‘ಜಿಲ್ಲೆಯ ಸಾವಿರಾರು ಯುವಕ, ಯುವತಿಯರು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪ್ಪ ಅಮ್ಮನ ಜತೆ ಊರಲ್ಲೇ ಇರಬೇಕು, ಐಟಿ ಉದ್ಯೋಗವೂ ಬೇಕು ಎಂಬ ಮನೋಭಾವದವರಿಗೆ ಅನುಕೂಲವಾಗಲು ಹೊಸ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಸದ್ಯ ಕಂಪನಿಯಲ್ಲಿ ಉಡುಪಿಯ ಒಬ್ಬರನ್ನು ಬಿಟ್ಟರೆ ಉಳಿದ 12 ಜನ ಸುತ್ತಲಿನ ಹಳ್ಳಿಯವರೇ ಆಗಿದ್ದಾರೆ’ ಎನ್ನುತ್ತಾರೆ ಗೌತಮ್ ಬೆಂಗಳೆ.