‘ಮಣಿಪಾಲದ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ, ನೀರಿನಲ್ಲಿ ಮುಳುಗಿದ್ದರಿಂದ ಸಾವು ಸಂಭವಿಸಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಈ ಪ್ರಕರಣ ನಡೆದು ಐದು ವರ್ಷಗಳಾದವು. ಆದರೆ, ತನಿಖೆಯನ್ನು ಇನ್ನೂ ಯಾಕೆ ಎಳೆಯುತ್ತಿದ್ದಾರೆ? ಪ್ರಕರಣವನ್ನು ರಾಜಕೀಯಗೊಳಿಸಲಾಗಿದೆ. ಇದನ್ನು ಕೊಲೆಯೆಂದು ಸಾಬೀತು ಮಾಡಲಿ. ನಿಜವಾಗಿಯೂ ಹತ್ಯೆಯಾಗಿದ್ದರೆ ಹೋರಾಟಕ್ಕೆ ನಾವೂ ಸಿದ್ಧರಿದ್ದೇವೆ’ ಎಂದು ಹೇಳಿದರು.