ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಭಾಷೆ ಮಾತ್ರವಲ್ಲ, ಕನ್ನಡಿಗರನ್ನು ಸಹ ತಿರಸ್ಕರಿಸಲಾಗುತ್ತಿದೆ. ಅನ್ಯ ಭಾಷಿಕ ಸಿಬ್ಬಂದಿಯಿಂದ ಕನ್ನಡ ಭಾಷೆ ಮಾತ್ರ ಗೊತ್ತಿರುವ ಗ್ರಾಹಕರಿಗೆ ಬ್ಯಾಂಕ್ಗಳಲ್ಲಿ ವ್ಯವಹರಿಸುವುದು ಕಷ್ಟವಾಗಿದೆ. ಈ ಬಗ್ಗೆ ಗಮನ ಸೆಳೆಯಲು ಜುಲೈ 7ರಿಂದ ಅಭಿಯಾನ ನಡೆಸಲಾಗುತ್ತದೆ. ಶಿರಸಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ನ ಪ್ರತಿ ಶಾಖೆಗೆ ತೆರಳಿ, ಅಲ್ಲಿನ ಮಾಹಿತಿ ಫಲಕ, ಚಲನ್, ಇತರ ದೈನಂದಿನ ಅಗತ್ಯಗಳು ಕನ್ನಡದಲ್ಲೇ ಇರುವಂತೆ ಒತ್ತಾಯಿಸಿ, ಪ್ರಬಂಧಕರಿಗೆ ಎಚ್ಚರಿಕೆ ಪತ್ರ ನೀಡಲಾಗುವುದು’ ಎಂದರು.