<p><strong>ಹೊನ್ನಾವರ: ’</strong>ಅಜ್ಞಾನವೆಂಬ ನಿದ್ದೆಯಿಂದ ಜನರನ್ನು ಎಬ್ಬಿಸಿ ಜ್ಞಾನ ಮಾರ್ಗದಲ್ಲಿ ಸಾಗುವಂತೆ ಮಾಡಿದ ಆದಿ ಶಂಕರಾಚಾರ್ಯರು ಮನಸ್ಸಿನಲ್ಲಿ ಒಳ್ಳೆತನ ತುಂಬಿದ ವ್ಯಕ್ತಿಯಿಂದ ಮಾತ್ರ ಜಗತ್ತಿನ ಒಳಿತು ಸಾಧ್ಯ ಎಂಬುದನ್ನು ವಾಸ್ತವದಲ್ಲಿ ನಿರೂಪಿಸಿ ತೋರಿಸಿದರು’ ಎಂದು ಕರ್ಕಿ ದೈವಜ್ಞ ಮಠದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಶಾರದಾಂಬಾ ದೇವಸ್ಥಾನದಲ್ಲಿ ನಡೆದ ಶಂಕರ ಭಗವತ್ಪಾದರ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದರು.</p>.<p>ಹಳದೀಪುರ ಶಾಂತಾಶ್ರಮ ಮಠದ ವಾಮನಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿ, ‘ಶಂಕರಾಚಾರ್ಯರು ಯಾವುದೇ ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾಗಿಲ್ಲ.ಅವರ ಚಿಂತನೆ ಜಗತ್ತಿಗೇ ಬೆಳಕು ನೀಡಬಲ್ಲದು’ ಎಂದರು.</p>.<p>ಪತಂಜಲಿ ವೀಣಾಕರ ಶಂಕರಾಚಾರ್ಯರ ಜೀವನ ಹಾಗೂ ಸಾಧನೆಯ ಕುರಿತು ಉಪನ್ಯಾಸ ನೀಡಿದರು. ಸುಬ್ರಾಯ ಮೇಸ್ತ, ,ದಿನೇಶ ಕಾಮತ, ,ಉದ್ಯಮಿ ಯೋಗೇಶ ಮೇಸ್ತ ಇದ್ದರು.</p>.<p>ಚಿಣ್ಣರು ಶಂಕರಾಚಾರ್ಯರ ವೇಷ ತೊಟ್ಟು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ: ’</strong>ಅಜ್ಞಾನವೆಂಬ ನಿದ್ದೆಯಿಂದ ಜನರನ್ನು ಎಬ್ಬಿಸಿ ಜ್ಞಾನ ಮಾರ್ಗದಲ್ಲಿ ಸಾಗುವಂತೆ ಮಾಡಿದ ಆದಿ ಶಂಕರಾಚಾರ್ಯರು ಮನಸ್ಸಿನಲ್ಲಿ ಒಳ್ಳೆತನ ತುಂಬಿದ ವ್ಯಕ್ತಿಯಿಂದ ಮಾತ್ರ ಜಗತ್ತಿನ ಒಳಿತು ಸಾಧ್ಯ ಎಂಬುದನ್ನು ವಾಸ್ತವದಲ್ಲಿ ನಿರೂಪಿಸಿ ತೋರಿಸಿದರು’ ಎಂದು ಕರ್ಕಿ ದೈವಜ್ಞ ಮಠದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಶಾರದಾಂಬಾ ದೇವಸ್ಥಾನದಲ್ಲಿ ನಡೆದ ಶಂಕರ ಭಗವತ್ಪಾದರ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದರು.</p>.<p>ಹಳದೀಪುರ ಶಾಂತಾಶ್ರಮ ಮಠದ ವಾಮನಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿ, ‘ಶಂಕರಾಚಾರ್ಯರು ಯಾವುದೇ ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾಗಿಲ್ಲ.ಅವರ ಚಿಂತನೆ ಜಗತ್ತಿಗೇ ಬೆಳಕು ನೀಡಬಲ್ಲದು’ ಎಂದರು.</p>.<p>ಪತಂಜಲಿ ವೀಣಾಕರ ಶಂಕರಾಚಾರ್ಯರ ಜೀವನ ಹಾಗೂ ಸಾಧನೆಯ ಕುರಿತು ಉಪನ್ಯಾಸ ನೀಡಿದರು. ಸುಬ್ರಾಯ ಮೇಸ್ತ, ,ದಿನೇಶ ಕಾಮತ, ,ಉದ್ಯಮಿ ಯೋಗೇಶ ಮೇಸ್ತ ಇದ್ದರು.</p>.<p>ಚಿಣ್ಣರು ಶಂಕರಾಚಾರ್ಯರ ವೇಷ ತೊಟ್ಟು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>