<p><strong>ಕಾರವಾರ:</strong> ಕೈಗಾದ ಅಣು ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಕೈಗಾ ಹೋರಾಟಗಾರರ ವೇದಿಕೆ ಶನಿವಾರದಿಂದ ಪಾದಯಾತ್ರೆ ಆರಂಭಿಸಿದೆ.</p>.<p>ನಗರದ ಸುಭಾಷ್ ವೃತ್ತದಿಂದ ಆರಂಭಗೊಂಡಿರುವ ಪಾದಯಾತ್ರೆಯು ಸೋಮವಾರ ಕೈಗಾಕ್ಕೆ ತಲುಪಲಿದೆ. ಮೊದಲ ದಿನ ನಗರದಿಂದ 12 ಕಿ.ಮೀ ದೂರದ ಗೋಪಶಿಟ್ಟಾ ಗ್ರಾಮಕ್ಕೆ ಹೋರಾಟಗಾರರು ಪಾದಯಾತ್ರೆ ನಡೆಸುತ್ತ ಸಾಗಿದರು.</p>.<p>ಸುಭಾಷ್ ವೃತ್ತದಲ್ಲಿನ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಗೆ ಗೌರವ ಅರ್ಪಿಸಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಹೋರಾಟಗಾರರ ವೇದಿಕೆ ಅಧ್ಯಕ್ಷ ರಾಘು ನಾಯ್ಕ, ‘ಹಲವು ವರ್ಷಗಳಿಂದ ಅಣು ವಿದ್ಯುತ್ ನಿಗಮದಿಂದ ಸ್ಥಳೀಯರಿಗೆ ಅನ್ಯಾಯ ಆಗುತ್ತಿದೆ. ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಇಲ್ಲಿನ ನೆಲ, ಜಲ ಬಳಸಿಕೊಂಡು ಉದ್ಯೋಗ, ಸೌಲಭ್ಯಗಳನ್ನು ಹೊರರಾಜ್ಯದವರಿಗೆ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.</p>.<p>‘ಇಲ್ಲಿನ ಯುವಕರು ಉದ್ಯೋಗಕ್ಕೆ ಅನ್ಯ ರಾಜ್ಯಗಳತ್ತ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಬೃಹತ್ ರಾಷ್ಟ್ರೀಯ ಯೋಜನೆ ಇದ್ದರೂ ಉದ್ಯೋಗ ಕಲ್ಪಿಸದ ಕಾರಣಕ್ಕೆ ಹೋರಾಟ ಕೈಗೆತ್ತಿಕೊಂಡಿದ್ದೇವೆ’ ಎಂದರು.</p>.<p>ಜನಾರ್ಧನ ಗಾಂವಕರ ಮಾತನಾಡಿ, ‘ರಾಜ್ಯದ ಗಡಿಭಾಗವಾಗಿರುವ ಕಾರವಾರದಲ್ಲಿ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕೆಲಸ ಸರ್ಕಾರಗಳಿಂದ ನಡೆಯುತ್ತಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ ಭವಿಷ್ಯದ ಪೀಳಿಗೆಗೆ ವಂಚಿಸಿದಂತಾಗುತ್ತದೆ’ ಎಂದರು.</p>.<p>ಸುವರ್ಣಾ ಮಾಜಾಳಿಕರ, ಎಚ್.ಎಫ್.ದೊಡ್ಡಣ್ಣನವರ, ಶಬ್ಬೀರ ಶೇಖ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಕೈಗಾದ ಅಣು ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಕೈಗಾ ಹೋರಾಟಗಾರರ ವೇದಿಕೆ ಶನಿವಾರದಿಂದ ಪಾದಯಾತ್ರೆ ಆರಂಭಿಸಿದೆ.</p>.<p>ನಗರದ ಸುಭಾಷ್ ವೃತ್ತದಿಂದ ಆರಂಭಗೊಂಡಿರುವ ಪಾದಯಾತ್ರೆಯು ಸೋಮವಾರ ಕೈಗಾಕ್ಕೆ ತಲುಪಲಿದೆ. ಮೊದಲ ದಿನ ನಗರದಿಂದ 12 ಕಿ.ಮೀ ದೂರದ ಗೋಪಶಿಟ್ಟಾ ಗ್ರಾಮಕ್ಕೆ ಹೋರಾಟಗಾರರು ಪಾದಯಾತ್ರೆ ನಡೆಸುತ್ತ ಸಾಗಿದರು.</p>.<p>ಸುಭಾಷ್ ವೃತ್ತದಲ್ಲಿನ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಗೆ ಗೌರವ ಅರ್ಪಿಸಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಹೋರಾಟಗಾರರ ವೇದಿಕೆ ಅಧ್ಯಕ್ಷ ರಾಘು ನಾಯ್ಕ, ‘ಹಲವು ವರ್ಷಗಳಿಂದ ಅಣು ವಿದ್ಯುತ್ ನಿಗಮದಿಂದ ಸ್ಥಳೀಯರಿಗೆ ಅನ್ಯಾಯ ಆಗುತ್ತಿದೆ. ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಇಲ್ಲಿನ ನೆಲ, ಜಲ ಬಳಸಿಕೊಂಡು ಉದ್ಯೋಗ, ಸೌಲಭ್ಯಗಳನ್ನು ಹೊರರಾಜ್ಯದವರಿಗೆ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.</p>.<p>‘ಇಲ್ಲಿನ ಯುವಕರು ಉದ್ಯೋಗಕ್ಕೆ ಅನ್ಯ ರಾಜ್ಯಗಳತ್ತ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಬೃಹತ್ ರಾಷ್ಟ್ರೀಯ ಯೋಜನೆ ಇದ್ದರೂ ಉದ್ಯೋಗ ಕಲ್ಪಿಸದ ಕಾರಣಕ್ಕೆ ಹೋರಾಟ ಕೈಗೆತ್ತಿಕೊಂಡಿದ್ದೇವೆ’ ಎಂದರು.</p>.<p>ಜನಾರ್ಧನ ಗಾಂವಕರ ಮಾತನಾಡಿ, ‘ರಾಜ್ಯದ ಗಡಿಭಾಗವಾಗಿರುವ ಕಾರವಾರದಲ್ಲಿ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕೆಲಸ ಸರ್ಕಾರಗಳಿಂದ ನಡೆಯುತ್ತಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ ಭವಿಷ್ಯದ ಪೀಳಿಗೆಗೆ ವಂಚಿಸಿದಂತಾಗುತ್ತದೆ’ ಎಂದರು.</p>.<p>ಸುವರ್ಣಾ ಮಾಜಾಳಿಕರ, ಎಚ್.ಎಫ್.ದೊಡ್ಡಣ್ಣನವರ, ಶಬ್ಬೀರ ಶೇಖ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>