<p><strong>ಕುಮಟಾ</strong>: ‘ಮನುಷ್ಯನ ಹಲವು ಸಂಸಾರಿಕ ಸಮಸ್ಯೆಗಳಿಗೆ ಪರಿಹಾರವಿರುವ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದಲ್ಲಿ ಬದುಕಿನ ಆಚೆಯ ಹಲವು ಆಯಾಮಗಳನ್ನು ಕವಿ ನೀಡಿರುವುದು ವಿಶೇಷ’ ಎಂದು ಬೆಂಗಳೂರಿನ ಪ್ರೇರಣಾ ಟ್ರಸ್ಟ್ ಮುಖ್ಯಸ್ಥ ವಸಂತ ಭಟ್ಟ ಹೇಳಿದರು.</p>.<p>ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಕುಮಟಾ ತಾಲ್ಲೂಕು ಕಸಾಪ ಘಟಕ ಹಾಗೂ ಪ್ರೇರಣಾ ಟ್ರಸ್ಟ್ ವತಿಯಿಂದ ಡಿ.ವಿ.ಜಿ. 50ನೇ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ‘ಮಂಕುತಿಮ್ಮನ ಕಗ್ಗ-ವಾಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪ್ರಾಚಾರ್ಯ ವಿನಾಯಕ ಭಟ್ಟ, ‘ಡಿ.ವಿ.ಜಿ ಅವರ ‘ಹುಲ್ಲಾಗು ಬೆಟ್ಟದಲಿ ಮನೆಗೆ ಮಲ್ಲಿಗೆಯಾಗು‘ ಎನ್ನುವ ಕವಿತೆ ಸಾಲೇ ಮನುಕುಲಕ್ಕೆ ಮಾನವೀಯತೆಯ ಕೈಗನ್ನಡಿಯಂತಿದೆ. ಕನ್ನಡ ಪತ್ರಿಕೋದ್ಯಮದಲ್ಲೂ ಅಸಾಧಾರಣ ಸಾಧನೆ ಮಾಡಿರುವ ಡಿ.ವಿ.ಜಿ ಕನ್ನಡ ಭಾಷೆ, ಸಾಹಿತ್ಯದ ರಸ ಋಷಿಯಾಗಿದ್ದಾರೆ’ ಎಂದರು.</p>.<p>ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ, ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದ ನಾಯ್ಕ, ಪದವಿ ಪೂರ್ವ ವಿಭಾಗ ಪ್ರಾಚಾರ್ಯೆ ವೀಣಾ ಕಾಮತ್, ಪಾಧ್ಯಾಪಕ ವಿ.ಆರ್. ಶಾನಭಾಗ ಇದ್ದರು. ಕೀರ್ತಿ ನಾಯ್ಕ ನಿರೂಪಿಸಿದರು. ಮಂಕುತಿಮ್ಮನ ಕಗ್ಗದ ಆಯ್ದ ಪದ್ಯಗಳನ್ನು ವಾಚಿಸಲಾಯಿತು.</p>.<p>ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲೂ ‘ಮಂಕುತಿಮ್ಮನ ಕಗ್ಗ-ವಾಚನ ಕಾರ್ಯಕ್ರಮ' ಆಯೋಜಿಸಲಾಗಿತ್ತು. ಪ್ರೇರಣಾ ಟ್ರಸ್ಟ್ ಮುಖ್ಯಸ್ಥ ವಸಂತ ಭಟ್ಟ ಶಿಕ್ಷಕ ಕಿರಣ ಪ್ರಭು, ಅಮಿತ್ ಭಟ್, ನಿವೃತ್ತ ಮುಖ್ಯ ಶಿಕ್ಷಕ ಎನ್.ಆರ್. ಗಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಮಟಾ</strong>: ‘ಮನುಷ್ಯನ ಹಲವು ಸಂಸಾರಿಕ ಸಮಸ್ಯೆಗಳಿಗೆ ಪರಿಹಾರವಿರುವ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದಲ್ಲಿ ಬದುಕಿನ ಆಚೆಯ ಹಲವು ಆಯಾಮಗಳನ್ನು ಕವಿ ನೀಡಿರುವುದು ವಿಶೇಷ’ ಎಂದು ಬೆಂಗಳೂರಿನ ಪ್ರೇರಣಾ ಟ್ರಸ್ಟ್ ಮುಖ್ಯಸ್ಥ ವಸಂತ ಭಟ್ಟ ಹೇಳಿದರು.</p>.<p>ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಕುಮಟಾ ತಾಲ್ಲೂಕು ಕಸಾಪ ಘಟಕ ಹಾಗೂ ಪ್ರೇರಣಾ ಟ್ರಸ್ಟ್ ವತಿಯಿಂದ ಡಿ.ವಿ.ಜಿ. 50ನೇ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ‘ಮಂಕುತಿಮ್ಮನ ಕಗ್ಗ-ವಾಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪ್ರಾಚಾರ್ಯ ವಿನಾಯಕ ಭಟ್ಟ, ‘ಡಿ.ವಿ.ಜಿ ಅವರ ‘ಹುಲ್ಲಾಗು ಬೆಟ್ಟದಲಿ ಮನೆಗೆ ಮಲ್ಲಿಗೆಯಾಗು‘ ಎನ್ನುವ ಕವಿತೆ ಸಾಲೇ ಮನುಕುಲಕ್ಕೆ ಮಾನವೀಯತೆಯ ಕೈಗನ್ನಡಿಯಂತಿದೆ. ಕನ್ನಡ ಪತ್ರಿಕೋದ್ಯಮದಲ್ಲೂ ಅಸಾಧಾರಣ ಸಾಧನೆ ಮಾಡಿರುವ ಡಿ.ವಿ.ಜಿ ಕನ್ನಡ ಭಾಷೆ, ಸಾಹಿತ್ಯದ ರಸ ಋಷಿಯಾಗಿದ್ದಾರೆ’ ಎಂದರು.</p>.<p>ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ, ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದ ನಾಯ್ಕ, ಪದವಿ ಪೂರ್ವ ವಿಭಾಗ ಪ್ರಾಚಾರ್ಯೆ ವೀಣಾ ಕಾಮತ್, ಪಾಧ್ಯಾಪಕ ವಿ.ಆರ್. ಶಾನಭಾಗ ಇದ್ದರು. ಕೀರ್ತಿ ನಾಯ್ಕ ನಿರೂಪಿಸಿದರು. ಮಂಕುತಿಮ್ಮನ ಕಗ್ಗದ ಆಯ್ದ ಪದ್ಯಗಳನ್ನು ವಾಚಿಸಲಾಯಿತು.</p>.<p>ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲೂ ‘ಮಂಕುತಿಮ್ಮನ ಕಗ್ಗ-ವಾಚನ ಕಾರ್ಯಕ್ರಮ' ಆಯೋಜಿಸಲಾಗಿತ್ತು. ಪ್ರೇರಣಾ ಟ್ರಸ್ಟ್ ಮುಖ್ಯಸ್ಥ ವಸಂತ ಭಟ್ಟ ಶಿಕ್ಷಕ ಕಿರಣ ಪ್ರಭು, ಅಮಿತ್ ಭಟ್, ನಿವೃತ್ತ ಮುಖ್ಯ ಶಿಕ್ಷಕ ಎನ್.ಆರ್. ಗಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>