<p><strong>ಶಿರಸಿ:</strong> ಇಲ್ಲಿನ ಗಣೇಶನಗರದ ಬಳಿಯಿರುವ ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲಿ ಕೆರೆ ಅಗಲದಷ್ಟು ಹೊಂಡ ನಿರ್ಮಾಣವಾಗಿದೆ. ಇದು ಬಸ್ಗಳ ಸಂಚಾರಕ್ಕೆ ಕಂಟಕದ ಜತೆಗೆ ಜನರ ಜೀವಕ್ಕೂ ಅಪಾಯ ಆಹ್ವಾನ ನೀಡುತ್ತಿದೆ. </p>.<p>ಸೋಮವಾರ ಸ್ಥಳೀಯರು ಈ ದುರವಸ್ಥೆ ಖಂಡಿಸಿದ್ದಲ್ಲದೇ, ನಗರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>ಹಾವೇರಿ, ಹಾನಗಲ್ ಸೇರಿದಂತೆ ಬಯಲುಸೀಮೆ, ಉತ್ತರ ಕರ್ನಾಟಕ, ಹುಲೇಕಲ್ ಭಾಗದ ಸ್ಥಳೀಯ ಬಸ್ಸುಗಳು, ಗೋವಾ-ಪಣಜಿ, ಕಾರವಾರ ಹೀಗೆ ಅಂತರ್ ಜಿಲ್ಲೆ, ಹೊರ ರಾಜ್ಯಗಳಿಗೆ ತೆರಳುವ ಪ್ರತಿಯೊಂದು ಬಸ್ಸು ಇಲ್ಲಿಗೆ ಬಂದು ಹೋಗುತ್ತದೆ. ಹತ್ತಾರು ಬಸ್ಸುಗಳ ಸಂಚಾರದ ಜತೆಗೆ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಹಾಗಿದ್ದರೂ ಇದರ ಅಭಿವೃದ್ಧಿಗೆ ಯಾರೂ ಮುಂದಾಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು. </p>.<p>ಸ್ಥಳೀಯರಾದ ಮೋಹನ ನಾಯ್ಕ ಮಾತನಾಡಿ, ಎನ್.ಡಬ್ಲ್ಯು.ಕೆ.ಆರ್.ಟಿ.ಸಿ ಅಡಿಯಲ್ಲಿ ಈ ಬಸ್ ನಿಲ್ದಾಣ ಕಾರ್ಯನಿರ್ವಹಣೆ ಮಾಡುತ್ತಿದೆ. ಬಸ್ ನಿಲ್ದಾಣದ ಒಳಗೂ ಹೊಂಡ, ಗುಂಡಿಗಳು ನಿರ್ಮಾಣವಾಗಿದ್ದು, ಗಣೇಶ ನಗರ ಭಾಗದಿಂದ ಒಳ ಹೋಗುವ ನಗರಸಭಾ ವ್ಯಾಪ್ತಿಯ ಜಾಗದಲ್ಲಿ ಪಾತಾಳವೇ ಸೃಷ್ಟಿಯಾಗಿದೆ. ಕಾರಣ ಇಲ್ಲಿಂದ ಓಡಾಡುವ ರಿಕ್ಷಾ, ಕಾರುಗಳು, ದ್ವಿಚಕ್ರ ವಾಹನ ಸವಾರರಿಗೂ ತೊಂದರೆಯಾಗಿದೆ. ಬಸ್ ಈ ಹೊಂಡ ಇಳಿದರೆ ದರ ಕೆಳ ಭಾಗ ನೆಲಕ್ಕೆ ಬಡಿಯುತ್ತದೆ. ಇಷ್ಟಾದರೂ ಹೊಂಡ ಮುಚ್ಚುವ ಕಾರ್ಯ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ನಗರಸಭೆಯನ್ನು ಕೇಳಿದರೆ ಸಾರಿಗೆ ಇಲಾಖೆಯತ್ತ, ಸಾರಿಗೆ ಇಲಾಖೆಯನ್ನು ಕೇಳಿದರೆ ನಗರಸಭೆಯತ್ತ ಬೊಟ್ಟು ಮಾಡುತ್ತ ಕಾಲಹರಣ ಮಾಡಲಾಗುತ್ತಿದೆ. ತ್ವರಿತವಾಗಿ ದುರಸ್ತಿ ಕಾರ್ಯ ಮಾಡದಿದ್ದರೆ ಪ್ರತಿಭಟನೆ ನಡೆಸಲಗುವುದು’ ಎಂದು ಎಚ್ಚರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಇಲ್ಲಿನ ಗಣೇಶನಗರದ ಬಳಿಯಿರುವ ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲಿ ಕೆರೆ ಅಗಲದಷ್ಟು ಹೊಂಡ ನಿರ್ಮಾಣವಾಗಿದೆ. ಇದು ಬಸ್ಗಳ ಸಂಚಾರಕ್ಕೆ ಕಂಟಕದ ಜತೆಗೆ ಜನರ ಜೀವಕ್ಕೂ ಅಪಾಯ ಆಹ್ವಾನ ನೀಡುತ್ತಿದೆ. </p>.<p>ಸೋಮವಾರ ಸ್ಥಳೀಯರು ಈ ದುರವಸ್ಥೆ ಖಂಡಿಸಿದ್ದಲ್ಲದೇ, ನಗರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>ಹಾವೇರಿ, ಹಾನಗಲ್ ಸೇರಿದಂತೆ ಬಯಲುಸೀಮೆ, ಉತ್ತರ ಕರ್ನಾಟಕ, ಹುಲೇಕಲ್ ಭಾಗದ ಸ್ಥಳೀಯ ಬಸ್ಸುಗಳು, ಗೋವಾ-ಪಣಜಿ, ಕಾರವಾರ ಹೀಗೆ ಅಂತರ್ ಜಿಲ್ಲೆ, ಹೊರ ರಾಜ್ಯಗಳಿಗೆ ತೆರಳುವ ಪ್ರತಿಯೊಂದು ಬಸ್ಸು ಇಲ್ಲಿಗೆ ಬಂದು ಹೋಗುತ್ತದೆ. ಹತ್ತಾರು ಬಸ್ಸುಗಳ ಸಂಚಾರದ ಜತೆಗೆ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಹಾಗಿದ್ದರೂ ಇದರ ಅಭಿವೃದ್ಧಿಗೆ ಯಾರೂ ಮುಂದಾಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು. </p>.<p>ಸ್ಥಳೀಯರಾದ ಮೋಹನ ನಾಯ್ಕ ಮಾತನಾಡಿ, ಎನ್.ಡಬ್ಲ್ಯು.ಕೆ.ಆರ್.ಟಿ.ಸಿ ಅಡಿಯಲ್ಲಿ ಈ ಬಸ್ ನಿಲ್ದಾಣ ಕಾರ್ಯನಿರ್ವಹಣೆ ಮಾಡುತ್ತಿದೆ. ಬಸ್ ನಿಲ್ದಾಣದ ಒಳಗೂ ಹೊಂಡ, ಗುಂಡಿಗಳು ನಿರ್ಮಾಣವಾಗಿದ್ದು, ಗಣೇಶ ನಗರ ಭಾಗದಿಂದ ಒಳ ಹೋಗುವ ನಗರಸಭಾ ವ್ಯಾಪ್ತಿಯ ಜಾಗದಲ್ಲಿ ಪಾತಾಳವೇ ಸೃಷ್ಟಿಯಾಗಿದೆ. ಕಾರಣ ಇಲ್ಲಿಂದ ಓಡಾಡುವ ರಿಕ್ಷಾ, ಕಾರುಗಳು, ದ್ವಿಚಕ್ರ ವಾಹನ ಸವಾರರಿಗೂ ತೊಂದರೆಯಾಗಿದೆ. ಬಸ್ ಈ ಹೊಂಡ ಇಳಿದರೆ ದರ ಕೆಳ ಭಾಗ ನೆಲಕ್ಕೆ ಬಡಿಯುತ್ತದೆ. ಇಷ್ಟಾದರೂ ಹೊಂಡ ಮುಚ್ಚುವ ಕಾರ್ಯ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ನಗರಸಭೆಯನ್ನು ಕೇಳಿದರೆ ಸಾರಿಗೆ ಇಲಾಖೆಯತ್ತ, ಸಾರಿಗೆ ಇಲಾಖೆಯನ್ನು ಕೇಳಿದರೆ ನಗರಸಭೆಯತ್ತ ಬೊಟ್ಟು ಮಾಡುತ್ತ ಕಾಲಹರಣ ಮಾಡಲಾಗುತ್ತಿದೆ. ತ್ವರಿತವಾಗಿ ದುರಸ್ತಿ ಕಾರ್ಯ ಮಾಡದಿದ್ದರೆ ಪ್ರತಿಭಟನೆ ನಡೆಸಲಗುವುದು’ ಎಂದು ಎಚ್ಚರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>