ಘಟನೆಯಲ್ಲಿ ಸಿಬ್ಬಂದಿ ಪರಮೇಶ್ವರ ಮಡಿವಾಳ, ರಾಮತೀರ್ಥ ಬೆಳಗಾವಿ ಎಂಬುವವರಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿದೆ. ರಾಮಚಂದ್ರ, ರಂಗನಾಥ, ಶೀತಲ್ ರಾಮಚಂದ್ರ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.