<p><strong>ಕುಮಟಾ</strong>: ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆಗಳು ಸೇರಿದಂತೆ ವಾರ್ಡ್ಗಳ ವ್ಯಾಪ್ತಿಯ ಮಾರ್ಗಗಳು ಹದಗೆಟ್ಟಿದ್ದು, ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುವ ಸ್ಥಿತಿ ಎದುರಾಗಿದೆ.</p>.<p>ಪಟ್ಟಣದ ಪಿಕ್ಅಪ್ ಬಸ್ ನಿಲ್ದಾಣದಿಂದ ಮೀನು ಮಾರುಕಟ್ಟೆಗೆ ತಿರುಗುವ ಭಾಗ್ವತ ಪೆಟ್ರೋಲ್ ಬಂಕ್ ರಸ್ತೆ, ವಿವೇಕನಗರ ರಸ್ತೆ, ಕೊಪ್ಪಳಕರವಾಡಿ ರಸ್ತೆ, ನೆಹರು ನಗರ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳ ರಸ್ತೆಗಳು ಕಳೆದ ಎರಡು ವರ್ಷಗಳಿಂದ ದುರಸ್ತಿ ಕಂಡಿಲ್ಲ ಎಂಬುದು ಜನರ ದೂರು.</p>.<p>ಹೊಂಡಬಿದ್ದ ರಸ್ತೆಗಳಲ್ಲಿ ವಾಹನಗಳು, ಆಟೊಗಳು, ದ್ವಿಚಕ್ರ ವಾಹನ ಸವಾರರು ಹರಸಾಹಸದೊಂದಿಗೆ ಸಾಗುವ ಅನಿವಾರ್ಯತೆ ಉಂಟಾಗಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿನ ಹೊಂಡದಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿಯಾಗುತ್ತಿದೆ.</p>.<p>‘ಮಳೆಗಾಲದಲ್ಲಿ ವಿವೇಕನಗರ ಐದನೇ ಕ್ರಾಸ್ ರಸ್ತೆಗೆ ಮುಖ್ಯ ರಸ್ತೆಯ ನೀರು ನುಗ್ಗಿ ಜಲಾವೃತಗೊಳ್ಳುತ್ತದೆ. ಇದನ್ನು ಸ್ಥಳೀಯ ಶಾಸಕರು, ಪುರಸಭೆ ಮುಖ್ಯಾಧಿಕಾರಿಗಳು ಬಂದು ಪರಿಶೀಲಿಸಿದ್ದರು. ಆದರೆ, ಈವರೆಗೆ ರಸ್ತೆ ದುರಸ್ತಿ ಕಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಜಯದೇವ ಬಳಗಂಡಿ ದೂರಿದರು.</p>.<p>ಇದು ಕೇವಲ ಒಂದು ಬಡಾವಣೆಯ ಸಮಸ್ಯೆಯಾಗಿರದೆ, ಪಟ್ಟಣದ ವಿವಿಧ ವಾರ್ಡುಗಳ ರಸ್ತೆಗಳ ಕುರಿತಾಗಿಯೂ ಜನರು ದೂರುತ್ತಿದ್ದಾರೆ. ರಸ್ತೆಗಳನ್ನು ದುರಸ್ತಿಪಡಿಸುವಂತೆ ಪುರಸಭೆಗೆ ಹಲವು ಬಾರಿ ಮನವಿಯನ್ನೂ ಮಾಡಿದ್ದಾರೆ.</p>.<p>‘ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಹಣ ಬಂದಿಲ್ಲ. ಈಚೆಗಷ್ಟೆ ಮಂಜೂರಾಗಿ ಬಂದ ₹1.30 ಕೋಟಿ 15ನೇ ಹಣಕಾಸು ನಿಧಿಯಲ್ಲಿ ₹30 ಲಕ್ಷ ಮಾತ್ರ ರಸ್ತೆ ಹೊಂಡ ಮುಚ್ಚಲು ಬಳಸಬಹುದು. ಹಿಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮಂಜೂರಾದ ₹5 ಲಕ್ಷ ಮೊತ್ತದಲ್ಲಿ ಕೆಲ ಅಗತ್ಯ ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗಿತ್ತು. ಪಟ್ಟಣದ ಸುಮಾರು 8 ಕಿ.ಮೀ. ರಸ್ತೆ ದುರಸ್ತಿ ಕಾರ್ಯ ಆಗಬೇಕಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾದರ ಕಲಾದಗಿ ಪ್ರತಿಕ್ರಿಯಿಸಿದರು.</p>.<p>‘ಪಟ್ಟಣದ ತೀರಾ ಹಾಳಾದ ರಸ್ತೆ ದುರಸ್ತಿಗೆ ಕನಿಷ್ಠ ₹5 ಕೋಟಿ ಮೊತ್ತ ಬೇಕು. ಮಳೆಗಾಲ ಆರಂಭವಾಗುವುದರೊಳಗೆ ತೀರಾ ಅಗತ್ಯವಿದ್ದ ರಸ್ತೆ ದುರಸ್ತಿಗೆ ಬೇರೆ ಬೇರೆ ಮೂಲದಿಂದ ಹಣಕಾಸು ನೆರವು ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಕೆಲ ರಸ್ತೆಗಳನ್ನು ಶಾಸಕರ ಅಭಿವೃದ್ಧಿ ನಿಧಿ ಮೊತ್ತದಿಂದ ದುರಸ್ತಿ ಮಾಡಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.</p>.<div><blockquote>ರಾಜ್ಯದಲ್ಲಿ ಈಗಿನ ಸರ್ಕಾರದ ಅವಧಿಯಲ್ಲಿ ಪಟ್ಟಣ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ</blockquote><span class="attribution">ದಿನಕರ ಶೆಟ್ಟಿ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಮಟಾ</strong>: ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆಗಳು ಸೇರಿದಂತೆ ವಾರ್ಡ್ಗಳ ವ್ಯಾಪ್ತಿಯ ಮಾರ್ಗಗಳು ಹದಗೆಟ್ಟಿದ್ದು, ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುವ ಸ್ಥಿತಿ ಎದುರಾಗಿದೆ.