ಎ.ಎಸ್.ಹೆಗಡೆ ಕವಲಕೊಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಡಿ.ಜಿ.ಹೆಗಡೆ ಕೆರೆಹೊಂಡ, ರವಿ ಹೆಗಡೆ ಹೂವಿನಮನೆ, ಸತೀಶ್ ಹೆಗಡೆ ದಂಟಕಲ್ ಇದ್ದರು. ಮೊದಲ ದಿನ ರಾಮಾಂಜನೇಯ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಎರಡನೆಯ ದಿನ ಶಾಸ್ತ್ರೀಯ ಸಂಗೀತ ಜುಗಲ್ಬಂದಿ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಹಿರೇಹದ್ದ, ನಾಗರಾಜ ಹೆಗಡೆ ಶಿರ್ನಾಲೆ, ಗಣೇಶ್ ಭಾಗ್ವತ ಗುಂಟ್ಕಲ್, ಮೇಧಾ ಭಟ್ ಅಗ್ಗೆರೆ, ವಾಣಿ ಹೆಗಡೆ ಗೊಂಟನಾಳ, ಅಜಯ್ ಹೆಗಡೆ ವರ್ಗಾಸರ, ಅನೀಶ್ ಹೆಗಡೆ ಹಿರೇಹದ್ದ ಪಾಲ್ಗೊಂಡಿದ್ದರು. ಶಶಿಭೂಷಣ ಹೆಗಡೆ ದೊಡ್ಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.