ಅಭಿರಾಮ್ ಹೆಗಡೆ ಮಾತನಾಡಿ, ಮೂರನೇ ಬಾರಿ ಮೋದಿ ಪ್ರಧಾನಿಯಾಗಬೇಕು. ಕಾಗೇರಿ ಅವರು ಅತ್ಯಧಿಕ ಮತಗಳಿಂದ ಸಂಸದರಾಗಬೇಕು. ಅವರು ಮತ್ತೊಮ್ಮೆ ನಮ್ಮ ಪ್ರತಿನಿಧಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಪಕ್ಷವನ್ನು ಸೇರಿದ್ದೇನೆ. ಈ ಹಿಂದೆಯೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಹುದ್ದೆಯ ಆಸೆಗಾಗಿ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು. ಇವರೊಂದಿಗೆ ನಾಗರಾಜ ಹೆಗಡೆ ಹಾಲಳ್ಳ, ರಮಣ ಹೆಗಡೆ ಕಕ್ಕೋಡ, ಮಂಜಣ್ಣ ಜಿಗಳೇಮನೆ, ಸೀತಾರಾಮ್ ಹೆಗಡೆ ಹೆಗಡೆಕಟ್ಟಾ, ಮಂಜು ಗೌಡ ಹೆಗ್ಗಾರ, ಉಮೇಶ್ ಹೆಗಡೆ ಕೂಗ್ತೇಮನೆ ಪಕ್ಷ ಸೇರಿದರು.