ಯಲ್ಲಾಪುರ: ಚುನಾವಣಾ ನೀತಿ ಸಂಹಿತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ತಕ್ಷಣ ನೀತಿ ಸಂಹಿತೆ ಸಡಿಲಿಸುವಂತೆ ಶಾಸಕ ಶಿವರಾಮ ಹೆಬ್ಬಾರ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಅರಬೈಲು ಶಾಲಾ ಮತಗಟ್ಟೆಯಲ್ಲಿ ಮಂಗಳವಾರ ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾಲ್ಕು ತಿಂಗಳು ಮಳೆಗಾಲ, ಮೂರು ತಿಂಗಳು ನೀತಿ ಸಂಹಿತೆ ಆದರೆ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸಮಯ ಸಿಗಲಾರದು. ಹಾಗಾಗಿ ಕೂಡಲೇ ನೀತಿ ಸಂಹಿತೆ ಸಡಿಲಿಸಬೇಕು’ ಎಂದರು.