನೊಬೆಲ್ ಶಾಂತಿ ಕಪ್ ಅಂವಗೇ ಕೊಡಬಕು’.</p>.<p>‘ಅಂವಾ ನಮ್ಮಂತ ದೇಶಗಳ ಮೇಲೆ ಸುಂಕಸಮರ ಸಾರಿದಾನಲ್ಲ, ಮೊದಲು ಅದನ್ನು ನಿಲ್ಲಿಸಲು ಹೇಳು’ ಎಂದೆ.</p>.<p>‘ಸುಂಕಸಮರ ಅನ್ನೂದು ಕ್ಷಿಪಣಿ ಯುದ್ಧವಲ್ಲ. ಅದನ್ನು ನಿಲ್ಲಿಸೂದು ಶಾಂತಿ ಸ್ಥಾಪನೆ ಅಡಿಯಲ್ಲಿ ಬರಂಗಿಲ್ಲ. ಇಷ್ಟಾಗಿ ಅಂವಾ ಸುಂಕಸಮರ ಮಾಡೂದು ಅಮೆರಿಕದ ಜನರ ಶಾಂತಿಯುತ ಬದುಕಿಗಾಗಿ’ ಎಂದು ಬೆಕ್ಕಣ್ಣ ಭಲೇ ಲಾಯರಿನಂತೆ ವಾದಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>