<p><strong>ಯಲ್ಲಾಪುರ</strong>: ಯಲ್ಲಾಪುರ ಡಿಪೋದಿಂದ ಅಂಕೋಲಾ ತಾಲ್ಲೂಕು ಹೆಗ್ಗಾರ ಗ್ರಾಮಕ್ಕೆ ಬಸ್ ಸಂಚಾರವನ್ನು ಈಚೆಗೆ ಪುನಃ ಆರಂಭಿಸಲಾಗಿದೆ.</p>.<p>ಹೆಗ್ಗಾರ ಮಾಗ೯ವಾಗಿ ಹೋಗುತ್ತಿದ್ದ ಕಮ್ಮಾಣಿ ಬಸ್ ಗುಳ್ಳಾಪುರ ಸೇತುವೆ ಕುಸಿತದಿಂದಾಗಿ ಬಂದಾಗಿತ್ತು. ಅಂದಿನಿಂದಲೂ ಹೆಗ್ಗಾರಿಗೆ ಬಸ್ ಸಂಪಕ೯ ಇಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. ರಾಮನಗುಳಿ ಸೇತುವೆ ನಿಮಾ೯ಣದ ನಂತರ ತಿಂಗಳ ಹಿಂದೆ ಕಮ್ಮಾಣಿ ಬಸ್ ಪುನರಾರಂಭವಾಯಿತಾದರೂ ಆ ಬಸ್ ಹೆಗ್ಗಾರ ಮಾಗ೯ವಾಗಿ ಹೋಗುವಂತಿರಲಿಲ್ಲ.</p>.<p>ಕಮ್ಮಾಣಿ ಬಸ್ ಅನ್ನು ಹೆಗ್ಗಾರ ಗ್ರಾಮಕ್ಕೂ ಬಿಡಬೇಕು ಎಂಬ ಸಾರ್ವಜನಿಕರ ಆಗ್ರಹದ ಮೇರೆಗೆ ಈ ಬಸ್ ಅನ್ನು ಈಗ ಹೆಗ್ಗಾರಿಗೂ ಬಿಡಲಾಗುತ್ತಿದೆ. ಇದರಿಂದ ಹೆಗ್ಗಾರ ಸುತ್ತಮುತ್ತಲ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.</p>.<p>ಗ್ರಾಮಕ್ಕೆ ಆಗಮಿಸಿದ ಬಸ್ ಅನ್ನು ಪೂಜೆ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು. ಪ್ರಮುಖರಾದ ಮಹಾಬಲೇಶ್ವರ ಭಟ್ಟ, ರಾಮಕೃಷ್ಣ ಗಾಂವ್ಕರ, ರಾಜೇಶ ಹೆಗಡೆ ಕೈಗಡಿ, ಸುಬ್ರಾಯ ಕಲಗಾರೆ, ವಿ.ವಿ.ಜೋಷಿ, ಎನ್.ಎನ್.ಹೆಬ್ಬಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ಯಲ್ಲಾಪುರ ಡಿಪೋದಿಂದ ಅಂಕೋಲಾ ತಾಲ್ಲೂಕು ಹೆಗ್ಗಾರ ಗ್ರಾಮಕ್ಕೆ ಬಸ್ ಸಂಚಾರವನ್ನು ಈಚೆಗೆ ಪುನಃ ಆರಂಭಿಸಲಾಗಿದೆ.</p>.<p>ಹೆಗ್ಗಾರ ಮಾಗ೯ವಾಗಿ ಹೋಗುತ್ತಿದ್ದ ಕಮ್ಮಾಣಿ ಬಸ್ ಗುಳ್ಳಾಪುರ ಸೇತುವೆ ಕುಸಿತದಿಂದಾಗಿ ಬಂದಾಗಿತ್ತು. ಅಂದಿನಿಂದಲೂ ಹೆಗ್ಗಾರಿಗೆ ಬಸ್ ಸಂಪಕ೯ ಇಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. ರಾಮನಗುಳಿ ಸೇತುವೆ ನಿಮಾ೯ಣದ ನಂತರ ತಿಂಗಳ ಹಿಂದೆ ಕಮ್ಮಾಣಿ ಬಸ್ ಪುನರಾರಂಭವಾಯಿತಾದರೂ ಆ ಬಸ್ ಹೆಗ್ಗಾರ ಮಾಗ೯ವಾಗಿ ಹೋಗುವಂತಿರಲಿಲ್ಲ.</p>.<p>ಕಮ್ಮಾಣಿ ಬಸ್ ಅನ್ನು ಹೆಗ್ಗಾರ ಗ್ರಾಮಕ್ಕೂ ಬಿಡಬೇಕು ಎಂಬ ಸಾರ್ವಜನಿಕರ ಆಗ್ರಹದ ಮೇರೆಗೆ ಈ ಬಸ್ ಅನ್ನು ಈಗ ಹೆಗ್ಗಾರಿಗೂ ಬಿಡಲಾಗುತ್ತಿದೆ. ಇದರಿಂದ ಹೆಗ್ಗಾರ ಸುತ್ತಮುತ್ತಲ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.</p>.<p>ಗ್ರಾಮಕ್ಕೆ ಆಗಮಿಸಿದ ಬಸ್ ಅನ್ನು ಪೂಜೆ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು. ಪ್ರಮುಖರಾದ ಮಹಾಬಲೇಶ್ವರ ಭಟ್ಟ, ರಾಮಕೃಷ್ಣ ಗಾಂವ್ಕರ, ರಾಜೇಶ ಹೆಗಡೆ ಕೈಗಡಿ, ಸುಬ್ರಾಯ ಕಲಗಾರೆ, ವಿ.ವಿ.ಜೋಷಿ, ಎನ್.ಎನ್.ಹೆಬ್ಬಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>