ಬೆಟ್ಟದ ಮೇಲಿರುವ ಈ ಪ್ರದೇಶವು ನಗರಸಭೆಯ 31ನೇ ವಾರ್ಡ್ನಲ್ಲಿದೆ. ನಗರದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದೆ. ಅರಣ್ಯದಿಂದ ಕೂಡಿರುವ ಈ ಪ್ರದೇಶದಲ್ಲಿದ್ದ ಕಚ್ಚಾ ರಸ್ತೆಯಲ್ಲಿ ಕಳೆದ ಮಳೆಗಾಲ ದೊಡ್ಡ ಹೊಂಡಗಳು ಉಂಟಾದವು. ಈಗ ಅಲ್ಲಿಗೆ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಮರದ ಕೋಲಿಗೆ ಚಾದರವನ್ನು ಜೋಳಿಗೆಯಂತೆ ಕಟ್ಟಿದ ಸಂಬಂಧಿಕರು, ಮಹಿಳೆಯನ್ನು ಅದರಲ್ಲಿ ಮಲಗಿಸಿದರು. ಬಳಿಕ ಹೆಗಲ ಮೇಲೆ ಹೊತ್ತುಕೊಂಡು ಕಾರವಾರಕ್ಕೆ ಬಂದು ಆಸ್ಪತ್ರೆಯೊಂದರಲ್ಲಿ ತುರ್ತು ಚಿಕಿತ್ಸೆ ಕೊಡಿಸಿದರು. ಬಳಿಕ ಮಂಗಳೂರಿಗೆ ಕಳುಹಿಸಿಕೊಟ್ಟರು.