<p><strong>ಕಾರವಾರ:</strong>ಅಲ್ಲೊಂದು ಮಹಾದೇವ ದೇವಸ್ಥಾನ. ಅದರ ಎದುರು ವಿಶಾಲವಾದ ಗದ್ದೆ. ಅದರ ಬದುಗಳಲ್ಲಿ 10ಕ್ಕೂ ಅಧಿಕ ವಿಶೇಷ ಕಲ್ಲುಗಳು.</p>.<p>ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿರ್ಜೆ ಎಂಬಲ್ಲಿರುವ ಈ ಕಲ್ಲುಗಳು ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರ ಕುತೂಹಲಕ್ಕೆ ಕಾರಣವಾಗಿದೆ. ಕಪ್ಪು ಕಲ್ಲುಗಳ ಮೇಲೆ ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ಮಾಸ್ತಿಗಲ್ಲು, ವೀರಗಲ್ಲುಗಳ ಮಾದರಿಯಲ್ಲೇ ಇವುಗಳಿದ್ದು,ನೋಡಲೂ ಆಕರ್ಷಕವಾಗಿವೆ.</p>.<p>ಗ್ರಾಮದ ಹಿರಿಯ 80 ವರ್ಷದ ಗಣಪತಿ ತಿಮ್ಮಾಗೌಡ ಹೇಳುವ ಪ್ರಕಾರ ಇವುಗಳನ್ನು ‘ದಿಬ್ಬಣಗಲ್ಲು’ಗಳೆಂದು ಕರೆಯಲಾಗುತ್ತದೆ. ‘ನಾನು ಸಣ್ಣವನಿದ್ದಾಗಿನಿಂದಲೂ ಈ ಕಲ್ಲುಗಳಿವೆ. ಎಷ್ಟು ವರ್ಷಗಳ ಇತಿಹಾಸ ಇದೆಯೋ ಗೊತ್ತಿಲ್ಲ. ಅದಕ್ಕೆ ಪೂಜೆ ಮಾಡುವುದಿಲ್ಲ. ಆದರೆ, ಮಹಾದೇವ ದೇವಸ್ಥಾನಕ್ಕೆ ಸೇರಿದ್ದು ಎಂದು ನಂಬಿದ್ದೇವೆ’ ಎಂದು ನೆನಪಿಸಿಕೊಂಡರು.</p>.<p>‘ನನ್ನ ಹಿರಿಯರು ಹೇಳಿದ ಪ್ರಕಾರ ಆ ಕಾಲದಲ್ಲಿ ಎರಡು ಮದುವೆಗಳ ದಿಬ್ಬಣಗಳು ಎದುರು– ಬದುರಾದವು. ಅದು ಅಶುಭ ಲಕ್ಷಣವಾಗಿತ್ತಂತೆ. ದೇವರ ಶಾಪದಿಂದ ಎಲ್ಲರೂ ಕಲ್ಲುಗಳಾದರಂತೆ’ ಎಂದು ನಕ್ಕರು.</p>.<p>ತೆರೆದ ವಾತಾವರಣದಲ್ಲಿರುವಕಲ್ಲುಗಳು ನಿಧಾನವಾಗಿ ಬಿಸಿಲು, ಮಳೆಗೆ ಕರಗುತ್ತಿವೆ. ಅವುಗಳಇತಿಹಾಸವೇನು, ಯಾವ ಘಟನೆಗೆ ಸಂಬಂಧಿಸಿದ್ದು ಎಂಬ ಬಗ್ಗೆ ಅಧ್ಯಯನ ಆಗಬೇಕು. ಅವುಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದು ಇತಿಹಾಸ ಪ್ರಿಯರಮನವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong>ಅಲ್ಲೊಂದು ಮಹಾದೇವ ದೇವಸ್ಥಾನ. ಅದರ ಎದುರು ವಿಶಾಲವಾದ ಗದ್ದೆ. ಅದರ ಬದುಗಳಲ್ಲಿ 10ಕ್ಕೂ ಅಧಿಕ ವಿಶೇಷ ಕಲ್ಲುಗಳು.</p>.<p>ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿರ್ಜೆ ಎಂಬಲ್ಲಿರುವ ಈ ಕಲ್ಲುಗಳು ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರ ಕುತೂಹಲಕ್ಕೆ ಕಾರಣವಾಗಿದೆ. ಕಪ್ಪು ಕಲ್ಲುಗಳ ಮೇಲೆ ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ಮಾಸ್ತಿಗಲ್ಲು, ವೀರಗಲ್ಲುಗಳ ಮಾದರಿಯಲ್ಲೇ ಇವುಗಳಿದ್ದು,ನೋಡಲೂ ಆಕರ್ಷಕವಾಗಿವೆ.</p>.<p>ಗ್ರಾಮದ ಹಿರಿಯ 80 ವರ್ಷದ ಗಣಪತಿ ತಿಮ್ಮಾಗೌಡ ಹೇಳುವ ಪ್ರಕಾರ ಇವುಗಳನ್ನು ‘ದಿಬ್ಬಣಗಲ್ಲು’ಗಳೆಂದು ಕರೆಯಲಾಗುತ್ತದೆ. ‘ನಾನು ಸಣ್ಣವನಿದ್ದಾಗಿನಿಂದಲೂ ಈ ಕಲ್ಲುಗಳಿವೆ. ಎಷ್ಟು ವರ್ಷಗಳ ಇತಿಹಾಸ ಇದೆಯೋ ಗೊತ್ತಿಲ್ಲ. ಅದಕ್ಕೆ ಪೂಜೆ ಮಾಡುವುದಿಲ್ಲ. ಆದರೆ, ಮಹಾದೇವ ದೇವಸ್ಥಾನಕ್ಕೆ ಸೇರಿದ್ದು ಎಂದು ನಂಬಿದ್ದೇವೆ’ ಎಂದು ನೆನಪಿಸಿಕೊಂಡರು.</p>.<p>‘ನನ್ನ ಹಿರಿಯರು ಹೇಳಿದ ಪ್ರಕಾರ ಆ ಕಾಲದಲ್ಲಿ ಎರಡು ಮದುವೆಗಳ ದಿಬ್ಬಣಗಳು ಎದುರು– ಬದುರಾದವು. ಅದು ಅಶುಭ ಲಕ್ಷಣವಾಗಿತ್ತಂತೆ. ದೇವರ ಶಾಪದಿಂದ ಎಲ್ಲರೂ ಕಲ್ಲುಗಳಾದರಂತೆ’ ಎಂದು ನಕ್ಕರು.</p>.<p>ತೆರೆದ ವಾತಾವರಣದಲ್ಲಿರುವಕಲ್ಲುಗಳು ನಿಧಾನವಾಗಿ ಬಿಸಿಲು, ಮಳೆಗೆ ಕರಗುತ್ತಿವೆ. ಅವುಗಳಇತಿಹಾಸವೇನು, ಯಾವ ಘಟನೆಗೆ ಸಂಬಂಧಿಸಿದ್ದು ಎಂಬ ಬಗ್ಗೆ ಅಧ್ಯಯನ ಆಗಬೇಕು. ಅವುಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದು ಇತಿಹಾಸ ಪ್ರಿಯರಮನವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>