‘ತಾಲ್ಲೂಕಿನಲ್ಲಿ 548 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತದೆ. ಈ ವರ್ಷ ಹೂವು ಬಿಡುವ ಅವಧಿ ತಡವಾಗಿದ್ದರಿಂದ ಮಾರುಕಟ್ಟೆಗೆ ಮಾವು ಬರಲು ತಡವಾಗಿದೆ. ಇಳುವರಿಯೂ ಶೇ 15ರಿಂದ 20ರಷ್ಟು ಕಡಿಮೆ ಆಗಿದೆ. ಬೇರೆ ಮಾರುಕಟ್ಟೆಗಳಲ್ಲಿ ಮಾವು ಮೊದಲೇ ಬಂದಿದ್ದರಿಂದ ತಾಲ್ಲೂಕಿನಲ್ಲಿ ದರ ಕುಸಿತ ಆಗಿರಬಹುದು. ಮೊದಲ ಬಾರಿಗೆ ಮಾವು ಬೆಳೆಗೆ ವಿಮೆ ಮಾಡಿಸಲಾಗಿದ್ದು, ಹವಾಮಾನ ಆಧಾರಿತವಾಗಿ ಬೆಳೆ ವಿಮೆ ಪರಿಹಾರ ಬರಲಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೃಷ್ಣ ಕುಳ್ಳೂರ ತಿಳಿಸಿದರು.