<p><strong>ದಾಂಡೇಲಿ</strong>: ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ಕಾಳಿ ನದಿಯಲ್ಲಿ ಗುರುವಾರ ಬೆಳಿಗ್ಗೆ ನೀರಿಗಿಳಿದ ವ್ಯಕ್ತಿಯನ್ನು ಮೊಸಳೆ ಎಳೆದುಕೊಂಡು ಹೋಗಿದೆ. ಬಂಗೂರ ನಗರ ನಿವಾಸಿ ಪಿತಾಂಬರದಾಸ ಮಹೇಶ್ವರಿ (65) ಮೃತರು. ಅವರ ಮೃತದೇಹವು ಕುಳಗಿ ಸೇತುವೆ ಲಯ ಕೆಳಭಾಗದಲ್ಲಿ ಪತ್ತೆಯಾಗಿದೆ.</p>.<p>'ಈಶ್ವರ ದೇವಸ್ಥಾನದಿಂದ ಮೆಟ್ಟಿಲು ಇಳಿದು ನದಿಯಲ್ಲಿ ಈಜುತ್ತಿದ್ದಾಗ ನದಿಯ ಮಧ್ಯದಿಂದ ಎರಡು ಮೊಸಳೆಗಳು ಒಮ್ಮೆಲೇ ದಾಳಿ ಮಾಡಿ ಅವರನ್ನು ಎಳೆದುಕೊಂಡು ಹೋಗಿವೆ. ನಾನು ವಾಯುವಿಹಾರಕ್ಕೆಂದು ಸೇತುವೆ ಮೇಲಿದ್ದಾಗ ಈ ದೃಶ್ಯವನ್ನು ನೋಡಿದ್ದೇನೆ' ಎಂದು ಪ್ರತ್ಯಕ್ಷದರ್ಶಿ ಕೃಷ್ಣಾ ಪೂಜಾರಿ ಹೇಳಿದ್ದಾರೆ.</p>.<p>ದಾಂಡೇಲಿಯಲ್ಲಿ ಒಂದು ವರ್ಷದಲ್ಲಿ ನಡೆದ ಮೊಸಳೆ ದಾಳಿಯ ಐದನೇ ದುರಂತ ಇದಾಗಿದೆ. ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಅಪ್ಪಾರಾವ್ ಕಲ್ಲಶೆಟ್ಟಿ, ಸಂದೀಪ ನಾಯಕ, ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ನಗರಾಡಳಿತ ಮತ್ತು ತಾಲ್ಲೂಕಾಡಳಿತದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿಭಾಗವಹಿಸಿದ್ದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಂಡೇಲಿ</strong>: ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ಕಾಳಿ ನದಿಯಲ್ಲಿ ಗುರುವಾರ ಬೆಳಿಗ್ಗೆ ನೀರಿಗಿಳಿದ ವ್ಯಕ್ತಿಯನ್ನು ಮೊಸಳೆ ಎಳೆದುಕೊಂಡು ಹೋಗಿದೆ. ಬಂಗೂರ ನಗರ ನಿವಾಸಿ ಪಿತಾಂಬರದಾಸ ಮಹೇಶ್ವರಿ (65) ಮೃತರು. ಅವರ ಮೃತದೇಹವು ಕುಳಗಿ ಸೇತುವೆ ಲಯ ಕೆಳಭಾಗದಲ್ಲಿ ಪತ್ತೆಯಾಗಿದೆ.</p>.<p>'ಈಶ್ವರ ದೇವಸ್ಥಾನದಿಂದ ಮೆಟ್ಟಿಲು ಇಳಿದು ನದಿಯಲ್ಲಿ ಈಜುತ್ತಿದ್ದಾಗ ನದಿಯ ಮಧ್ಯದಿಂದ ಎರಡು ಮೊಸಳೆಗಳು ಒಮ್ಮೆಲೇ ದಾಳಿ ಮಾಡಿ ಅವರನ್ನು ಎಳೆದುಕೊಂಡು ಹೋಗಿವೆ. ನಾನು ವಾಯುವಿಹಾರಕ್ಕೆಂದು ಸೇತುವೆ ಮೇಲಿದ್ದಾಗ ಈ ದೃಶ್ಯವನ್ನು ನೋಡಿದ್ದೇನೆ' ಎಂದು ಪ್ರತ್ಯಕ್ಷದರ್ಶಿ ಕೃಷ್ಣಾ ಪೂಜಾರಿ ಹೇಳಿದ್ದಾರೆ.</p>.<p>ದಾಂಡೇಲಿಯಲ್ಲಿ ಒಂದು ವರ್ಷದಲ್ಲಿ ನಡೆದ ಮೊಸಳೆ ದಾಳಿಯ ಐದನೇ ದುರಂತ ಇದಾಗಿದೆ. ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಅಪ್ಪಾರಾವ್ ಕಲ್ಲಶೆಟ್ಟಿ, ಸಂದೀಪ ನಾಯಕ, ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ನಗರಾಡಳಿತ ಮತ್ತು ತಾಲ್ಲೂಕಾಡಳಿತದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿಭಾಗವಹಿಸಿದ್ದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>