ಹೆದ್ದಾರಿ ಕಾಮಗಾರಿ ಅರೆಬರೆಯಾಗಿರುವುದು ಜನರನ್ನು ಹೈರಾಣಾಗಿಸಿದೆ. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಅದನ್ನು ಶೀಘ್ರ ಪರಿಸಿಹರಿಸಿಕೊಂಡು ಕಾಮಗಾರಿ ನಡೆಸಬೇಕು. ಸಂಚಾರಕ್ಕೆ ತೊಂದರೆಯಾಗಿರುವಲ್ಲಿ ತಾತ್ಕಾಲಿಕವಾಗಿಯಾದರೂ ಸಮಸ್ಯೆ ಪರಿಹಾರ ಮಾಡಬೇಕು.
-ರಮೇಶ ನಾಯ್ಕ, ಸ್ಥಳೀಯ ನಿವಾಸಿ
ಗುತ್ತಿಗೆ ಕಂಪನಿಯವರು ದಾಖಲಾತಿ ಸರಿಯಾಗಿ ಒದಗಿಸದ ಕಾರಣ ಈ ಹಿಂದೆ ಒಪ್ಪಿಗೆ ಸಿಕ್ಕಿರಲಿಲ್ಲ. ಪ್ರಸ್ತುತ ಅರಣ್ಯ ಇಲಾಖೆಯೇ ಮುಂದಾಗಿ ದಾಖಲೆ ಒದಗಿಸಿದ್ದು ತಿಂಗಳೊಳಗೆ ಪಾರೆಸ್ಟ್ ಕ್ಲಿಯರೆನ್ಸ್ ದೊರೆಯಬಹುದು.