</p>.<p>ಪಟ್ಟಣದ ಪಿಕ್ಅಪ್ ಬಸ್ ನಿಲ್ದಾಣದಿಂದ ಮೀನು ಮಾರುಕಟ್ಟೆಗೆ ತಿರುಗುವ ಭಾಗ್ವತ ಪೆಟ್ರೋಲ್ ಬಂಕ್ ರಸ್ತೆ, ವಿವೇಕನಗರ ರಸ್ತೆ, ಕೊಪ್ಪಳಕರವಾಡಿ ರಸ್ತೆ, ನೆಹರು ನಗರ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳ ರಸ್ತೆಗಳು ಕಳೆದ ಎರಡು ವರ್ಷಗಳಿಂದ ದುರಸ್ತಿ ಕಂಡಿಲ್ಲ ಎಂಬುದು ಜನರ ದೂರು.</p>.<p>ಹೊಂಡಬಿದ್ದ ರಸ್ತೆಗಳಲ್ಲಿ ವಾಹನಗಳು, ಆಟೊಗಳು, ದ್ವಿಚಕ್ರ ವಾಹನ ಸವಾರರು ಹರಸಾಹಸದೊಂದಿಗೆ ಸಾಗುವ ಅನಿವಾರ್ಯತೆ ಉಂಟಾಗಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿನ ಹೊಂಡದಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿಯಾಗುತ್ತಿದೆ.</p>.<p>‘ಮಳೆಗಾಲದಲ್ಲಿ ವಿವೇಕನಗರ ಐದನೇ ಕ್ರಾಸ್ ರಸ್ತೆಗೆ ಮುಖ್ಯ ರಸ್ತೆಯ ನೀರು ನುಗ್ಗಿ ಜಲಾವೃತಗೊಳ್ಳುತ್ತದೆ. ಇದನ್ನು ಸ್ಥಳೀಯ ಶಾಸಕರು, ಪುರಸಭೆ ಮುಖ್ಯಾಧಿಕಾರಿಗಳು ಬಂದು ಪರಿಶೀಲಿಸಿದ್ದರು. ಆದರೆ, ಈವರೆಗೆ ರಸ್ತೆ ದುರಸ್ತಿ ಕಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಜಯದೇವ ಬಳಗಂಡಿ ದೂರಿದರು.</p>.<p>ಇದು ಕೇವಲ ಒಂದು ಬಡಾವಣೆಯ ಸಮಸ್ಯೆಯಾಗಿರದೆ, ಪಟ್ಟಣದ ವಿವಿಧ ವಾರ್ಡುಗಳ ರಸ್ತೆಗಳ ಕುರಿತಾಗಿಯೂ ಜನರು ದೂರುತ್ತಿದ್ದಾರೆ. ರಸ್ತೆಗಳನ್ನು ದುರಸ್ತಿಪಡಿಸುವಂತೆ ಪುರಸಭೆಗೆ ಹಲವು ಬಾರಿ ಮನವಿಯನ್ನೂ ಮಾಡಿದ್ದಾರೆ.</p>.<p>‘ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಹಣ ಬಂದಿಲ್ಲ. ಈಚೆಗಷ್ಟೆ ಮಂಜೂರಾಗಿ ಬಂದ ₹1.30 ಕೋಟಿ 15ನೇ ಹಣಕಾಸು ನಿಧಿಯಲ್ಲಿ ₹30 ಲಕ್ಷ ಮಾತ್ರ ರಸ್ತೆ ಹೊಂಡ ಮುಚ್ಚಲು ಬಳಸಬಹುದು. ಹಿಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮಂಜೂರಾದ ₹5 ಲಕ್ಷ ಮೊತ್ತದಲ್ಲಿ ಕೆಲ ಅಗತ್ಯ ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗಿತ್ತು. ಪಟ್ಟಣದ ಸುಮಾರು 8 ಕಿ.ಮೀ. ರಸ್ತೆ ದುರಸ್ತಿ ಕಾರ್ಯ ಆಗಬೇಕಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾದರ ಕಲಾದಗಿ ಪ್ರತಿಕ್ರಿಯಿಸಿದರು.</p>.<p>‘ಪಟ್ಟಣದ ತೀರಾ ಹಾಳಾದ ರಸ್ತೆ ದುರಸ್ತಿಗೆ ಕನಿಷ್ಠ ₹5 ಕೋಟಿ ಮೊತ್ತ ಬೇಕು. ಮಳೆಗಾಲ ಆರಂಭವಾಗುವುದರೊಳಗೆ ತೀರಾ ಅಗತ್ಯವಿದ್ದ ರಸ್ತೆ ದುರಸ್ತಿಗೆ ಬೇರೆ ಬೇರೆ ಮೂಲದಿಂದ ಹಣಕಾಸು ನೆರವು ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಕೆಲ ರಸ್ತೆಗಳನ್ನು ಶಾಸಕರ ಅಭಿವೃದ್ಧಿ ನಿಧಿ ಮೊತ್ತದಿಂದ ದುರಸ್ತಿ ಮಾಡಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.</p>.<div><blockquote>ರಾಜ್ಯದಲ್ಲಿ ಈಗಿನ ಸರ್ಕಾರದ ಅವಧಿಯಲ್ಲಿ ಪಟ್ಟಣ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ</blockquote><span class="attribution">ದಿನಕರ ಶೆಟ್ಟಿ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>