‘ನಗರದಲ್ಲಿ ನೂರಾರು ಬಿಡಾಡಿ ದನಗಳಿದ್ದು, ಅವುಗಳ ರಕ್ಷಣೆಗೆ ಯಾವುದೇ ಕಾರ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಿಂದಲೂ ನಗರಕ್ಕೆ ನಿತ್ಯವೂ ಜಾನುವಾರುಗಳು ಬರುತ್ತವೆ. ಅವುಗಳಲ್ಲಿ ಕೆಲವಕ್ಕೆ ಹುಚ್ಚು ನಾಯಿ ಕಡಿದಿರುವ ಬಗ್ಗೆ ಸಾರ್ವಜನಿಕರು ನಗರಸಭೆಗೆ ತಿಳಿಸಿದ್ದಾರೆ. ಆದರೆ ನಗರಾಡಳಿತ ಮಾತ್ರ ತನ್ನ ಜವಾಬ್ದಾರಿ ಮರೆತಿದೆ’ ಎನ್ನುತ್ತಾರೆ ಮರಾಠಿಕೊಪ್ಪದ ಜನಾರ್ಧನ ಪೂಜಾರಿ.