<p><strong>ಯಲ್ಲಾಪುರ:</strong> ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರು ಕಾಡಾನೆ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಇಲ್ಲಿನ ಹೆಗ್ಗಾಪುರ, ಕರಡೊಳ್ಳಿ, ಹುಲಗೋಡ, ಹುಣಶೆಟ್ಟಿಕೊಪ್ಪ, ಕಳಸೂರು ಭಾಗದಲ್ಲಿ ಆನೆಗಳ ಹಾವಳಿ ನಿರಂತರವಾಗಿದೆ.</p>.<p>‘5 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆದಿದ್ದೆ. ಆನೆದಾಳಿಗೆ ಸಂಪೂರ್ಣ ಬೆಳೆ ಹಾನಿಯಾಗಿದೆ’ ಎನ್ನುತ್ತಾರೆ ಹೆಗ್ಗಾಪುರದ ರೈತ ಮೋಹನ ಕೃಷ್ಣ ದೇಸಾಯಿ.</p>.<p>‘ಜೋಳ, ಕಬ್ಬು, ಭತ್ತ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಆನೆ ದಾಳಿಯಾಗದಂತೆ ಶಾಶ್ವತ ಪರಿಹಾರ ಕ್ರಮ ಆಗಬೇಕಿದೆ. ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದಲ್ಲಿ 9-10 ಆನೆಗಳ ಹಿಂಡು ಸಂಚರಿಸುತ್ತಿದ್ದು ಅವುಗಳನ್ನು ಸ್ಥಳಾಂತರಿಸಬೇಕು’ ಎಂಬುದಾಗಿ ಗ್ರಾಮದೇವಿ ಸಹಕಾರ ಸಂಘದ ಅಧ್ಯಕ್ಷ ಮಹೇಶ ಕೃಷ್ಣ ದೇಸಾಯಿ ಆಗ್ರಹಿಸುತ್ತಾರೆ.</p>.<p>ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೆರೆಗಳಿವೆ. ಆದರೆ ಬೇಸಿಗೆಯ ಅವಧಿಯಲ್ಲಿ ಇಲ್ಲಿನ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಮದನೂರು ಗ್ರಾಮದ ತಾವರಕಟ್ಟಾ ಮತ್ತು ಹುಣಶೆಟ್ಟಿಕೊಪ್ಪ ಕೆರೆಗಳ ಹೂಳೆತ್ತುವ ಕೆಲಸ ನಡೆದಿದ್ದು ಈ ಭಾಗದ ಎಲ್ಲ ಕೆರೆಗಳ ಹೂಳೆತ್ತುವ ಮೂಲಕ ಅಂತರ್ಜಲ ಹೆಚ್ಚಿಸಬೇಕು ಎಂಬುದು ಜನರ ಆಗ್ರಹ.</p>.<p>‘ಹಳ್ಳಿಗಳ ನಡುವೆ ದೂರದ ಅಂತರ ಇರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯ. ಸರ್ಕಾರ ನೀಡುತ್ತಿರುವ ಅನುದಾನ ಎಲ್ಲಿಯೂ ಸಾಕಾಗದು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ ₹2-3 ಕೋಟಿ ವ್ಯಯಿಸಲಾಗುತ್ತಿದೆ. ವಸತಿ ರಹಿತರಿಗೆ ವಿವಿಧ ಯೋಜನೆಯಲ್ಲಿ 270ಕ್ಕೂ ಅಧಿಕ ಮನೆ ನೀಡಲಾಗಿದೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯದ ಸುತ್ತ ಐಬೆಕ್ಸ್ ಬೇಲಿ ನಿರ್ಮಿಸಬೇಕು. ಹೆಗ್ಗಾಪುರ ರಸ್ತೆ, ಕಳಸೂರು-ಭದ್ರಾಪುರ ರಸ್ತೆ, ಡೋಮಗೇರಿ-ಧೂಳಿಕೊಪ್ಪ ರಸ್ತೆ ಅಭಿವೃದ್ಧಿ ಆಗಬೇಕಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ಗಣಪತಿ ತಿನೇಕರ.</p>.<div><blockquote>ಹುಣಶೆಟ್ಟಿಕೊಪ್ಪದಲ್ಲಿ ಸೂಕ್ತ ಸ್ಥಳ ಗುರುತಿಸಿ ಸ್ವಂತ ಕಟ್ಟಡದಲ್ಲಿ ಹೈಸ್ಕೂಲ್ ಕಾರ್ಯನಿರ್ವಹಿಸಬೇಕಿದೆ. ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮವಾಗಬೇಕು </blockquote><span class="attribution">ರಾಜೇಶ ಗಣಪತಿ ತಿನೇಕರ ಮದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ</span></div>.<h2>ಬಸ್ ನಿಲುಗಡೆಗೆ ಬೇಡಿಕೆ </h2>.<p>‘ಅಲ್ಕೇರಿ ಗೌಳಿವಾಡಾ ಮಂಗ್ಯಾನತಾವರಗೆರೆ ಹುಣಶೆಟ್ಟಿಕೊಪ್ಪ ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳು ಇದುವರೆಗೂ 4-5 ಕಿ.ಮೀ ನಡೆದು ಕಿರವತ್ತಿ ಪ್ರೌಢಶಾಲೆಗೆ ಹೋಗಬೇಕಿತ್ತು. ಆದರೆ ಈಚೆಗೆ ಶೂನ್ಯ ದಾಖಲಾತಿ ಕಾರಣ ರದ್ದಾದ ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. </p><p>ಇದರಿಂದ ಕರಡೊಳ್ಳಿ ಕಳಸೂರು ಹುಲಗೋಡ ಬಸಳೇಬೈಲ್ ಖಂಡ್ರನಕೊಪ್ಪ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಯಲ್ಲಾಪುರ-ಹೊಸಳ್ಳಿ-ಬೈಲಂದೂರು ಬಸ್ಗೆ ಅಲ್ಕೇರಿ ಗೌಳಿವಾಡ ಕ್ರಾಸ್ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಈ ಭಾಗಕ್ಕೆ ಬಸ್ ಸಂಚಾರ ಹೆಚ್ಚಿಸಬೇಕು’ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ:</strong> ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರು ಕಾಡಾನೆ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಇಲ್ಲಿನ ಹೆಗ್ಗಾಪುರ, ಕರಡೊಳ್ಳಿ, ಹುಲಗೋಡ, ಹುಣಶೆಟ್ಟಿಕೊಪ್ಪ, ಕಳಸೂರು ಭಾಗದಲ್ಲಿ ಆನೆಗಳ ಹಾವಳಿ ನಿರಂತರವಾಗಿದೆ.</p>.<p>‘5 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆದಿದ್ದೆ. ಆನೆದಾಳಿಗೆ ಸಂಪೂರ್ಣ ಬೆಳೆ ಹಾನಿಯಾಗಿದೆ’ ಎನ್ನುತ್ತಾರೆ ಹೆಗ್ಗಾಪುರದ ರೈತ ಮೋಹನ ಕೃಷ್ಣ ದೇಸಾಯಿ.</p>.<p>‘ಜೋಳ, ಕಬ್ಬು, ಭತ್ತ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಆನೆ ದಾಳಿಯಾಗದಂತೆ ಶಾಶ್ವತ ಪರಿಹಾರ ಕ್ರಮ ಆಗಬೇಕಿದೆ. ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದಲ್ಲಿ 9-10 ಆನೆಗಳ ಹಿಂಡು ಸಂಚರಿಸುತ್ತಿದ್ದು ಅವುಗಳನ್ನು ಸ್ಥಳಾಂತರಿಸಬೇಕು’ ಎಂಬುದಾಗಿ ಗ್ರಾಮದೇವಿ ಸಹಕಾರ ಸಂಘದ ಅಧ್ಯಕ್ಷ ಮಹೇಶ ಕೃಷ್ಣ ದೇಸಾಯಿ ಆಗ್ರಹಿಸುತ್ತಾರೆ.</p>.