ಮಹಾರಾಷ್ಟ್ರದ ಕಲ್ಲಂಗಡಿ ಮಾರುಕಟ್ಟೆಗೆ
‘ಜಿಲ್ಲೆಯಲ್ಲಿ ಬಿಸಿಲ ಝಳದಿಂದ ಕಲ್ಲಂಗಡಿ ಬೆಳೆಯ ಮೇಲೆ ಪರಿಣಾಮ ಬೀರಿದ್ದು ಒಂದೆಡೆಯಾದರೆ ಮಹಾರಾಷ್ಟ್ರದಿಂದ ವ್ಯಾಪಕ ಪ್ರಮಾಣದ ಕಲ್ಲಂಗಡಿ ಬೆಳೆ ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಿದೆ. ಇದರಿಂದ ಸ್ಥಳೀಯ ರೈತರು ಬೆಳೆದ ಕಲ್ಲಂಗಡಿಗೆ ದರ ಕಡಿಮೆಯಾಗಿದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು. ‘ಪ್ರತಿ ಬಾರಿ ಕಲ್ಲಂಗಡಿಗೆ ಕೆಜಿಗೆ ಸರಾಸರಿ ₹12 ರಿಂದ ₹18 ದರದವರೆಗೂ ಖರೀದಿ ಮಾಡಿದ ಉದಾಹರಣೆ ಇದೆ. ಕೆಜಿಗೆ ₹15 ದರ ದೊರೆತರೆ ಮಾತ್ರ ರೈತರಿಗೆ ಲಾಭ ಸಿಗುತ್ತವೆ. ಆದರೆ ಅದರ ಅರ್ಧ ಮೊತ್ತಕ್ಕೆ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನೆರೆ ರಾಜ್ಯದಿಂದ ಜಾಸ್ತಿ ಪ್ರಮಾಣದಲ್ಲಿ ಹಣ್ಣು ಪೂರೈಕೆಯಾಗಿರುವುದು ಕಾರಣ’ ಎಂದರು.