ಕವಳೆ ಮಠದ ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿ ರಥಕಾಣಿಕೆ ನೆರವೇರಿಸಿದರು. ಭಟ್ಕಳ್ ಡಿ.ಎಸ್.ಪಿ., ಗೋಕರ್ಣ ಠಾಣಾ ನಿರೀಕ್ಷಕ ಮಂಜುನಾಥ ಗೌಡ ಸ್ಥಳದಲ್ಲಿ ಉಪಸ್ಥಿತರಿದ್ದು, ಇವರ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ತ ಬಂದವಸ್ತ ಏರ್ಪಡಿಸಿ ಯಾವುದೇ ಅವಘಡ ಆಗದಂತೆ ನೋಡಿಕೊಂಡರು.
ರಾರಾಜಿಸಿದ ಸಿಮೆಂಟ್ ರಸ್ತೆ ಫಲಕ: ರಥಬೀದಿಯಲ್ಲಿ ಸಿಮೆಂಟ್ ರಸ್ತೆ ಮಾಡುವುದನ್ನು ವಿರೋಧಿಸಿ, ಮಹಾರಥದ ಅಂತರಂಗ ಎಂಬ ಹೆಸರಿನಲ್ಲಿ ರಥದ ಸುತ್ತಮುತ್ತಲೂ ಫಲಕ ಅಳವಡಿಸಿದ್ದು ಎಲ್ಲರ ಗಮನ ಸೆಳೆಯಿತು. ಈಗಾಗಲೇ ನನಗೆ ವಯಸ್ಸಾಗಿದೆ. ಕಾಂಕ್ರೀಟ್ ರಸ್ತೆಯಾಗಲಿದೆಯಂತೆ. ಈ ಕಾಂಕ್ರೀಟ್ ರಸ್ತೆಯಿಂದ ನನ್ನನ್ನು ರಕ್ಷಿಸಿ ಎಂದು ರಥದ ಚಿತ್ರದೊಂದಿಗೆ ಫಲಕದಲ್ಲಿ ಬರೆಯಲಾಗಿದೆ.