<p>ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೆರೆಗಳಿವೆ. ಆದರೆ ಬೇಸಿಗೆಯ ಅವಧಿಯಲ್ಲಿ ಇಲ್ಲಿನ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಮದನೂರು ಗ್ರಾಮದ ತಾವರಕಟ್ಟಾ ಮತ್ತು ಹುಣಶೆಟ್ಟಿಕೊಪ್ಪ ಕೆರೆಗಳ ಹೂಳೆತ್ತುವ ಕೆಲಸ ನಡೆದಿದ್ದು ಈ ಭಾಗದ ಎಲ್ಲ ಕೆರೆಗಳ ಹೂಳೆತ್ತುವ ಮೂಲಕ ಅಂತರ್ಜಲ ಹೆಚ್ಚಿಸಬೇಕು ಎಂಬುದು ಜನರ ಆಗ್ರಹ.</p>.<p>‘ಹಳ್ಳಿಗಳ ನಡುವೆ ದೂರದ ಅಂತರ ಇರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯ. ಸರ್ಕಾರ ನೀಡುತ್ತಿರುವ ಅನುದಾನ ಎಲ್ಲಿಯೂ ಸಾಕಾಗದು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ ₹2-3 ಕೋಟಿ ವ್ಯಯಿಸಲಾಗುತ್ತಿದೆ. ವಸತಿ ರಹಿತರಿಗೆ ವಿವಿಧ ಯೋಜನೆಯಲ್ಲಿ 270ಕ್ಕೂ ಅಧಿಕ ಮನೆ ನೀಡಲಾಗಿದೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯದ ಸುತ್ತ ಐಬೆಕ್ಸ್ ಬೇಲಿ ನಿರ್ಮಿಸಬೇಕು. ಹೆಗ್ಗಾಪುರ ರಸ್ತೆ, ಕಳಸೂರು-ಭದ್ರಾಪುರ ರಸ್ತೆ, ಡೋಮಗೇರಿ-ಧೂಳಿಕೊಪ್ಪ ರಸ್ತೆ ಅಭಿವೃದ್ಧಿ ಆಗಬೇಕಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ಗಣಪತಿ ತಿನೇಕರ.</p>.<div><blockquote>ಹುಣಶೆಟ್ಟಿಕೊಪ್ಪದಲ್ಲಿ ಸೂಕ್ತ ಸ್ಥಳ ಗುರುತಿಸಿ ಸ್ವಂತ ಕಟ್ಟಡದಲ್ಲಿ ಹೈಸ್ಕೂಲ್ ಕಾರ್ಯನಿರ್ವಹಿಸಬೇಕಿದೆ. ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮವಾಗಬೇಕು </blockquote><span class="attribution">ರಾಜೇಶ ಗಣಪತಿ ತಿನೇಕರ ಮದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ</span></div>.<h2>ಬಸ್ ನಿಲುಗಡೆಗೆ ಬೇಡಿಕೆ </h2>.<p>‘ಅಲ್ಕೇರಿ ಗೌಳಿವಾಡಾ ಮಂಗ್ಯಾನತಾವರಗೆರೆ ಹುಣಶೆಟ್ಟಿಕೊಪ್ಪ ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳು ಇದುವರೆಗೂ 4-5 ಕಿ.ಮೀ ನಡೆದು ಕಿರವತ್ತಿ ಪ್ರೌಢಶಾಲೆಗೆ ಹೋಗಬೇಕಿತ್ತು. ಆದರೆ ಈಚೆಗೆ ಶೂನ್ಯ ದಾಖಲಾತಿ ಕಾರಣ ರದ್ದಾದ ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. </p><p>ಇದರಿಂದ ಕರಡೊಳ್ಳಿ ಕಳಸೂರು ಹುಲಗೋಡ ಬಸಳೇಬೈಲ್ ಖಂಡ್ರನಕೊಪ್ಪ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಯಲ್ಲಾಪುರ-ಹೊಸಳ್ಳಿ-ಬೈಲಂದೂರು ಬಸ್ಗೆ ಅಲ್ಕೇರಿ ಗೌಳಿವಾಡ ಕ್ರಾಸ್ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಈ ಭಾಗಕ್ಕೆ ಬಸ್ ಸಂಚಾರ ಹೆಚ್ಚಿಸಬೇಕು’ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>