<p><strong>ಕಾರವಾರ:</strong> ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯದ 31ನೇ ದಿನವಾದ ಶನಿವಾರ ಯಜುರ್ ಉಪಾಕರ್ಮ ನಡೆಯಿತು.</p>.<p>ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತು ಪಾರಂಪರಿಕ ಶಿಕ್ಷಣ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ ನೇತೃತ್ವದಲ್ಲಿ ಉಪಾಕರ್ಮಾಂಗ ವಿಧಿವಿಧಾನಗಳು ನೆರವೇರಿದವು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಭಕ್ತರು ಜನಿವಾರ ಧಾರಣೆ ಮಾಡಿದರು.</p>.<p>‘ವೇದಾಧ್ಯಯನವನ್ನೇ ಇಂದಿನ ಪೀಳಿಗೆ ಬಿಟ್ಟಿರುವ ಸಂದರ್ಭದಲ್ಲೂ ಇದು ಚೈತನ್ಯಕಾರಕ. ಜಾಢ್ಯದಿಂದ ಹೊರಬರಲು ಇಂಥ ಅನುಷ್ಠಾನ ಅಗತ್ಯ. ಇದು ಪ್ರತಿಯೊಬ್ಬರ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕರ್ಮಾಂಗಗಳನ್ನು ಮಾಡಬೇಕು’ ಎಂದು ನರಸಿಂಹ ಭಟ್ ಹೇಳಿದರು.</p>.<p>ಉದ್ಯಮಿ ಜಿ.ವಿ.ಹೆಗಡೆ ಕುಟುಂಬದವರು ಸರ್ವಸೇವೆ ನೆರವೇರಿಸಿದರು. ಸವಿತಾ ಸಮಾಜದ ವತಿಯಿಂದ ಈಶ್ವರ ಕೊಡೆಯ ದಂಪತಿ ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು. ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಅಮರೇಶ, ಬೀದರ್ನ ರಾಮಚಂದ್ರ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಸರ್ವ ಸಮಾಜ ಸಂಯೋಜಕ ಕೆ.ಎನ್.ಹೆಗಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯದ 31ನೇ ದಿನವಾದ ಶನಿವಾರ ಯಜುರ್ ಉಪಾಕರ್ಮ ನಡೆಯಿತು.</p>.<p>ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತು ಪಾರಂಪರಿಕ ಶಿಕ್ಷಣ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ ನೇತೃತ್ವದಲ್ಲಿ ಉಪಾಕರ್ಮಾಂಗ ವಿಧಿವಿಧಾನಗಳು ನೆರವೇರಿದವು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಭಕ್ತರು ಜನಿವಾರ ಧಾರಣೆ ಮಾಡಿದರು.</p>.<p>‘ವೇದಾಧ್ಯಯನವನ್ನೇ ಇಂದಿನ ಪೀಳಿಗೆ ಬಿಟ್ಟಿರುವ ಸಂದರ್ಭದಲ್ಲೂ ಇದು ಚೈತನ್ಯಕಾರಕ. ಜಾಢ್ಯದಿಂದ ಹೊರಬರಲು ಇಂಥ ಅನುಷ್ಠಾನ ಅಗತ್ಯ. ಇದು ಪ್ರತಿಯೊಬ್ಬರ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕರ್ಮಾಂಗಗಳನ್ನು ಮಾಡಬೇಕು’ ಎಂದು ನರಸಿಂಹ ಭಟ್ ಹೇಳಿದರು.</p>.<p>ಉದ್ಯಮಿ ಜಿ.ವಿ.ಹೆಗಡೆ ಕುಟುಂಬದವರು ಸರ್ವಸೇವೆ ನೆರವೇರಿಸಿದರು. ಸವಿತಾ ಸಮಾಜದ ವತಿಯಿಂದ ಈಶ್ವರ ಕೊಡೆಯ ದಂಪತಿ ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು. ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಅಮರೇಶ, ಬೀದರ್ನ ರಾಮಚಂದ್ರ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಸರ್ವ ಸಮಾಜ ಸಂಯೋಜಕ ಕೆ.ಎನ್.ಹೆಗಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>