<p><strong>ಶಿರಸಿ:</strong> ‘ಬೇಡ್ತಿ–ವರದಾ ನದಿ ಜೋಡಣೆ ಸಂಬಂಧ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ತೋರುತ್ತಿರುವ ಉತ್ಸುಕತೆ ನಿಲ್ಲಿಸಿ, ಯೋಜನೆ ಕೈಬಿಡಲು ಸಿ.ಎಂ., ಡಿಸಿಎಂ ಮುಂದಾಗಬೇಕು’ ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಇಲ್ಲಿ ಒತ್ತಾಯಿಸಿದರು.<br>‘ರಾಜ್ಯ ಸರ್ಕಾರ ಯೋಜನೆ ಬೇಡ ಎಂದರೆ ಈಗಲೂ ಕೇಂದ್ರ ಸರ್ಕಾರ ಯೋಜನೆ ಹೇರುವುದಿಲ್ಲ. 30 ವರ್ಷದಿಂದ ಚರ್ಚೆ ಆಗದ್ದು, ಈ ಎರಡೂವರೆ ವರ್ಷದಲ್ಲಿ ಏಕೆ ಮುನ್ನೆಲೆಗೆ ಬಂದಿದೆ’ ಎಂದು ಪ್ರಶ್ನಿಸಿದರು.</p><p>ಪತ್ರಕರ್ತರ ಜತೆ ಮಾತನಾಡಿದ ಅವರು, ‘ವೈಜ್ಞಾನಿಕ ಕಾರಣ ಹಾಗೂ ಅನುಭವದ ಆಧಾರದಲ್ಲಿ ನದಿ ಜೋಡಣೆ ಯೋಜನೆ ನಮಗೆ ಬೇಡ. ಬೃಹತ್ ಯೋಜನೆಯಿಂದ ಭೂ ಕುಸಿತ ಉಂಟಾಗುತ್ತಿದೆ. ಜಿಲ್ಲೆಯ ಜನರು ಒಟ್ಟಾಗಿ ಈ ಯೋಜನೆ ಬೇಡ ಎಂದು ವಿರೋಧಿಸುತ್ತಿದ್ದಾರೆ’ ಎಂದು ಅವರು ಉಲ್ಲೇಖಿಸಿದರು.</p><p>‘ಜಿಲ್ಲೆಗೆ ಭೇಟಿ ನೀಡಿದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಈ ಯೋಜನೆ ಮಾಡುತ್ತೇವೆ ಎಂದು ಹೇಳಿದಾಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಏಕೆ ವಿರೋಧ ವ್ಯಕ್ತ<br>ಪಡಿಸಲಿಲ್ಲ? ಎಂದು ಕಿಡಿಕಾರಿದರು.</p>
<p><strong>ಶಿರಸಿ:</strong> ‘ಬೇಡ್ತಿ–ವರದಾ ನದಿ ಜೋಡಣೆ ಸಂಬಂಧ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ತೋರುತ್ತಿರುವ ಉತ್ಸುಕತೆ ನಿಲ್ಲಿಸಿ, ಯೋಜನೆ ಕೈಬಿಡಲು ಸಿ.ಎಂ., ಡಿಸಿಎಂ ಮುಂದಾಗಬೇಕು’ ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಇಲ್ಲಿ ಒತ್ತಾಯಿಸಿದರು.<br>‘ರಾಜ್ಯ ಸರ್ಕಾರ ಯೋಜನೆ ಬೇಡ ಎಂದರೆ ಈಗಲೂ ಕೇಂದ್ರ ಸರ್ಕಾರ ಯೋಜನೆ ಹೇರುವುದಿಲ್ಲ. 30 ವರ್ಷದಿಂದ ಚರ್ಚೆ ಆಗದ್ದು, ಈ ಎರಡೂವರೆ ವರ್ಷದಲ್ಲಿ ಏಕೆ ಮುನ್ನೆಲೆಗೆ ಬಂದಿದೆ’ ಎಂದು ಪ್ರಶ್ನಿಸಿದರು.</p><p>ಪತ್ರಕರ್ತರ ಜತೆ ಮಾತನಾಡಿದ ಅವರು, ‘ವೈಜ್ಞಾನಿಕ ಕಾರಣ ಹಾಗೂ ಅನುಭವದ ಆಧಾರದಲ್ಲಿ ನದಿ ಜೋಡಣೆ ಯೋಜನೆ ನಮಗೆ ಬೇಡ. ಬೃಹತ್ ಯೋಜನೆಯಿಂದ ಭೂ ಕುಸಿತ ಉಂಟಾಗುತ್ತಿದೆ. ಜಿಲ್ಲೆಯ ಜನರು ಒಟ್ಟಾಗಿ ಈ ಯೋಜನೆ ಬೇಡ ಎಂದು ವಿರೋಧಿಸುತ್ತಿದ್ದಾರೆ’ ಎಂದು ಅವರು ಉಲ್ಲೇಖಿಸಿದರು.</p><p>‘ಜಿಲ್ಲೆಗೆ ಭೇಟಿ ನೀಡಿದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಈ ಯೋಜನೆ ಮಾಡುತ್ತೇವೆ ಎಂದು ಹೇಳಿದಾಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಏಕೆ ವಿರೋಧ ವ್ಯಕ್ತ<br>ಪಡಿಸಲಿಲ್ಲ? ಎಂದು ಕಿಡಿಕಾರಿದರು.</p>