ಇ–ಖಾತೆ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಆನವಟ್ಟಿ, ‘ನಿಯಮದ ತೊಡಕಿನಿಂದ ಮನೆ ಕಟ್ಟುವ ಪ್ರಮಾಣ ಕಡಿಮೆಯಾಗಿದೆ. ಕಟ್ಟಡ ಕಾರ್ಮಿಕರು, ಬಾರ್ ಬೆಂಡರ್ಸ್, ಪೇಂಟರ್ಸ್, ಕಾರ್ಪೆಂಟರ್ಸ್ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು’ ಎಂದರು. ಪ್ರಮುಖರಾದ ನಾಗರಾಜ ಭಟ್ಟ, ರಾಜಾರಾಮ ಹೆಗಡೆ, ವೆಂಕಟೇಶ ನಾಯ್ಕ, ಆರ್.ಜಿ.ನಾಯಕ, ರಾಜು ಪೈ ಇದ್ದರು.