ಕಾರವಾರದ ಎಂ.ಜಿ.ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು
ಮರಗಳನ್ನು ತೆರವುಗೊಳಿಸಲು ನಗರಸಭೆಯಿಂದ ಒಪ್ಪಿಗೆ ಕೋರಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದರೂ ಮರ ತೆರವುಗೊಳಿಸಲು ಕೆಲ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ
ಗಣಪತಿ ಉಳ್ವೇಕರ್ ವಿಧಾನ ಪರಿಷತ್ ಸದಸ್ಯ
ಟೊಂಗೆ ಕತ್ತರಿಸಲಷ್ಟೆ ಅನುಮತಿ!
‘ನಗರ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಕತ್ತರಿಸಲು ಪರವಾನಗಿ ಕೋರಿ ಬಂದ ಅರ್ಜಿ ಪರಿಗಣಿಸಿ ಕೇವಲ ಅವುಗಳ ಟೊಂಗೆ ಕತ್ತರಿಸಲಷ್ಟೆ ಅನುಮತಿ ನೀಡಲಾಗುತ್ತದೆ. ಕಾರವಾರ ನಗರದಲ್ಲಿ ಬಹುತೇಕ ಕಡೆ ಮರಗಳ ಬುಡದಲ್ಲಿ ಕಾಂಕ್ರೀಟ್ ಅಳವಡಿಸಲಾಗುತ್ತಿರುವುದು ಗಮನಕ್ಕೆ ಬಂದಿದ್ದು ಇದರಿಂದ ಅವುಗಳ ಬೇರು ಹರಡಿಕೊಳ್ಳಲು ಅಡ್ಡಿಯಾಗುತ್ತಿದೆ. ಜೊತೆಗೆ ಅವುಗಳ ಬೆಳವಣಿಗೆಗೂ ಸಮಸ್ಯೆ ಆಗಬಹುದು. ಇದರಿಂದ ಮರಗಳು ಬುಡ ಸಮೇತ ಕಿತ್ತು ಬೀಳುವುದು ಹೆಚ್ಚು’ ಎಂದು ವಲಯ ಅರಣ್ಯಾಧಿಕಾರಿ ಗಜಾನನ ನಾಯ್ಕ ಪ್ರತಿಕ್ರಿಯಿಸಿದರು.